For the best experience, open
https://m.hosakannada.com
on your mobile browser.
Advertisement

52 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ -ಕಂಬಳಬೆಟ್ಟು| ಧಾರ್ಮಿಕ ಸಭೆಯಲ್ಲಿ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಭಾಷಣ

Harika Manjunath: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇಲ್ಲಿ ಈ ಬಾರಿ 52 ನೇ ವರ್ಷದ ಶ್ರೀ ಮಹಾಗಣೇಶೋತ್ಸವ ಬಹಳ ಅದ್ದೂರಿಯಾಗಿ ಜರಗುತ್ತಿದೆ
11:02 AM Sep 21, 2023 IST | ಕೆ. ಎಸ್. ರೂಪಾ
52 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ  ಕಂಬಳಬೆಟ್ಟು  ಧಾರ್ಮಿಕ ಸಭೆಯಲ್ಲಿ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಭಾಷಣ

Advertisement

Harika Manjunath: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ ಕಳೆದ 51 ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇಲ್ಲಿ ಈ ಬಾರಿ 52 ನೇ ವರ್ಷದ ಶ್ರೀ ಮಹಾಗಣೇಶೋತ್ಸವ ಬಹಳ ಅದ್ದೂರಿಯಾಗಿ ಜರಗುತ್ತಿದೆ.

Advertisement

52ನೇ ವರ್ಷದ ಶ್ರೀ ಮಹಾ ಗಣೇಶೋತ್ಸವದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾರತ ಎನ್ನುವ ಕಲ್ಪನೆಯನ್ನು ಕಣ್ಣ ಮುಂದೆ ಇಟ್ಟುಕೊಂಡಿರುವ ಬೆಂಗಳೂರಿನ ಯುವವಾಗ್ಮಿ ಹಾರಿಕಾ ಮಂಜುನಾಥ್ (Harika Manjunath)ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸನಾತನ ಧರ್ಮದ ಆಚಾರ ವಿಚಾರ ಮೂಲ, ಬಾಲ ಗಂಗಾಧರ ತಿಲಕ್ ಯಾಕಾಗಿ ಗಣೇಶೋತ್ಸವವನ್ನು ಆರಂಭಿಸಿದರು, ಇವೆಲ್ಲದುದರ ಬಗ್ಗೆ ಧಾರ್ಮಿಕ ಪ್ರವಚನ ಗೈದರು.

Star Kannadiga: ‘ಸ್ಟಾರ್ ಕನ್ನಡಿಗ’ ಆಟೋ-ಕಾರು ಚಾಲಕರು ಸೇರಿ ನಿರ್ಮಿಸಿದ ಚಿತ್ರ!

ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ರಾಘವ ಮಂಜಪ್ಪಾಲು ಉಪಸ್ಥಿರಿದ್ದರು.

ಕುಮಾರಿ ಧನ್ವಿ ಅಮೃತವಚನ ಮತ್ತು ಚರಣ್ ಅಮೈ ವೈಯಕ್ತಿಕ ಗೀತೆ ಹಾಡಿದರು. ಕಾರ್ತಿಕ್ ಶೆಟ್ಟಿ ಮೂಡೈಮಾರ್ ಸ್ವಾಗತಿಸಿ, ಶ್ರೀಮತಿ ಸುನೀತಾ ಧರ್ಮನಗರ ಧನ್ಯವಾದಗೈದರು. ನವೀನ್ ಮೂಡೈಮಾರ್ ಕಾರ್ಯಕ್ರಮ ನಿರೂಪಿಸಿದರು.

Kannada Film Industry: ಸಿನಿಮಾದವರಿಗೆ ‘ಕನ್ನಡ್ ಗೊತ್ತಿಲ್ಲ’!

ಇದನ್ನೂ ಓದಿ: ನನ್ನ ಸುದ್ದಿಗೆ ಬಂದವರ ಸೆಟಲ್‌ಮೆಂಟ್ ಆಗಿದೆ - ಅಚ್ಚರಿಯ ಸ್ಟೇಟ್ಮೆಂಟ್ ನೀಡಿದ ಡಿ.ಕೆ.ಶಿವಕುಮಾರ್

Advertisement
Advertisement