For the best experience, open
https://m.hosakannada.com
on your mobile browser.
Advertisement

Uttara Pradesh: ಜಮೀನಿಗಾಗಿ ಸಹೋದರನ ಮೇಲೆ ಟ್ರ್ಯಾಕ್ಟರ್‌ ಹರಿಸಿ ಹತ್ಯೆ ಯತ್ನ

Uttara Pradesh: ಆಸ್ತಿಗಾಗಿ ನಡೆದ ಗಲಾಟೆಯೊಂದು ತನ್ನ ಸಹೋದರನೆಂದು ಕೂಡಾ ಲೆಕ್ಕಿಸದೆ ಟ್ರ್ಯಾಕ್ಟರ್‌ ಹರಿಸಿ ಕೊಲೆ ಯತ್ನಕ್ಕೆ ಯತ್ನಿಸಿದ್ದಾನೆ ಇನ್ನೋರ್ವ ಸಹೋದರ
12:36 PM Mar 30, 2024 IST | ಸುದರ್ಶನ್
UpdateAt: 12:48 PM Mar 30, 2024 IST
uttara pradesh  ಜಮೀನಿಗಾಗಿ ಸಹೋದರನ ಮೇಲೆ ಟ್ರ್ಯಾಕ್ಟರ್‌ ಹರಿಸಿ ಹತ್ಯೆ ಯತ್ನ

Uttara Pradesh: ಹಣ, ಆಸ್ತಿಗಾಗಿ ಯಾವುದೇ ಸಂಬಂಧಗಳು ಕೂಡಾ ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ಕೆಲವೊಂದು ಘಟನೆಗಳು ನಡೆಯುತ್ತದೆ. ಈ ಆಸ್ತಿಗಾಗಿ ನಡೆದ ಗಲಾಟೆಯೊಂದು ತನ್ನ ಸಹೋದರನೆಂದು ಕೂಡಾ ಲೆಕ್ಕಿಸದೆ ಟ್ರ್ಯಾಕ್ಟರ್‌ ಹರಿಸಿ ಕೊಲೆ ಯತ್ನಕ್ಕೆ ಯತ್ನಿಸಿದ್ದಾನೆ ಇನ್ನೋರ್ವ ಸಹೋದರ. ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗಿದೆ.

Advertisement

ಇದನ್ನೂ ಓದಿ: HSRP: ಮೇ ತಿಂಗಳ ಬಳಿಕವೂ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ಏನಾಗುತ್ತೆ ?!

https://twitter.com/i/status/177366496888318779

Advertisement

ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಸಹೋದರರಾದ ರಾಮ್‌ ಕುಮಾರ್‌ ಮತ್ತು ಓಂ ಕುಮಾರ್‌ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಲೇ ಇರುತ್ತಿತ್ತು. ಆದರೆ ಕಳೆದ ಗುರುವಾರ ಮತ್ತೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಈ ವೇಳೆ ಆರೋಪಿ ರಾಮ್‌ಕುಮಾರ್‌ ತನ್ನ ಸಹೋದರ ಓಂ ಕುಮಾರ್‌ ಮೇಲೆ ಟ್ರ್ಯಾಕ್ಟರ್‌ ಹರಿಸಿ ಹತ್ಯೆ ಯತ್ನಿಸಿದ್ದಾರೆ. ಟ್ರ್ಯಾಕ್ಟರ್‌ನ ಅಡಿಗೆ ಬಿದ್ದ ಸಹೋದರ ಹೊರ ಬರಲೆಂದು ಪ್ರಯತ್ನ ಪಡುತ್ತಿರುವಾಗಲೇ ರಾಮ್‌ಕುಮಾರ್‌ ಮತ್ತೆ ಮತ್ತೆ ಟ್ರ್ಯಾಕ್ಟರನ್ನು ಹಿಂದೆ ಮುಂದೆ ಚಲಾಯಿಸಿದ್ದಾನೆ.

ಇದನ್ನೂ ಓದಿ: Udupi (Kaup): ಮಹಿಳಾ ಸಿಬ್ಬಂದಿ ಪೊಲೀಸ್‌ ಕ್ವಾಟ್ರಸ್‌ನಲ್ಲಿ ನೇಣಿಗೆ ಶರಣು

ಆದರೆ ಸಹೋದರ ಓಂ ಕುಮಾರ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವೇಳೆ ರಕ್ಷಣೆಗೆಂದು ಬಂದ ಓಂ ಕುಮಾರ್‌ ಪತ್ನಿ ಪವಿತ್ರಗೂ ಗಾಯವಾಗಿದೆ ಎಂದು ವರದಿಯಾಗಿದೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಆರೋಪಿ ಮೇಲೆ ಕೇಸು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Advertisement
Advertisement