ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ajith Hanumakkanavr: ನಿರೂಪಕ ಅಜಿತ್ ಹನುಮಕ್ಕನವರ್' ಗೆ ಕಾಂಗ್ರೆಸ್ ನಿಂದ MP ಟಿಕೆಟ್ ?!

Ajith Hanumakkanavr: ಡಿಕೆ ಶಿವಕುಮಾರ್ ಅವರು ಖಾಸಗಿ ವಾಹಿನಿಯ ನಿರೂಪಕರಾದ, ರಾಷ್ಟ್ರೀಯವಾದಿ ಎಂದು ಗುರುತಿಸಿಕೊಂಡಿರುವ ಅಜಿತ್ ಹನುಮಕ್ಕನವರ್ ಅವರಿಗೆ ಟಿಕೆಟ್ ಆಫರ್ .
12:46 PM Apr 11, 2024 IST | ಸುದರ್ಶನ್
UpdateAt: 12:48 PM Apr 11, 2024 IST
Advertisement

Ajith Hanumakkanavar: ದೇಶಾದ್ಯಂತ ಲೋಕಸಭಾ ಚುನಾವಣೆಯ ಚಟುವಟಿಕೆಗಳು ಚುರುಕಾಗಿವೆ. ಪಕ್ಷಗಳು ಹಂತ ಹಂತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ. ಕೆಲವು ಕ್ಷೇತ್ರಗಳಿಗಂತೂ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಆಗಿವೆ. ರಾಜ್ಯದಲ್ಲಿಯೂ ಕೂಡ NDA ಮೈತ್ರಿ ಪಕ್ಷಗಳು ಹಾಗೂ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ ಈ ಬೆನ್ನಲ್ಲೇ ಕಾಂಗ್ರೆಸ್ನ ಅಧ್ಯಕ್ಷ ಡಿಕೆ ಶಿವಕುಮಾರ್(DK Shivkumar)ಅವರು ಖಾಸಗಿ ವಾಹಿನಿಯ ನಿರೂಪಕರಾದ, ರಾಷ್ಟ್ರೀಯವಾದಿ ಎಂದು ಗುರುತಿಸಿಕೊಂಡಿರುವ ಅಜಿತ್ ಹನುಮಕ್ಕನವರ್(Ajith Hanumakkanavar) ಅವರಿಗೆ ಟಿಕೆಟ್ ಆಫರ್ ನೀಡಿದ್ದಾರೆ.

Advertisement

ಇದನ್ನೂ ಓದಿ: Actor Suraj: ನಿಶ್ಚಿತಾರ್ಥದಂದೇ ಭೀಕರ ಅಪಘಾತದಲ್ಲಿ ಸಾವಿಗೀಡಾದ ನಟ

ಹೌದು, ಅಜಿತ್ ಹನುಮಕ್ಕನವರ್ ಅವರು ನಿರೂಪಕರಾಗಿ ಕಾರ್ಯನಿರ್ವಹಿಸುವ ಖಾಸಗಿ ವಾಹಿನಿಯಲ್ಲಿ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಭಾಗವಹಿಸಿದ ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಧಾರವಾಡ ಲೋಕಸಭಾ(Dharawada Lokasabha) ಹಾಗೂ ಹಾವೇರಿ ಲೋಕಸಭಾದಲ್ಲಿ ನಾವು ಕಾಂಗ್ರೆಸ್ ನಿಂದ ಸಾಮಾನ್ಯ ಕಾರ್ಯಕರ್ತರನ್ನು ಕಣಕ್ಕಿಳಿಸಿದ್ದೇವೆ. ಆದರೆ ಧಾರವಾಡ ಕ್ಷೇತ್ರದಿಂದ ಕಣಕ್ಕಿಳಿಸಲು ನಾನು ನಿಮ್ಮನ್ನು ಹುಡುಕುತ್ತಿದ್ದೆ, ನೀವು ನನ್ನ ಕೈಗೆ ಸಿಗಲೇ ಇಲ್ಲ ಎಂದು ಹೇಳಿ ಬಿಗ್ ಆಫರ್ ನೀಡಿದ್ದಾರೆ.

Advertisement

ಇದನ್ನೂ ಓದಿ: SSLC Marks: ಮಾರ್ಕ್ಸ್‌ ಕೊಡದಿದ್ದರೆ ತಾತನ ಬಳಿ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ-ವಿದ್ಯಾರ್ಥಿ ಬ್ಲಾಕ್‌ಮೇಲ್‌

ಬಳಿಕ ಮಾತನಾಡಿದ ಅವರು ನೀವು ನಿಜವಾಗಿಯೂ ಏನನ್ನಾದರೂ ಎದುರಿಸುತ್ತೀರಿ, ಒಳ್ಳೆಯ ಫೇಸ್ ಮಾಡುತ್ತೀರಿ ಎಂದು ನನಗೆ ನಂಬಿಕೆ ಇದೆ. ಆದರೆ ನೀವು ನನ್ನ ಕೈಗೆ ಸಿಗುತ್ತಿಲ್ಲ, ನೀವು ಬಿಜೆಪಿ ಕಡೆಗೆ ಮುಖ ಮಾಡುತ್ತಿದ್ದೀರಿ. ಅಲ್ಲಿ ಯಾರಿಗೂ ಕಾಲವಿಲ್ಲ, ಏನೇ ಕೆಲಸ ಮಾಡಿದರೂ, ಏನೇ ಸಾಧನೆ ಮಾಡಿದರು ಕೊನೆಗೆ ಅವರನ್ನು ಮೂಲೆ ಗುಂಪು ಮಾಡುತ್ತಾರೆ. ನಿಮ್ಮನ್ನು ಹಾಗೆ ಮಾಡಬಹುದು ಎಂದು ಕಿಚಾಯಿಸಿಬಿಟ್ಟಿದ್ದಾರೆ. ಇದಕ್ಕೆ ಅಜಿತ್ ಹನುಮಕ್ಕನವರ್ ಕೂಡ ನಗುತ್ತಲೇ ಸುಮ್ಮನಾಗಿದ್ದಾರೆ.

Advertisement
Advertisement