For the best experience, open
https://m.hosakannada.com
on your mobile browser.
Advertisement

Viral Video: ರೈಲಲ್ಲಿ ಹುಡುಗನನ್ನು ಬಾತ್ ರೂಮ್'ಗೆ ಎಳೆದೊಯ್ದು ಲಾಕ್ ಮಾಡಿಕೊಂಡ ಮಂಗಳಮುಖಿ !! ಮುಂದಾಗಿದ್ದು ?

Viral Video: ಮಂಗಳಮುಖಿಯೊಬ್ಬಳು ಕಾಲೇಜು ಹುಡುಗರೊಂದಿಗೆ ಹುಡುಗಾಟವಾಡಿ, ಅಸಭ್ಯವಾಗಿ ವರ್ತಿಸಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್
01:28 PM Apr 05, 2024 IST | ಸುದರ್ಶನ್
UpdateAt: 01:31 PM Apr 05, 2024 IST
viral video  ರೈಲಲ್ಲಿ ಹುಡುಗನನ್ನು ಬಾತ್ ರೂಮ್ ಗೆ ಎಳೆದೊಯ್ದು ಲಾಕ್ ಮಾಡಿಕೊಂಡ ಮಂಗಳಮುಖಿ    ಮುಂದಾಗಿದ್ದು

Viral Video: ರೈಲಿನೊಳಗೆ ಹಲವರು ಪ್ರಯಾಣಿಕರೊಂದಿಗೆ ಹಣವನ್ನು ಕೇಳುತ್ತಾ, ಭಿಕ್ಷೆ ಬೇಡುತ್ತಾ ಬರುತ್ತಾರೆ. ಅದರಲ್ಲಿ ಮಂಗಳಮುಖಿಯರು ಕೂಡ ಇದ್ದಾರೆ. ಕೆಲವರು ತಮ್ಮ ಪ್ರತಿಭೆಗಳ ಮೂಲಕ ಹಣವನ್ನು ಕೇಳಿದರೆ ಇನ್ನು ಕೆಲವರು ಅಸಭ್ಯವಾಗಿ ವರ್ತಿಸಿ ರಂಪಾಟ ಮಾಡುತ್ತಾರೆ. ಅದರಲ್ಲಂತೂ ಹಣ ಕೊಡದಿದ್ದರೆ ಪುರುಷಲ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿ ಎಲ್ಲರ ಮುಂದೆ ಮುಜುಗರವನ್ನುಂಟು ಮಾಡುವುದೂ ಉಂಟು. ಅಂತೆಯೇ ಇದೀಗ ಇಲ್ಲೊಂದೆಡೆ ರೈಲಿನಲ್ಲಿ ಮಂಗಳಮುಖಿಯೊಬ್ಬಳು ಕಾಲೇಜು ಹುಡುಗರೊಂದಿಗೆ ಹುಡುಗಾಟವಾಡಿ, ಅಸಭ್ಯವಾಗಿ ವರ್ತಿಸಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

Advertisement

ಇದನ್ನೂ ಓದಿ: Aishwarya Salimath: ವಯನಾಡಿನಲ್ಲಿ ಪತಿ ಜೊತೆ ಪ್ರವಾಸ ಕೈಗೊಂಡ ರಾಮಾಚಾರಿ ಖ್ಯಾತಿಯ ಐಶ್ವರ್ಯ ಸಾಲಿಮಠ : ವೈರಲ್ ಆಗುತ್ತಿವೆ ರೋಮ್ಯಾಂಟಿಕ್ ಫೋಟೋಗಳು

ಹೌದು, ರೈಲಲ್ಲಿ ಮಂಗಳಮುಖಿಯೊಬ್ಬಳು(Mangalamuki) ಯುವಕನೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ(Viral Video) ರೈಲಿನ ಒಳಗೆ ಕೆಲವು ಯುವಕರು ಬಾತ್‌ರೂಮ್ ಬಾಗಿಲಿನ ಬಳಿ ನಿಂತಿದ್ದಾರೆ. ಅಲ್ಲಿ ಓರ್ವ ಮಂಗಳಮುಖಿ ಕೈ ಚಪ್ಪಾಳೆ ತಟ್ಟುತ್ತಾ ಯುವಕರ ಬಳಿಕ ಹಣ ಕೇಳುತ್ತಾಳೆ. ಆದರೆ, ಅಷ್ಟರಲ್ಲಿ ಏನಾಯಿತೋ ಬಾತ್‌ರೂಂ ಪಕ್ಕದಲ್ಲೇ ನಿಂತಿದ್ದ ಹುಡುಗನನ್ನು ಬಲವಂತವಾಗಿ ಒಳಗಡೆ ಎಳೆದುಕೊಂಡು ಲಾಕ್ ಮಾಡಿಕೊಳ್ಳುತ್ತಾಳೆ. ಹೊರಗಡೆ ಇದ್ದ ಕೆಲವು ಯುವಕರು ಎಷ್ಟೇ ಬಡಿದರೂ ಬಾಗಿಲು ತೆಗೆಯುವುದೇ ಇಲ್ಲ. ಸ್ವಲ್ಪ ಹೊತ್ತಿನ ನಂತರ ಪ್ಯಾಂಟ್ ಸರಿಮಾಡಿಕೊಂಡು ಯುವಕ ಹೊರಬರುತ್ತಾನೆ. ಸ್ವಲ್ಪ ಸಮಯದ ಬಳಿಕ ಮಂಗಳಮುಖಿಯು ಚಪ್ಪಾಳೆ ಬಡಿಯುತ್ತಾ ಹೊರಬಂದು ಮತ್ತೊಂದು ಬೋಗಿಗೆ ಓಡಿ ಹೋಗುತ್ತಾಳೆ.

Advertisement

ಇದನ್ನೂ ಓದಿ: Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತೀರ್ಥಹಳ್ಳಿಯ ಬಿಜೆಪಿ ಮುಖಂಡ ಎನ್‌ಐಎ ವಶಕ್ಕೆ

ಈ ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ಬಾರಿ ಕಮೆಂಟ್ ಹಾಕುತ್ತಿದ್ದಾರೆ. ಅಲ್ಲದೆ ಕೆಲವರು ಇದರ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಇದು ಗಂಭೀರವಾಗಿ ಪರಿಗಣಿಸುವಂತಹ ವಿಚಾರ, ಎಲ್ಲ ಸಂದರ್ಭದಲ್ಲಿ ಇದು ಸಲ್ಲದು ಎಂದಿದ್ದಾರೆ. ಇನ್ನು ಕೆಲವರು ಇದರ ಬಗ್ಗೆ ಕ್ರಮವನ್ನು ಕೈಗೊಳ್ಳಿ, ಯಾರು ಹೇಳುವವರು ಕೇಳುವವರು ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement