For the best experience, open
https://m.hosakannada.com
on your mobile browser.
Advertisement

Prashant Sambaragi accuses Darshan: ಅರ್ಜುನ್ ಜನ್ಯಗೆ ಹಾರ್ಟ್ ಅಟ್ಯಾಕ್ ಆಗಲು ಆರಡಿ ಮೃಗ ದರ್ಶನ್ ಕಾರಣ !!

02:27 PM Jun 17, 2024 IST | ಸುದರ್ಶನ್
UpdateAt: 02:27 PM Jun 17, 2024 IST
prashant sambaragi accuses darshan  ಅರ್ಜುನ್ ಜನ್ಯಗೆ ಹಾರ್ಟ್ ಅಟ್ಯಾಕ್ ಆಗಲು ಆರಡಿ ಮೃಗ ದರ್ಶನ್ ಕಾರಣ
Advertisement

Prashant Sambaragi accuses Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಮಾಡಿರೋ ಕಿತಾಪತಿಗಳು ಒಂದೋ ಎರಡೋ? ಅಬ್ಬಬ್ಬಾ..!! ಪ್ರತೀ ದಿನವೂ ಒಂದೊಂದು ಹಳೆಯ ಪ್ರಕರಣಗಳು ಬಯಲಾಗುತ್ತಿವೆ. ಬಗೆದಷ್ಟು ಆಳವಾಗುತ್ತಿವೆ. ಅಂತೆಯೇ ಇದೀಗ ಈ ಸ್ಟಾರ್ ನಟ ಮಾಡಿದ ಅವಾಂತರವೊಂದನ್ನು ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ(Prashant Sambaragi accuses Darshan) ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Advertisement

ನಿಮಗೆ ಕೇಳಿದರೆ ಇದು ನಿಜಕ್ಕೂ ಅಚ್ಚರಿ ಅನಿಸಬಹುದು. ಹಿಂದೊಮ್ಮೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ(Arjun Janya)ರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಅದೃಷ್ಟಾವಶಾತ್ ಏನೂ ಸಮಸ್ಯೆ ಆಗದೆ ಪಾರಾಗಿ ಬಂದರು. ಅವರಿಗೆ ಈ ಹಾರ್ಟ್ ಅಟ್ಯಾಕ್ ಆಗಲು ಕಾರಣವೇ ಈ ದರ್ಶನ್ ಅಂತೆ !! ಹೌದು, ಇದನ್ನು ಸ್ವತಃ ಪ್ರಶಾಂತ್(Prashanth Sambaragi) ಅವರೇ ಬಹಿರಂಗಪಡಿಸಿದ್ದಾರೆ.

ಪ್ರಶಾಂತ್‌ ಸಂಬರಗಿ ಹೇಳಿದ್ದೇನು?
ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿರುವ ಪ್ರಶಾಂತ್‌ "ಕನ್ನಡ ಚಿತ್ರರಂಗದ ಒಬ್ಬ ಖ್ಯಾತ ಸಂಗೀತ ನಿರ್ದೇಶಕ ಮತ್ತು TV ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿರೋ ನನ್ನ ಸ್ನೇಹಿತನಿಗೆ 2 ವರುಷದ ಹಿಂದೆ ಹಾರ್ಟ್‌ ಅಟ್ಯಾಕ್‌ ಆಯಿತು. ಇದಕ್ಕೆ ಕಾರಣ, ರೌಡಿ ಬಾಸ್ (D boss is now R Boss rowdy boss) ಅದೇ ಆರು ಅಡಿ ಎತ್ತರದ ಮೃಗದಿಂದ ಬೆದರಿಕೆಯ ಕರೆ ಮತ್ತು ಮಾನಸಿಕ ಹಿಂಸೆ" ಎಂದು ಬರೆದುಕೊಂಡಿದ್ದಾರೆ.

Advertisement

https://www.facebook.com/share/p/DAugFBKLzD2iHxSi/?mibextid=oFDknk

ಮುನ್ನಲೆಗೆ ಬಂದ ಮ್ಯಾನೇಜರ್ ನಾಪತ್ತೆ ವಿಚಾರ !!
ದಶಕದ ಹಿಂದೆ ದರ್ಶನ್‌ಗೆ ಮಲ್ಲಿಕಾರ್ಜುನ್ ಅಲಿಯಾಸ್‌ ಮಲ್ಲಿ ಎಂಬುವರು ಮ್ಯಾನೇಜರ್ ಆಗಿದ್ದರು. ದರ್ಶನ್‌ ಡೇಟ್ಸ್‌ ಅನ್ನು ಮಲ್ಲಿಕಾರ್ಜುನ್‌ ಮ್ಯಾನೇಜ್ ಮಾಡುತ್ತಿದ್ದರು. ದರ್ಶನ್‌ಗೆ ಸಂಬಂಧಿಸಿದ ಕೆಲ ವ್ಯವಹಾರಗಳನ್ನೂ ಮಲ್ಲಿಕಾರ್ಜುನ್ ನೋಡಿಕೊಳ್ಳುತ್ತಿದ್ದರು. ಕೆಲವು ಸಿನಿಮಾಗಳನ್ನೂ ಮಲ್ಲಿಕಾರ್ಜುನ್ ವಿತರಣೆ ಮಾಡಿದ್ದರು.

ಅರ್ಜುನ್ ಸರ್ಜಾ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆಯಲ್ಲಿ ವಂಚನೆ ಆರೋಪ ಎದುರಿಸಿದ್ದರು. ಈ ಬಗ್ಗೆ ಅರ್ಜುನ್​ ಸರ್ಜಾ ದೂರು ನೀಡಿ, ತಮಗೆ ಒಂದು ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದಿದ್ದರು. ಈ ಘಟನೆ ಬಳಿಕ ದರ್ಶನ್​ ಅವರು ಮಲ್ಲಿಕಾರ್ಜುನ ಮೇಲೆ ಗರಂ ಆಗಿದ್ದರು ಎನ್ನಲಾಗಿದೆ. ಇಂತಿಪ್ಪ ಮಲ್ಲಿಕಾರ್ಜುನ್‌ 2018ರಿಂದ ಏಕಾಏಕಿ ನಾಪತ್ತೆಯಾಗಿಬಿಟ್ಟರು.

2018ರಿಂದ ಕಾಣೆಯಾಗಿದ್ದ ಮ್ಯಾನೇಜರ್ ಈವರೆಗೂ ಅವರು ಪತ್ತೆಯಾಗಿಲ್ಲ. ಈ ನಿಗೂಡವಾದ ನಾಪತ್ತೆ ಹೇಗಾಯಿತು ? ದರ್ಶನ್ ಅವರದ್ದೇ ಕಿತಾಪತಿಯೇ? ಎಂಬ ಚರ್ಚೆಗಳು ಶುರುವಾಗಿವೆ. ಈ ಬೆನ್ನಲ್ಲೇ ಮ್ಯಾನೇಜರ್ ಮಲ್ಲಿಕಾರ್ಜುನ್(Mallikharjun) ಬರೆದ ಪತ್ರವೊಂದು(Letter) ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

Advertisement
Advertisement
Advertisement