ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bengaluru: ಬೆಂಗಳೂರು ಕರಗಾ ಮಹೋತ್ಸವ ಹಿನ್ನೆಲೆ : ಸಂಚಾರ ದಟ್ಟಣೆಗೆ ಪೊಲೀಸರ ಸಲಹೆ

12:00 PM Mar 12, 2024 IST | ಹೊಸ ಕನ್ನಡ
UpdateAt: 12:18 PM Mar 12, 2024 IST
Advertisement

ಮಡಿವಾಳ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಹೊಂಗಸಂದ್ರ ಬೇಗೂರು ಮುಖ್ಯ ರಸ್ತೆಯಲ್ಲಿ 10 ವರ್ಷಗಳಿಗೊಮ್ಮೆ ನಡೆಯುವ ಶ್ರೀ ರೇಣುಕಾ ಯಲ್ಲಮ್ಮ ದೇವಿ ಕರಗ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸುಮಾರು 10 ಸಾವಿರ ಜನರು ಭಾಗವಹಿಸಲಿರುವ ಕಾರಣದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಚಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

Advertisement

ಇದನ್ನೂ ಓದಿ: Parliament Election: ಸಂವಿಧಾನ ಬದಲಾವಣೆ ಹೇಳಿಕೆ : ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ತಪ್ಪುವ ಸಾಧ್ಯತೆ

ನಗರದಲ್ಲಿ ಇಂದು ಮತ್ತು ನಾಳೆ ಮಡಿವಾಲಾ ವ್ಯಾಪ್ತಿಯಲ್ಲಿ ನಡೆಯಲಿರುವ "ಕರಗ ಮಹೋತ್ಸವ" ಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಂಗಳವಾರ ಸಂಚಾರ ಸಲಹೆಯನ್ನು ನೀಡಿದ್ದಾರೆ.

Advertisement

ಈ ಉತ್ಸವದಲ್ಲಿ ಸಂಚಾರವನ್ನು ನಿರ್ವಹಿಸಲು ಮತ್ತು ವಾಹನಗಳ ಸುಗಮ ಸಂಚಾರವನ್ನು ನಿರ್ವಹಿಸಲು ಪೊಲೀಸರು ಎರಡು ದಿನಗಳ ಮಾರ್ಗಸೂಚಿಗಳನ್ನು ನಿಗದಿಪಡಿಸಿದ್ದಾರೆ.

12-03-2024 ರಂದು ಸಂಜೆ 5-00 ಗಂಟೆಯಿಂದ ಹೊಂಗಸಂದ್ರ ಆಂಜನೇಯ ದೇವಸ್ಥಾನದಿಂದ ಆದರ್ಶ ಶಾಲೆಯವರೆಗೆ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ವೇಳೆ ಕೋಡಿಚಿಕ್ಕನಹಳ್ಳಿ ಜಂಕ್ಷನ್‌ನಿಂದ ಹೊಂಗಸಂದ್ರ ಮುಖ್ಯರಸ್ತೆ ಮೂಲಕ ಬೇಗೂರು ಕಡೆಗೆ ಹೋಗುವ ವಾಹನಗಳನ್ನು ಕೋಡಿಚಿಕ್ಕನಹಳ್ಳಿ ಜಂಕ್ಷನ್‌ನಲ್ಲಿ ತಡೆದು ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಡಿ ಮಾರ್ಟ್ ಕಡೆಗೆ ಹೋಗುವಂತೆ ಸೂಚಿಸಲಾಗಿದೆ.

ಅಲ್ಲದೆ ಬೇಗೂರು ಮುಖ್ಯರಸ್ತೆಯಲ್ಲಿ ಕೋಡಿಚಿಕ್ಕನಹಳ್ಳಿ ಜಂಕ್ಷನ್ ಕಡೆಗೆ ಬರುವ ವಾಹನ ಸಂಚಾರವನ್ನು ಹುಳಿಮಾವು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಪಿಕೆ ಕಲ್ಯಾಣ ಮಂಟಪದ ಅಡ್ಡರಸ್ತೆಯಲ್ಲಿ ತಡೆದು ಬೇಗೂರು ಒಳರಸ್ತೆಗಳಿಗೆ ಹೋಗುವಂತೆ ತಿಳಿಸಲಾಗಿದೆ.

Advertisement
Advertisement