Hampi Utsav: ಕರ್ನಾಟಕ ಕಾಂಗ್ರೆಸ್ ಸರಕಾರದ ಉದಾರ ನೀತಿ ಮುಂದುವರಿಕೆ; ಬಾಡಿಗೆ ಕಟ್ಟುವುದು ಬೇಡ ಎಂದ ಜಮೀರ್ ಅಹ್ಮದ್!!
11:15 AM Feb 05, 2024 IST | ಹೊಸ ಕನ್ನಡ
UpdateAt: 11:18 AM Feb 05, 2024 IST
BZ Zameer Ahmed Khan: ವಸತಿ ಖಾತೆ ಸಚಿವ ಮತ್ತು ಹಂಪಿ ಉತ್ಸವದ ಉಸ್ತುವಾರಿ ಬಿಜೆಡ್ ಜಮೀರ್ ಅಹ್ಮದ್ ಖಾನ್ ಅವರು ಹಂಪಿ ಉತ್ಸವದ (Hampi Utsav) ಸಂದರ್ಭದಲ್ಲಿ ಊಟದ ಸ್ಟಾಲ್ಗಳನ್ನು ಹಾಕಿದವರು ಜಮೀರ್ ಅವರ ಆಗ್ರಹದ ಮೇಲೆ ಊತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಇದೀಗ ಅವರು ಕಡಿಮೆ ದರದಲ್ಲಿ ಊಟ ನೀಡಿದ್ದರಿಂದ ನಷ್ಟ ಅನುಭವಿಸಿದ್ದು, ಇದನ್ನು ಅವರು ಜಮೀರ್ ಬಳಿ ಹೇಳಿಕೊಂಡಿದ್ದು, ಸಚಿವರು ವೇದಿಕೆಯ ಮೇಲೆ ಭಾಷಣ ಮಾಡುವ ಸಂದರ್ಭದಲ್ಲಿ ಖುಷಿಯ ಸುದ್ದಿಯೊಂದನ್ನು ಇವರಿಗೆ ನೀಡಿದ್ದಾರೆ.
Advertisement
ಊಟದ ಸ್ಟಾಲ್ಗಳನ್ನು ಹಾಕಿದವರು ಬಾಡಿಕೆ ಕಟ್ಟಬೇಕಿಲ್ಲ ಅಂತ ಘೋಷಣೆ ಮಾಡಿದ್ದಾರೆ. ಬಾಡಿಗೆಯನ್ನು ಯಾರಿಂದಲೂ ಸಂಗ್ರಹಿಸಬಾರದು ಎಂದು ಅವರು ವಿಜಯನಗರದ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೂಡಾ ನೀಡಿದರು.
Advertisement
Advertisement