For the best experience, open
https://m.hosakannada.com
on your mobile browser.
Advertisement

Rahul Dravid: ಮತ್ತೆ ಅಭಿಮಾನಿಗಳ ಮನ ಗೆದ್ದ ರಾಹುಲ್ ದ್ರಾವಿಡ್ - BCCI ಕೊಟ್ಟ 2.5 ಕೋಟಿ ರೂ ಚೆಕ್ ವಾಪಾಸ್ !!

Rahul Dravid: ರಾಹುಲ್ ದ್ರಾವಿಡ್(Rahul Dravid) ಕಪ್ ಗೆದ್ದ ಬಳಿಕತ್ತೊಮ್ಮೆ ಕನ್ನಡಿಗರ, ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.
10:19 AM Jul 11, 2024 IST | ಸುದರ್ಶನ್
UpdateAt: 10:19 AM Jul 11, 2024 IST
rahul dravid  ಮತ್ತೆ ಅಭಿಮಾನಿಗಳ ಮನ ಗೆದ್ದ ರಾಹುಲ್ ದ್ರಾವಿಡ್   bcci ಕೊಟ್ಟ 2 5 ಕೋಟಿ ರೂ ಚೆಕ್ ವಾಪಾಸ್
Advertisement

Rahul Dravid: ಟಿ20 ವಿಶ್ವಕಪ್ ಬಳಿಕ ತವರಿಗೆ ಮರಳಿರುವ ಕನ್ನಡಿಗ ಹಾಗೂ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್(Rahul Dravid) ಕಪ್ ಗೆದ್ದ ಬಳಿಕತ್ತೊಮ್ಮೆ ಕನ್ನಡಿಗರ, ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಬಹುಮಾನದಲ್ಲೂ ಸಮಾನತೆ ಬಯಸಿರುವ ರಾಹುಲ್ ತನಗೆ 5 ಕೋಟಿ ಬೇಡ.. ಎಲ್ಲರಂತೆ 2.5 ಕೋಟಿ ನೀಡಿ ಎಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ.

Advertisement

ಹೌದು, T20 ವಿಶ್ವಕಪ್(T20 World Cup) ಗೆದ್ದ ಟೀಂ ಇಂಡಿಯಾ ಸಾಧನೆಗೆ ಮೆಚ್ಚಿ ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ 125 ಕೋಟಿ ರೂ ಬಹುಮಾನ ಘೋಷಣೆ ಮಾಡಿತ್ತು. ಅದರಂತೆ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಮತ್ತು ತಂಡದ ಆಟಗಾರರಿಗೆ ತಲಾ 5 ಕೋಟಿ ರೂ ವಿತರಿಸಲು ಬಿಸಿಸಿಐ ಸಿದ್ಧವಾಗಿತ್ತು. ಸಹಾಯಕ ಕೋಚ್ ಗಳಿಗೆ ತಲಾ 2.5ಕೋಟಿ ರೂ ಘೋಷಣೆ ಮಾಡಿತ್ತು. ಆದರೆ ಈ ಬಗ್ಗೆ ರಾಹುಲ್ ದ್ರಾವಿಡ್ ಅವರು ಬಿಸಿಸಿಐಗೆ ವಿಶೇಷ ಮನವಿ ಮಾಡಿಕೊಂಡದ್ದಾರಂತೆ. ಬಿಸಿಸಿಐ ಘೋಷಣೆ ಮಾಡಿರುವ ಹಣವನ್ನು ಕೋಚ್ ಗಳಿಗೆ ಸಮನವಾಗಿ ಹಂಚಿಕೆ ಮಾಡುವಂತೆ ದ್ರಾವಿಡ್ ಮನವಿ ಮಾಡಿದ್ದಾರಂತೆ !!

ಬಿಸಿಸಿಐ ಮೂಲಗಳ ಮಾಹಿತಿ ಅನ್ವಯ, ರಾಹುಲ್ ಅವರ ಉಳಿದ ಸಹಾಯಕ ಸಿಬ್ಬಂದಿ (ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್) ಅವರಿಗೆ ಬೋನಸ್ ಹಣ ಅಂದರೆ 2.5 ಕೋಟಿ ರೂಪಾಯಿ ನೀಡಲು ಬಯಸಿದ್ದರಂತೆ. ನಾವು ಅವರ ಭಾವನೆಗಳನ್ನು ಗೌರವಿಸುತ್ತೇವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಮೂಲಕ ಮತ್ತೊಮ್ಮೆರಾಹುಲ್ ದ್ರಾವಿಡ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

Government Rules: LKG, UKG, 1ನೇ ತರಗತಿ ದಾಖಲಾತಿಗೆ ಈ ರೂಲ್ಸ್ ಕಡ್ಡಾಯ

Advertisement
Advertisement
Advertisement