For the best experience, open
https://m.hosakannada.com
on your mobile browser.
Advertisement

Belagavi: BJP ಪ್ರಬಲ ನಾಯಕನಿಗೆ ಚಾಕು ಇರಿತ - ಕಾಂಗ್ರೆಸ್ ನಾಯಕನ ಕೈವಾಡ ?!

06:56 AM Dec 05, 2023 IST | ಹೊಸ ಕನ್ನಡ
UpdateAt: 06:59 AM Dec 05, 2023 IST
belagavi  bjp ಪ್ರಬಲ ನಾಯಕನಿಗೆ ಚಾಕು ಇರಿತ   ಕಾಂಗ್ರೆಸ್ ನಾಯಕನ ಕೈವಾಡ
Advertisement

Belagavi Prithvi Singh: ಬೆಳಗಾವಿಯಲ್ಲಿ ಬಿಜೆಪಿಯ ಪ್ರಬಲ ಮುಖಂಡರೊಬ್ಬರಿಗೆ ಚಾಕುವಿನಿಂದ ಇರಿದು ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಈ ಪ್ರಕರಣದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಶಂಕಿಸಲಾಗಿದೆ.

Advertisement

ಹೌದು, ಬೆಳಗಾವಿ(Belagavi) ಜಿಲ್ಲೆಯಯ ಬಿಜೆಪಿ (BJP SC Morcha) ಎಸ್‌ಸಿ ಮೋರ್ಚಾ ಸದಸ್ಯ ಪೃಥ್ವಿ ಸಿಂಗ್ (Belagavi Prithvi Singh) ಅವರ ಮೇಲೆ ಗುಂಪೊಂದು ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಸೋಮವಾರ ಸಂಜೆ ನಡೆದಿದ್ದು ಇದರ ಹಿಂದೆ ಕಾಂಗ್ರೆಸ್ MLC ಚನ್ನರಾಜ ಹಟ್ಟಿಹೊಳಿ (Channaraj Hattiholi) ಕೈವಾಡ ಇದೆ ಎಂದು ಶಂಕಿಸಲಾಗಿದೆ.

Advertisement

ಅಂದಹಾಗೆ ಸದ್ಯ ಹಲ್ಲೇಗೀಡಾದ ನಾಯಕನನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ನಾಯಕರ ದಂಡು ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬರುತ್ತಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಚಿಕನ್ ಹಾಕದೆ ಚಿಕನ್ ಬಿರಿಯಾನಿ ಕೊಟ್ಟ ಹೊಟೇಲ್ ಮಾಲೀಕ ಕೋರ್ಟ್ ಮೆಟ್ಟಿಲೇರಿ, ಲಾಯರ್ ಇಲ್ಲದೆ ಭಾರೀ ದಂಡ ಕಕ್ಕಿಸಿದ ಗ್ರಾಹಕ !!

Advertisement
Advertisement
Advertisement