For the best experience, open
https://m.hosakannada.com
on your mobile browser.
Advertisement

Vastu Tips for Money: ಹಣ, ಒಡವೆಯನ್ನು ಇಡಲು ಮನೆಯ ಈ ಜಾಗವನ್ನು ಆಯ್ಕೆ ಮಾಡಿಕೊಳ್ಳಿ! ಸಂಪತ್ತು ದುಪ್ಪಟ್ಟು ಆಗಲಿದೆ!

Vastu Tips for Money: ಮನೆಯಲ್ಲಿ ನಿರ್ಧಿಷ್ಟವಾದ ವಸ್ತುವನ್ನು ಇರಿಸಲು ನಿರ್ಧಿಷ್ಟವಾದ ಸ್ಥಳವನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ.
10:46 AM Jun 01, 2024 IST | ಕಾವ್ಯ ವಾಣಿ
UpdateAt: 11:29 AM Jun 01, 2024 IST
vastu tips for money  ಹಣ  ಒಡವೆಯನ್ನು ಇಡಲು ಮನೆಯ ಈ ಜಾಗವನ್ನು ಆಯ್ಕೆ ಮಾಡಿಕೊಳ್ಳಿ  ಸಂಪತ್ತು ದುಪ್ಪಟ್ಟು ಆಗಲಿದೆ

Vastu Tips for Money: ಹಣ, ಒಡವೆಯನ್ನು ಇಡಲು ಮನೆಯ ಈ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾಕೆಂದರೆ ಮನೆಯಲ್ಲಿ ನಿರ್ಧಿಷ್ಟವಾದ ವಸ್ತುವನ್ನು ಇರಿಸಲು ನಿರ್ಧಿಷ್ಟವಾದ ಸ್ಥಳವನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ಇದನ್ನು ಪಾಲಿಸದೇ ವಸ್ತುಗಳನ್ನು ಎಲ್ಲೆಲ್ಲೂ ಇಟ್ಟರೆ ನಮಗೆ ಅದರಿಂದ ಒಳ್ಳೆಯದಕ್ಕಿಂತ ಕೆಟ್ಟದಾಗುವುದೇ ಜಾಸ್ತಿ. ವಿಶೇಷವಾಗಿ ಹಣ ಮತ್ತು ಚಿನ್ನವನ್ನು ಇರಿಸುವಾಗ ವಾಸ್ತು ಪ್ರಕಾರ ಇಟ್ಟರೆ ಅದು ದುಪ್ಪಟ್ಟು ಆಗುತ್ತೆ ಎಂದು ಹೇಳಲಾಗುತ್ತದೆ.

Advertisement

ಇದನ್ನೂ ಓದಿ: Siddaramaiah: ಡಿಸಿಎಂ ರಿಂದ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ಹೇಳಿಕೆ; ಕೇರಳ ಸರಕಾರದಿಂದ ಮಹತ್ವದ ಹೇಳಿಕೆ

ಹೌದು, ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ವಸ್ತುವನ್ನು ನಿರ್ದಿಷ್ಟ ಸ್ಥಳದಲ್ಲಿ ಇಡಬೇಕು. ಹಣ, ಚಿನ್ನ, ಆಸ್ತಿ ದಾಖಲೆಗಳು ಮುಂತಾದ ಬೆಲೆಬಾಳುವ ವಸ್ತುಗಳನ್ನು ಇಡಲು ಸರಿಯಾದ ದಿಕ್ಕು ಅಥವಾ ಸ್ಥಳ ಯಾವುದು ಎಂದು ಇಲ್ಲಿ ತಿಳಿಸಲಾಗಿದೆ (Vastu Tips for Money)

Advertisement

ಇದನ್ನೂ ಓದಿ: 7th Pay Commission: ಡಿಎ ನಂತರ, ಸರ್ಕಾರದಿಂದ ಗ್ರಾಚ್ಯುಟಿ ಕುರಿತು ಸಿಹಿ ಸುದ್ದಿ, ಉದ್ಯೋಗಿಗಳಿಗೆ ದೊಡ್ಡ ಲಾಭ

ಮುಖ್ಯವಾಗಿ ಮನೆಯ ನೈಋತ್ಯ ದಿಕ್ಕಿನಲ್ಲಿ ಹಣ, ಚಿನ್ನ ಮತ್ತು ಬೆಲೆಬಾಳುವ ವಸ್ತುಗಳನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡುವುದರಿಂದ ಮೌಲ್ಯವನ್ನು ಹೆಚ್ಚಿಸುವ ಜೊತೆಗೆ ನಿಮ್ಮ ಹಣಕಾಸಿನ ಸಮಸ್ಯೆಗಳೂ ಬಗೆಹರಿಯುತ್ತವೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಬೆಲೆಬಾಳುವ ವಸ್ತುಗಳನ್ನು ನೈಋತ್ಯ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವುದಿಲ್ಲ. ಮನೆಯಲ್ಲಿ ಧನಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ನಿಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ಶಾಂತಿ ಹೆಚ್ಚಾಗುತ್ತದೆ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.

ನೈಋತ್ಯ ದಿಕ್ಕನ್ನು ಭೂಮಿ ತಾಯಿಯ ಅಂಶವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಹಣ ಇಡುವ ದಿಕ್ಕು ಆಗಿದೆ. ಈ ದಿಕ್ಕಿನಲ್ಲಿ ನೀವು ಹಣ ಮತ್ತು ಚಿನ್ನ ಹಾಗೂ ಆಸ್ತಿ ದಾಖಲೆಗಳನ್ನು ಇರಿಸಿದರೆ ಅದು ನಿಮ್ಮ ಜೀವನದಲ್ಲಿ ಬೆಳೆಯುತ್ತದೆ. ಉತ್ತಮ ಧನಾತ್ಮಕ ಕಂಪನಗಳನ್ನು ಹೊಂದಿರುವ ಇತರ ಸ್ಥಳಗಳಿಗೆ ಹೋಲಿಸಿದರೆ ನೈಋತ್ಯವು ಅತ್ಯಂತ ಸುರಕ್ಷಿತ ಮತ್ತು ಸಮೃದ್ಧ ಸ್ಥಳವಾಗಿದೆ.

ಅಲ್ಲದೆ ಈ ಸ್ಥಳ ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಲಾಕ್ ಮಾಡಲು ಅತ್ಯಂತ ಸುರಕ್ಷಿತ ಸ್ಥಳವಾಗಿದೆ. ಹಾಗಾಗಿ ಯಾವುದೇ ಕಳ್ಳತನ ಸಂಭವಿಸಲು ಅವಕಾಶ ಇರುವುದಿಲ್ಲ.

ಒಟ್ಟಿನಲ್ಲಿ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಮತ್ತು ಮನೆಯಲ್ಲಿ ಸಂಪತ್ತು ಹೆಚ್ಚಿಸಲು ಇದು ಉತ್ತಮ ಮಾರ್ಗವಾಗಿದೆ.

Advertisement
Advertisement
Advertisement