Uppinangady: ಮತದಾನಕ್ಕೆಂದು ಬಸ್ನಲ್ಲಿ ಬರುತ್ತಿದ್ದ ಹಿಂದೂ ಯುವತಿಗೆ ಅನ್ಯಕೋಮಿನ ಯುವಕನಿಂದ ಕಿರುಕುಳ; ದೂರು ದಾಖಲು
Uppinangady: ಮಂಗಳೂರಿಗೆ ಖಾಸಗಿ ಬಸ್ನಲ್ಲಿ ಬರುತ್ತಿದ್ದ ಹಿಂದೂ ಯುವತಿಗೆ ಅನ್ಯಕೋಮಿನ ಯುವಕನೋರ್ವ ಕಿರುಕುಳ, ಯುವತಿಯಿಂದ ದೂರು ದಾಖಲು, ಪೊಲೀಸರಿಂದ ತನಿಖೆ
03:14 PM Apr 24, 2024 IST
|
ಸುದರ್ಶನ್
UpdateAt: 03:18 PM Apr 24, 2024 IST
Uppinangady: ಮತದಾನಕ್ಕೆಂದು ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ನಲ್ಲಿ ಬರುತ್ತಿದ್ದ ಹಿಂದೂ ಯುವತಿಗೆ ಅನ್ಯಕೋಮಿನ ಯುವಕನೋರ್ವ ಕಿರುಕುಳ ನೀಡಿದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆಯೊಂದು ನಡೆದಿದೆ.
Advertisement
ಅನ್ಯಕೋಮಿನ ಸಹಪ್ರಯಾಣಿಕ ಹಿಂದೂ ಯುವತಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಯುವತಿ ರಕ್ಷಣೆಗಾಗಿ ಬಸ್ ಚಾಲಕನ ಮೊರೆ ಹೋಗಿದ್ದು, ಆದರೆ ಈ ವೇಳೆ ಯಾವುದೇ ಸ್ಪಂದನೆ ದೊರೆಯದಿದ್ದು, ನಂತರ ಯುವತಿ ಯುವಕನ ಆಧಾರ್ ಕಾರ್ಡ್ ಕಿತ್ತು, ಯುವಕ ಬಸ್ ನಿಧಾನವಾಗುತ್ತಿದ್ದಂತೆ ಬಸ್ ಕಿಟಕಿಯಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
Advertisement
ಆಧಾರ್ಕಾರ್ಡ್ನಲ್ಲಿ ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಇಬ್ರಾಹಿಂ ಎಂಬುವವರ ಮಹಮ್ಮದ್ ಅಜೀಂ ಎಂಬ ಮಾಹಿತಿ ಇದೆ. ಯುವತಿ ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ಕೇಸು ದಾಖಲು ಮಾಡಿ, ತನಿಖೆ ನಡೆಸುತ್ತಿರುವ ಕುರಿತು ವರದಿಯಾಗಿದೆ.
Advertisement
Next Article