For the best experience, open
https://m.hosakannada.com
on your mobile browser.
Advertisement

Udupi: ಮನೆಯಲ್ಲಿ ಅಗ್ನಿ ಅವಘಡ; ಉಡುಪಿಯ ಶೆಟ್ಟಿ ಬಾರ್‌ & ರೆಸ್ಟೋರೆಂಟ್‌ ಮಾಲೀಕ ಸಾವು

Udupi: ಬಾರ್‌ ಮಾಲೀಕರ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್‌ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
09:14 AM Jul 15, 2024 IST | ಸುದರ್ಶನ್
UpdateAt: 09:14 AM Jul 15, 2024 IST
udupi  ಮನೆಯಲ್ಲಿ ಅಗ್ನಿ ಅವಘಡ  ಉಡುಪಿಯ ಶೆಟ್ಟಿ ಬಾರ್‌   ರೆಸ್ಟೋರೆಂಟ್‌ ಮಾಲೀಕ ಸಾವು
Advertisement

Udupi: ಇಂದು ಉಡುಪಿಯ ಅಂಬಲಪಾಡಿಯ ಗಾಂಧಿನಗರದ ಬಾರ್‌ ಮಾಲೀಕರ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್‌ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಇವರ ಪತ್ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವ ಕುರಿತು ವರದಿಯಾಗಿದೆ.

Advertisement

Puri : 46 ವರ್ಷಗಳ ಬಳಿಕ ಪುರಿ ಜಗನ್ನಾಥನ ಭಂಡಾರ ತೆರೆದಿದ್ದೇಕೆ ? ಇಷ್ಟು ವರ್ಷ ಬಾಗಿಲು ಮುಚ್ಚಿದ್ದೇಕೆ? ಒಳಗೆ ಇರೃದಾದ್ರೂ ಏನು?

ಅಂಬಲಪಾಡಿಯ ಶೆಟ್ಟಿ ಬಾರ್‌ & ರೆಸ್ಟೋರೆಂಟ್‌ನ ಮಾಲೀಕರಾಗಿರುವ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ತೀವ್ರವಾಗಿ ಹಬ್ಬಿ ಪ್ರಜ್ಞೆ ತಪ್ಪಿದ್ದ ಗಂಡ ಹೆಂಡತಿಯನ್ನು ಅಗ್ನಿಶಾಮಕ ಸಿಬ್ಬಂದಿಯವರು ರಕ್ಷಣೆ ಮಾಡಿದ್ದರು. ಇವರಿಬ್ಬರಿಗೆ ಈ ಅವಘಡದಲ್ಲಿ ತೀವ್ರವಾದ ಗಾಯವಾಗಿದ್ದವು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

Advertisement

ಆದರೆ ಬಾರ್‌ ಮಾಲೀಕರ ರಮಾನಂದ ಅವರು ಚಿಕಿತ್ಸೆ ಫಲಕಾರಿಯಾಗದೆ, ಮೃತ ಹೊಂದಿದ್ದು, ಇವರ ಪತ್ನಿ ಅಶ್ವಿನಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ.

Swami Koragajja: ಕುತ್ತಾರು ಕೊರಗಜ್ಜನ ಕಟ್ಟೆ ಕೋಲದಲ್ಲಿ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಜೊತೆ ನಟ ಸುನೀಲ್‌ ಶೆಟ್ಟಿ ಪರಿವಾರ ಭಾಗಿ

Advertisement
Advertisement
Advertisement