ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bengaluru Crime News: ಬೆಳಗ್ಗೆ ಕೆಲಸಕ್ಕೆ ಸೇರಿ, ಮಧ್ಯಾಹ್ನ ಮಾಲೀಕನ ಮಗಳ ಕಿಡ್ನ್ಯಾಪ್‌ ಮಾಡಿದ ವ್ಯಕ್ತಿ!!

11:21 AM Jan 04, 2024 IST | ಹೊಸ ಕನ್ನಡ
UpdateAt: 12:25 PM Jan 04, 2024 IST
Advertisement

Bengaluru News: ವ್ಯಕ್ತಿಯೊಬ್ಬ ಫರ್ನಿಚರ್‌ ಅಂಗಡಿಯೊಂದಕ್ಕೆ ಕೆಲಸಕ್ಕೆ ಸೇರಿದ್ದು, ಅದೇ ದಿನ ಮಧ್ಯಾಹ್ನ ಮಾಲೀಕನ ನಾಲ್ಕು ವರ್ಷದ ಮಗಳನ್ನು ಅಪಹರಿಸಿಕೊಂಡು(Kidnap Case) ಹೋದ ಘಟನೆಯೊಂದು ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯ ಕಾವೇರಿಪುರದಲ್ಲಿ ಇತ್ತೀಚೆಗೆ ನಡೆದಿದೆ. ಈ ಘಟನೆ ಡಿ.28 ರಂದು ನಡೆದಿದೆ. ಆರೋಪಿ ವಸೀಂ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

Advertisement

ಆರೋಪಿ ವಸೀಂ ಡಿ.28 ಕ್ಕೆ ಬನಶಂಕರಿ ಠಾಣೆ ವ್ಯಾಪ್ತಿಯ ಕಾವೇರಿಪುರದಲ್ಲಿರುವ ಶಫೀವುಲ್ಲ ಎಂಬುವವರ ಫರ್ನಿಚರ್‌ ಶಾಪ್‌ಗೆ ಬೆಳಗ್ಗೆ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಈತ ಈ ಮೊದಲು ಕೂಡಾ ಇಲ್ಲಿ ಕೆಲಸ ಮಾಡಿದ್ದು, ಅನಂತರ ಬಿಟ್ಟು ಹೋಗಿದ್ದ. ಅನಂತರ ಈತ ಡಿ.28 ಕ್ಕೆ ವಾಪಸ್‌ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಕಣ್ಣೀರು ಹಾಕಿದ್ದ. ಆತನ ಮನವಿಗೆ ಕರಗಿ ಶಫೀವುಲ್ಲ ಕೆಲಸ ಕೊಟ್ಟಿದ್ದರು.

ಇದನ್ನು ಓದಿ: Metaverse: ದೈಹಿಕವಾಗಿ ಹಿಂಸಿಸದೆ 16ರ ಹುಡುಗಿ ಮೇಲೆ ನಡೆಯಿತು ಭೀಕರ ಗ್ಯಾಂಗ್ ರೇಪ್ - ಯಪ್ಪಾ.. ಏನಿದು ವಿಚಿತ್ರ ಕೇಸ್?!

Advertisement

ಕೆಲಸಕ್ಕೆ ಸೇರಿದ ದಿನವೇ ಮಧ್ಯಾಹ್ನದ ವೇಳೆಗೆ ಚಾಕಲೇಟ್ ಕೊಡಿಸ್ತೇನೆಂದು ಮಗುವನ್ನ ಪುಸಲಾಯಿಸಿ ಕರೆದುಕೊಂಡು ವಸೀಂ ಪರಾರಿಯಾಗಿದ್ದಾನೆ ಎಂದು ಶಫೀವುಲ್ಲಾ ಆರೋಪಿಸಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

ಶಫೀವುಲ್ಲಾ ಅವರು ಪತ್ನಿಯಿಂದ ವಿಚ್ಛೇದನ ಪಡೆದಿದ್ದು, ಮಗಳೊಂದಿಗೆ ವಾಸಿಸುತ್ತಿದ್ದರು. ಇದೀಗ ಈ ಘಟನೆ ಸಂಬಂಧ ಶಫೀವುಲ್ಲ ಅವರು ಬನಶಂಕರಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
Advertisement