For the best experience, open
https://m.hosakannada.com
on your mobile browser.
Advertisement

Ragupati Bhat: ಹಿಜಾಬ್ ನಿಷೇಧಿಸಿದ್ದು ಸಮವಸ್ತ್ರಕ್ಕಾಗೀ ; ಒಂದೂವರೆ ವರ್ಷ ಹಿಜಾಬ್ ಹಾಕದವಳು, 2 ತಿಂಗಳು ಹಾಕಿ ಗಲಾಟೆ ಎಬ್ಬಿಸಿದಳು - ಅಲಿಯಾಗೆ ರಘುಪತಿ ಭಟ್ ಕೌಂಟ್ರು

Raghupati Bhat: ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಕೌಂಟರ್‌ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ರಘುಪತಿ ಭಟ್ರು ಅಲಿಯಾಗಿ ಟಾಂಗ್ ನೀಡಿದ್ದಾರೆ
02:13 PM May 30, 2024 IST | ಸುದರ್ಶನ್
UpdateAt: 02:16 PM May 30, 2024 IST
ragupati bhat  ಹಿಜಾಬ್ ನಿಷೇಧಿಸಿದ್ದು ಸಮವಸ್ತ್ರಕ್ಕಾಗೀ   ಒಂದೂವರೆ ವರ್ಷ ಹಿಜಾಬ್ ಹಾಕದವಳು  2 ತಿಂಗಳು ಹಾಕಿ ಗಲಾಟೆ ಎಬ್ಬಿಸಿದಳು   ಅಲಿಯಾಗೆ ರಘುಪತಿ ಭಟ್ ಕೌಂಟ್ರು

Raghupati Bhat: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಮಾಜಿ ಸಚಿವ ರಘುಪತಿ ಭಟ್‌(Raghupathi Bhat) ಅವರಿಗೆ ಕೆಲ ದಿನಗಳ ಹಿಂದೆ ಹಿಜಾಬ್ ವಿವಾದಿಂದ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ(Alia Assadi) ಕೌಂಟರ್‌ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ರಘುಪತಿ ಭಟ್ರು ಅಲಿಯಾಗಿ ಟಾಂಗ್ ನೀಡಿದ್ದಾರೆ.

Advertisement

ಇದನ್ನೂ ಓದಿ: Ambarish: ಅಂಬರೀಷ್ಗೆ ‘ಮಂಡ್ಯದ ಗಂಡು’ ಎಂದು ಬಿರುದು ಕೊಟ್ಟಿದ್ದು ಇವರೆ

ಹೌದು, ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಗೆ(Vidhana Parishath) ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಡುಪಿ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್‌ರನ್ನು ಬಿಜೆಪಿ(BJP) 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಈ ಬೆನ್ನಲ್ಲೇ ಅಲಿಯಾ ಅಸ್ಸಾದಿ ರಘುಪತಿ ಭಟ್ ಅವರಿಗೆ ಕರ್ಮ ರಿಟರ್ನ್ಸ್ ಎನ್ನು ರೀತಿಯಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ 'ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ, ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿ. ರಘುಪತಿ ಭಟ್ ಅವರೇ, ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ, ನೀವು ಉಚ್ಚಾಟಿತ ವ್ಯಕ್ತಿ ಎಂದು ತಿರುಗೇಟು ನೀಡಿದ್ದರು.

Advertisement

ಇದನ್ನೂ ಓದಿ: What's App Group: ಅಪರಿಚಿತ ವಾಟ್ಸಾಪ್ ಗ್ರೂಪ್‌ಗಳಿಂದ ನಿಮಗೆ ಮೆಸೇಜ್ ಬರ್ತಾ ಇದ್ಯ? ಡೇಂಜರ್, ಮೊದಲು ಅಲರ್ಟ್ ಆಗಿ

ಇದೀಗ ರಘುಪತಿ ಭಟ್ ಇದಕ್ಕೆ ಪ್ರತಿಕ್ರಿಯಿಸಿದ್ದು 'ನಾನು ಹಿಜಾಬ್ ನಿಷೇಧಿಸಿದ್ದು ಧರ್ಮಾಧಾರಿತವಾಗಿ ಅಲ್ಲ. ಸಮವಸ್ತ್ರ ಆಧಾರಿತವಾಗಿ ಮಾಡಿದ್ದು. ಆಕೆ ಒಳ್ಳೆ ವಿದ್ಯೆ ಕಲಿಯಲಿ ಆಗ ಧರ್ಮಾಂದತೆ ಬರಲ್ಲ. ಆಕೆ ಕಾಲೇಜಿನ ಶಿಸ್ತು ತಪ್ಪಿದ್ದರಿಂದ ಹೀಗೆಲ್ಲಾ ಆಯಿತು. ನಾನು ಶಾಸಕನಾಗುವ ಮೊದಲೇ ಸಮವಸ್ತ್ರವಿತ್ತು. ಒಂದುವರೆ ವರ್ಷ ಹಿಜಾಬ್ ತೆಗೆದು ಆಕೆ ತರಗತಿಗೆ ಹೋಗುತ್ತಿದ್ದಳು. ಆದರೆ ಸಿ.ಎಫ್.ಐ ಪ್ರಭಾವದಿಂದ ಎರಡು ತಿಂಗಳಿಗೆ ಹಿಜಾಬ್ ಹಾಕಲು ಇಡೀ ರಾಜ್ಯದಲ್ಲಿ ಗಲಾಟೆ ಎಬ್ಬಿಸಿದಳು. ಆಕೆ ವಿದ್ಯೆ ಕಲಿಯಲಿ ಎಂದು ಹಾರೈಸುತ್ತೇನೆ. ನಾನು ಈಗಾಗಲೆ ಮೂರು ಬಾರಿ ಶಾಸಕನಾಗಿ ಜನ ಮನ್ನಣೆ ಪಡೆದಿದ್ದೇ‌ನೆ. ಆಕೆ ವಿದ್ಯೆ ಕಲಿತರೆ ಧರ್ಮಂಧತೆ, ದೇಶದ್ರೋಹದ ಭಾವನೆ ದೂರವಾಗುತ್ತದೆ ಎಂದು ಹೇಳಿದ್ದಾರೆ

ಹಿಂದೆ ನಡೆದಿದ್ದೇನು?

ಬಿಜೆಪಿ ಸರ್ಕಾರದ ಸಮಯದಲ್ಲಿ ಉಡುಪಿ ಹಾಗೂ ಮಂಗಳೂರಿನಲ್ಲಿ ಹುಟ್ಟಿಕೊಂಡ ಹಿಜಾಬ್ ಕಿಡಿ ರಾಜ್ಯವನ್ನು ವ್ಯಾಪಿಸಿತ್ತು. ಈ ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿರಾಕರಣೆ ಮಾಡಲಾಗಿತ್ತು. ಇದರಲ್ಲಿ ಮಾಜಿ ಶಾಸಕ ರಘುಪತಿ ಭಟ್ ಒತ್ತಡ ಹೇರಿದ್ದರು ಎಂದು ತಿಳಿದು ಬಂದಿತ್ತು. ಇದೀಗ ಈ ವಿಚಾರವಾಗಿ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ಟ್ವೀಟ್ ಮಾಡಿ ರಘುಪತಿ ಭಟ್ ಗೆ ತಿವಿದಿದ್ದರು.

ರಘುಪತಿ ಭಟ್ ಅವರ ಉಚ್ಛಾಟನೆಗೆ ಕಾರಣ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದ ರಘುಪತಿ ಭಟ್ ನೈಋತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಪಕ್ಷವು ಶಿವಮೊಗ್ಗದ(Shivmogga) ಖ್ಯಾತ ವೈದ್ಯ ಧನಂಜಯ ಸರ್ಜಿ(Dhananjaya Sarji) ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಈ ಹಿನ್ನೆಲೆಯಲ್ಲಿ ರಘುಪತಿ ಭಟ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೂ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಬಿಜೆಪಿ ಸೂಚಿಸಿತ್ತು. ಆದರೆ, ನಾಮಪತ್ರ ಹಿಂಪಡೆಯದೆ, ಪಕ್ಷದ ಮಾತನ್ನು ಕೂಡ ದಿಕ್ಕರಿಸಿ ಸ್ಪರ್ಧೆ ಮಾಡುತ್ತಿರುವ ರಘುಪತಿ ಭಟ್ ಅವರನ್ನು ಇದೀಗ ಉಚ್ಚಾಟನೆ ಮಾಡಲಾಗಿದೆ.

Advertisement
Advertisement
Advertisement