For the best experience, open
https://m.hosakannada.com
on your mobile browser.
Advertisement

Sachin Tendulkar : ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮನೆಯ ಮುಂದೆ ಶಾಸಕರಿಂದ ಪ್ರತಿಭಟನೆ!!!

ಅಷ್ಟಕ್ಕೂ ಕ್ರಿಕೆಟ್ ದೇವರು ಖ್ಯಾತಿಯ ಭಾರತ ರತ್ನ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮನೆಯ ಮುಂದೆ ಪ್ರತಿಭಟನೆ ನಡೆಯಲು ಕಾರಣವೇನು
02:56 PM Aug 31, 2023 IST | ವಿದ್ಯಾ ಗೌಡ
UpdateAt: 02:56 PM Aug 31, 2023 IST
sachin tendulkar   ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮನೆಯ ಮುಂದೆ ಶಾಸಕರಿಂದ ಪ್ರತಿಭಟನೆ
Image credit: Vistara news
Advertisement

Sachin Tendulkar: ಕ್ರಿಕೆಟ್ ಲೋಕದ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್ ಮನೆ ಮುಂದೆ ಶಾಸಕರಿಂದ ಪ್ರತಿಭಟನೆ ನಡೆಯುತ್ತಿದೆ. ಅಷ್ಟಕ್ಕೂ ಕ್ರಿಕೆಟ್ ದೇವರು ಖ್ಯಾತಿಯ ಭಾರತ ರತ್ನ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮನೆಯ ಮುಂದೆ ಪ್ರತಿಭಟನೆ ನಡೆಯಲು ಕಾರಣವೇನು ?

Advertisement

ಸಚಿನ್ ತೆಂಡೂಲ್ಕರ್ ಆನ್‌ಲೈನ್ ಗೇಮಿಂಗ್ ಆ್ಯಪ್​ಗಳ (oOnline Gaming) ಬಗೆಗಿನ ಜಾಹೀರಾತಿನಲ್ಲಿ ನಟಿಸಿದ್ದಾರೆ. ಸಚಿನ್ ಅವರ ಈ ನಿರ್ಧಾರದಿಂದ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರು
ಅಸಮಾಧಾನಗೊಂಡಿದ್ದು, ಸಚಿನ್ ನಟಿಸಿರುವ ಜಾಹೀರಾತು ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ, ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಶಾಸಕ ಬಚ್ಚು ಕಡು (Bachchu Kadu) ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದು, ಪರಿಸ್ಥಿತಿ ನಿಯಂತ್ರಿಸಿದರು.

ಇನ್ನು ಈ ಬಗ್ಗೆ ಮಾತನಾಡಿರುವ ಬಚ್ಚು ಕಡು, ಯಾವುದನ್ನು ಜಾಹೀರಾತು ಮಾಡಬೇಕು ಮತ್ತು ಯಾವುದನ್ನು ನೀಡಬಾರದು ಎಂಬುದಕ್ಕೆ ಭಾರತ ರತ್ನ ನೀತಿ ಸಂಹಿತೆ ಹೊಂದಿದೆ. ಈ ಪ್ರತಿಭಟನೆಗೆ ಸಚಿನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಬಚ್ಚು ಕಡು ಅವರೇ ನೇರವಾಗಿ ನೋಟಿಸ್ ಕಳುಹಿಸಲು ನಿರ್ಧರಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಸಚಿನ್​ಗೆ ಲೀಗಲ್ ನೋಟಿಸ್ ಕಳುಹಿಸಲಾಗುವುದು ಎಂದು ಬಚ್ಚು ಕಡು ಹೇಳಿದ್ದಾರೆ.

Advertisement

ಇದನ್ನೂ ಓದಿ: Mangaluru: ಮಂಗಳೂರಿನಲ್ಲಿ ಆನ್'ಲೈನ್ ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ! ಲಕ್ಷ ಲಕ್ಷ ಹಣ ಸ್ವಾಹ!!!

Advertisement
Advertisement
Advertisement