ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Political News: ಬಡವರ ಹೆಸರಲ್ಲಿ INDIA ಒಕ್ಕೂಟ ಕುಟುಂಬ ರಾಜಕಾರಣ ಮಾಡುತ್ತಿದೆ: ಪ್ರಧಾನಿ ಮೋದಿ

11:12 PM Feb 23, 2024 IST | ಸುದರ್ಶನ್
UpdateAt: 11:12 PM Feb 23, 2024 IST

ವಾರಣಾಸಿ: ಪ್ರತಿಪಕ್ಷಗಳ INDIA ಒಕ್ಕೂಟವು ಅವರ ಕುಟುಂಬಗಳ ಬೆಳವಣಿಗೆಗೆ ಮಾತ್ರ ಕೆಲಸ ಮಾಡುತ್ತಿದೆ, ದೇಶದ ಜನರ ಕಲ್ಯಾಣಕ್ಕಾಗಿ ಅಲ್ಲ. ಬಡವರ ಕಲ್ಯಾಣದ ಹೆಸರಿನಲ್ಲಿ, INDIA ನಾಯಕರು ಕುಟುಂಬ ರಾಜಕೀಯ ಮಾಡುತ್ತಾರೆ ಎಂದು ಸಂತ ರವಿದಾಸ್ ಅವರ 647 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯ ಕಾರ್ಯಕ್ರಮದಲ್ಲಿ ತಿಳಿಸಿದರು.

Advertisement

"ಇಂದು ದೇಶದ ಪ್ರತಿಯೊಬ್ಬ ದಲಿತ ಮತ್ತು ಪ್ರತಿಯೊಬ್ಬ ಹಿಂದುಳಿದ ವ್ಯಕ್ತಿಯು ಇನ್ನೂ ಒಂದು ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಮ್ಮ ದೇಶದಲ್ಲಿ, ಜಾತಿಯ ಹೆಸರಿನಲ್ಲಿ ಪ್ರಚೋದಿಸುವ ಮತ್ತು ಹೋರಾಡುವಲ್ಲಿ ನಂಬಿಕೆಯಿಡುವ INDIA ಮೈತ್ರಿಕೂಟದ ನಾಯಕರು, ದಲಿತರು ಮತ್ತು ವಂಚಿತರ ಪ್ರಯೋಜನಕ್ಕಾಗಿ ರೂಪಿಸಲಾದ ಯೋಜನೆಗಳನ್ನು ವಿರೋಧಿಸುತ್ತಾರೆ ಎಂದು INDIA ಮೈತ್ರಿಕೂಟದ ವಿರುದ್ಧ ಹರಿಹಾಯ್ದರು.

ವಂಚಿತ ಸಮಾಜಕ್ಕೆ ಆದ್ಯತೆ ನೀಡುವ ಮೂಲಕ ಮಾತ್ರ ಸಮಾನತೆ ಬರುತ್ತದೆ ಮತ್ತು ಸಮಾಜದ ಪ್ರತಿಯೊಂದು ವರ್ಗಕ್ಕೂ ಸೇವೆ ಸಲ್ಲಿಸಲು ಮತ್ತು ಅವರ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು. "ಕಳೆದ 10 ವರ್ಷಗಳಲ್ಲಿ, ಅಭಿವೃದ್ಧಿಯಿಂದ ದೂರವಿದ್ದ ಜನರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲಾಗಿದೆ. ಈ ಹಿಂದೆ ಬಡವರನ್ನು ಕೊನೆಯವರು ಎಂದು ಪರಿಗಣಿಸಲಾಗುತ್ತಿತ್ತು, ಇಂದು ಅವರಿಗಾಗಿ ದೊಡ್ಡ ಯೋಜನೆಗಳನ್ನು ರೂಪಿಸಲಾಗಿದೆ "ಎಂದು ಅವರು ಹೇಳಿದರು.

Advertisement

Advertisement
Advertisement
Next Article