For the best experience, open
https://m.hosakannada.com
on your mobile browser.
Advertisement

Vijayapura: ಹೆಂಡತಿಯ ಶೀಲ ಶಂಕಿಸಿ ಸನಿಕೆ ಹಿಡಿದ ಗಂಡ ಏನು ಮಾಡಿದ ಗೊತ್ತಾ?! ಯಪ್ಪಾ.. ಬೆಚ್ಚಿಬೀಳಿಸುತ್ತೆ ಘಟನೆ

07:34 AM Feb 19, 2024 IST | ಹೊಸ ಕನ್ನಡ
UpdateAt: 07:41 AM Feb 19, 2024 IST
vijayapura  ಹೆಂಡತಿಯ ಶೀಲ ಶಂಕಿಸಿ ಸನಿಕೆ ಹಿಡಿದ ಗಂಡ ಏನು ಮಾಡಿದ ಗೊತ್ತಾ   ಯಪ್ಪಾ   ಬೆಚ್ಚಿಬೀಳಿಸುತ್ತೆ ಘಟನೆ

Vijayapura: ವ್ಯಕ್ತಿಯೊಬ್ಬ ಪತ್ನಿಯ (Wife) ಶೀಲ ಶಂಕಿಸಿ ಬರ್ಬರ ಹತ್ಯೆಗೈದ ಘಟನೆ ತಿಕೋಟ ತಾಲೂಕಿನ ಹುಬನೂರು ತಾಂಡಾ -2 ರಲ್ಲಿ ಘಟನೆ ನಡೆದಿದೆ.

Advertisement

ಇದನ್ನೂ ಓದಿ: National politics: ಮಾಜಿ ಸಿಎಂ, ಕಾಂಗ್ರೆಸ್ ನೇತಾರ ಬಿಜೆಪಿ ಸೇರ್ಪಡೆ ?!

ಹೌದು, ವಿಜಯಪುರ(Vijayapura) ಜಿಲ್ಲೆಯ ತಿಕೋಟ ತಾ. ಹುಬನೂರು ತಾಂಡಾ -2ರಲ್ಲಿ ಘಟನೆ ನಡೆದಿದೆ. ರೇಶ್ಮಾ ರಾಠೋಡ (25) ಎಂಬಾಕೆಯ ಶೀಲವನ್ನು ಶಂಕಿಸಿ ಆಕೆಯ ಗಂಡ ಅಶೋಕ ರಾಠೋಡ (33) ಎಂಬುವವನು ಸನಿಕೆ(ಗುದ್ದಲಿ)ಯಲ್ಲಿ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ.

Advertisement

ಅಂದಹಾಗೆ ರೇಶ್ಮಾ ಹಾಗೂ ಅಶೋಕ್‌ ಮದುವೆಯಾಗಿ 11 ವರ್ಷಗಳೇ ಕಳೆದಿತ್ತು. ದಂಪತಿಗೆ ಮೂವರು ಮಕ್ಕಳು ಸಹ ಇದ್ದರು. ಆದರೆ ಕೆಲ ತಿಂಗಳಿನಿಂದ ಅಶೋಕ್‌, ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸಂಶಯವನ್ನು ಹೊಂದಿದ್ದ. ಆಗಾಗ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಇದರಿಂದ ಬೇಸತ್ತು ಮಹಿಳೆ ತನ್ನ ತವರು ಮನೆಗೆ ಹೋಗಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಮಹಿಳೆಯ ಮೇಲೆ ಸಲಾಕೆಯಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

Advertisement
Advertisement