For the best experience, open
https://m.hosakannada.com
on your mobile browser.
Advertisement

Vitla: ಕರ್ನಾಟಕಬ್ಯಾಂಕ್‌ ದರೋಡೆ ಪ್ರಕರಣ; ನಾಲ್ಕು ಜನ ಆರೋಪಿಗಳು ಪೊಲೀಸ್‌ ವಶಕ್ಕೆ

09:39 AM Mar 02, 2024 IST | ಹೊಸ ಕನ್ನಡ
UpdateAt: 10:11 AM Mar 02, 2024 IST
vitla  ಕರ್ನಾಟಕಬ್ಯಾಂಕ್‌ ದರೋಡೆ ಪ್ರಕರಣ  ನಾಲ್ಕು ಜನ ಆರೋಪಿಗಳು ಪೊಲೀಸ್‌ ವಶಕ್ಕೆ
Advertisement

Vitla: ಕರ್ನಾಟಕ ಬ್ಯಾಂಕ್‌ಗೆ ನುಗ್ಗಿ ನಗ,ನಗದು ದೋಚಿದ ಪ್ರಕರಣದ ಕುರಿತು ಇದೀಗ ಮಂಗಳೂರು ಸಿಸಿಬಿ ಪೊಲೀಸರು ಮತ್ತು ದ.ಕ.ಕ್ರೈಂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನಾಲ್ಕು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ. ಹಾಗೂ ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ.

Advertisement

ಇದನ್ನೂ ಓದಿ: PSI Exam: PSI ರೀ ಎಕ್ಸಾಂ ರಿಸಲ್ಟ್ ಮಾಹಿತಿ

ಪ್ರಕರಣ ಕುರಿತು ಮಂಗಳೂರು ಸಿಸಿಬಿ ಪೊಲೀಸರ ತಂಡ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಕ್ರೈಂ ಪೊಲೀಸರ ತಂಡ ಆರೋಪಿಗಳ ಕೃತ್ಯಕ್ಕೆ ಬಳಸಿದ ಕಾರಿನ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮಾಡಿದ್ದರು.

Advertisement

ಇದೀಗ ವಶಕ್ಕೆ ಪಡೆದ ಆರೋಪಿಗಳಿಂದ ವಾಹನಗಳನ್ನು ಪಡೆದುಕೊಂಡಿದ್ದು, ಬ್ಯಾಂಕ್‌ನಿಂದ ದರೋಡೆ ಮಾಡಿದ ಚಿನ್ನಾಭರಣಗಳನ್ನು ಹೊರ ರಾಜ್ಯದಲ್ಲಿ ಮಾರಾಟ ಮಾಡಲಾಗಿದ್ದು, ಅದನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿರುವ ಕುರಿತು ವರದಿಯಾಗಿದೆ. ದರೋಡೆ ಪ್ರಕರಣದ ಆರೋಪಿಗಳು ಈ ಹಿಂದೆ ಬೇರೆ ಅಪರಾಧ ಕೃತ್ಯಗಳಲ್ಲಿ ಕೂಡಾ ಭಾಗಿಯಾಗಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ತನಿಖೆ ತೀವ್ರಗೊಂಡಿದೆ.

Advertisement
Advertisement
Advertisement