For the best experience, open
https://m.hosakannada.com
on your mobile browser.
Advertisement

Sadhu Kokila: 'ನನ್ನನ್ನು ನೋಡೋದು ಬೇಡ' - ಜೈಲಿಗೆ ಬಂದ ಸಾಧು ಕೋಕಿಲರನ್ನು ವಾಪಸ್ ಕಳಿಸಿದ ದರ್ಶನ್, ಕಾರಣ ಏನು?

Sadhu Kokila: ಜೈಲಲ್ಲಿರುವ ಕೊಲೆ ಆರೋಪಿ ನಟ ದರ್ಶನ್ ಭೇಟಿಗಾಗಿ ಸಂಬಂಧಿಕರು, ಚಿತ್ರನಟರು, ಆಪ್ತರು ಒಬ್ಬರ ಹಿಂದೆ ಒಬ್ಬರಂತೆ ದಿನವೂ ಬರುತ್ತಿದ್ದಾರೆ.
07:47 AM Jul 24, 2024 IST | ಸುದರ್ಶನ್
UpdateAt: 07:47 AM Jul 24, 2024 IST
sadhu kokila   ನನ್ನನ್ನು ನೋಡೋದು ಬೇಡ    ಜೈಲಿಗೆ ಬಂದ ಸಾಧು ಕೋಕಿಲರನ್ನು ವಾಪಸ್ ಕಳಿಸಿದ ದರ್ಶನ್  ಕಾರಣ ಏನು
Advertisement

Sadhu Kokila: ಜೈಲಲ್ಲಿರುವ ಕೊಲೆ ಆರೋಪಿ ನಟ ದರ್ಶನ್ ಭೇಟಿಗಾಗಿ ಸಂಬಂಧಿಕರು, ಚಿತ್ರನಟರು, ಆಪ್ತರು ಒಬ್ಬರ ಹಿಂದೆ ಒಬ್ಬರಂತೆ ದಿನವೂ ಬರುತ್ತಿದ್ದಾರೆ. ಇತ್ತೀಚೆಗೆ ಧನ್ವೀರ್(Dhanveer), ವಿನೋದ್ ಪ್ರಭಾಕರ್(Vinod Prabhakar), ವಿನೋದ್ ರಾಜ್ ಕುಮಾರ್(Vinod Rajkumar) ಸೇರಿದಂತೆ ಹಲವು ನಟರು ಬಂದು ದರ್ಶನ್ ಭೇಟಿ ಮಾಡಿ, ಸಾಂತ್ವನ ಹೇಳಿ ಹೋಗಿದ್ದಾರೆ. ಈ ಬೆನ್ನಲ್ಲೇ ನಿನ್ನೆ ಕನ್ನಡದ ಖ್ಯಾತ ಹಾಸ್ಯ ನಟ ಸಾಧು ಕೋಕಿಲ(Sadhu Kokila) ಕೂಡ ದರ್ಶನ್ ಭೇಟಿಗೆಂದು ಜೈಲಿಗೆ ಆಗಮಿಸಿದ್ದರು. ಆದರೆ ಸಾಧು ಅವರನ್ನು ಭೇಟಿಯಾಗಲು ದರ್ಶನ್ ನಿರಾಕರಿಸಿದ್ದಾರೆ. ಹೀಗಾಗಿ ಸಾಧು ಅವರು ವಾಪಸ್ಸು ಮರಳಿದ್ದಾರೆ.

Advertisement

ತನ್ನನ್ನು ನೋಡಲು ಬರುವ ಪ್ರತಿಯೊಬ್ಬರನ್ನು ಭೇಟಿಯಾಗಿ, ಮಾತನಾಡಿ, ತಬ್ಬಿ ಕಣ್ಣೀರು ಹಾಕಿ ಕಳುಹಿಸುತ್ತಿದ್ದ ದರ್ಶನ್ ಇದೀಗ ಸಾಧು ಕೋಕಿಲ ಅವರನ್ನು ಯಾಕೆ ಹಾಗೆ ಕಳುಹಿಸಿದರು ಎಂದು ಹಲವರು ತಮ್ಮಲ್ಲೇ ಚರ್ಚೆ ನಡೆಸಿದ್ದಾರೆ. ಇದಕ್ಕೆ ಕಾರಣವೂ ಕೂಡ ಇದೆ ಎನ್ನಲಾಗಿದೆ.

ಅದೇನೆಂದರೆ ವಾರಕ್ಕೆ ಎರಡು ಬಾರಿ ಮಾತ್ರ ಭೇಟಿಗೆ ಅವಕಾಶ ಇತ್ತು. ಒಂದು ಬಾರಿ ಭೇಟಿಗೆ ಐದು ಮಂದಿಗೆ ಅವಕಾಶ ಇರುವ ನಿಯಮವಿದೆ. ಈಗಾಗಲೇ ಒಂದು ಬಾರಿ ದರ್ಶನ್ ಭೇಟಿಗೆ ಕುಟುಂಬ ಹೋಗಿತ್ತು. ಗುರುವಾರ ಮತ್ತೊಮ್ಮೆ ದರ್ಶನ್ ಫ್ಯಾಮಿಲಿ ಆಗಮಿಸುವ ಹಿನ್ನೆಲೆಯಲ್ಲಿ ಸಾಧುಕೋಕಿಲ ಅವರಿಗೆ ಅವಕಾಶ ಕಲ್ಪಿಸಿಕೊಟ್ರೆ ಮುಂದಿನ ದಿನಗಳಲ್ಲಿ ಫ್ಯಾಮಿಲಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ಗುರುವಾರ ಫ್ಯಾಮಿಲಿ ಜೊತೆಗೆ ಸಾಧುಕೋಕಿಲ ಅವರಿಗೆ ಬನ್ನಿ ಎಂದು ದರ್ಶನ್ ಜೈಲಾಧಿಕಾರಿಗಳ ಮೂಲಕ ಸಾಧುಕೋಕಿಲಗೆ ತಿಳಿಸಿದ್ದಾರೆ ಎನ್ನಲಾಗಿದೆ.

Advertisement

ಇನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬಂದ ನಟ ಸಾಧು ಕೋಕಿಲ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು "ಏನೂ ಮಾತಾಡಿಲ್ಲ, ನಾನು ಅವರನ್ನು ಭೇಟಿಯಾಗಿಲ್ಲ. ದರ್ಶನ್ ಅವರನ್ನು ಭೇಟಿಯಾಗಲು ವಾರಕ್ಕೆ ಒಂದು ಅಥವಾ ಎರಡು ಅವಕಾಶ ಇದೆ. ನಾನು ಅವರನ್ನು ಭೇಟಿಯಾಗಬೇಕು ಅಂತಲೇ ಬಂದಿದ್ದೆ. ಈಗ ನಾನು ಭೇಟಿಯಾದರೆ, ಮಿಕ್ಕವರಿಗೆ ಅವರನ್ನು ಭೇಟಿ ಆಗುವ ಅವಕಾಶ ಸಿಗಲ್ಲ. ಗುರುವಾರ (ಜುಲೈ 25) ಇದೇ ಸಮಯಕ್ಕೆ ಮತ್ತೆ ಬರುತ್ತೇನೆ. ಅಂದು ಯಾರು ಬರುತ್ತಾರೋ, ನೋಡಿಕೊಂಡು, ಅವರ ಜೊತೆಗೆ ಬರುತ್ತೇನೆ" ಎಂದು ಸಾಧು ಕೋಕಿಲ ಹೇಳಿದ್ದಾರೆ.

Budget 2024: ಬಜೆಟ್ ನಲ್ಲಿ ಆಂಧ್ರ- ಬಿಹಾರಕ್ಕೆ ಭರ್ಜರಿ ಕೊಡುಗೆ ಕೊಟ್ಟ ಮೋದಿ ಸರ್ಕಾರ- ಏನೆಲ್ಲಾ ಸಿಕ್ತು ಗೊತ್ತಾ ?!!

Advertisement
Advertisement
Advertisement