ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mangaluru: ಎಚ್ಚರ! ಸಮುದ್ರಪಾಲಾಗಲಿದೆ ಮಂಗಳೂರು, ಉಡುಪಿಯ ಶೇ.5 ರಷ್ಟು ಭೂಮಿ!

Mangaluru: ಸಮುದ್ರದ ಅಂಚಿನಲ್ಲಿರುವ ಕರಾವಳಿಗರೇ ಎಚ್ಚರ! ಯಾಕೆಂದರೆ 2040ಕ್ಕೆ ಮಂಗಳೂರು, ಉಡುಪಿಯ ಶೇ.5 ರಷ್ಟು ಭೂಮಿ ಸಮುದ್ರಪಾಲು ಆಗಲಿದೆ.
11:53 AM Aug 01, 2024 IST | ಕಾವ್ಯ ವಾಣಿ
UpdateAt: 11:54 AM Aug 01, 2024 IST
Advertisement

Mangaluru: ಸಮುದ್ರದ ಅಂಚಿನಲ್ಲಿರುವ ಕರಾವಳಿಗರೇ ಎಚ್ಚರ! ಯಾಕೆಂದರೆ 2040ಕ್ಕೆ ಮಂಗಳೂರು, ಉಡುಪಿಯ ಶೇ.5 ರಷ್ಟು ಭೂಮಿ ಸಮುದ್ರಪಾಲು ಆಗಲಿದೆ. ಹೌದು, ಹವಾಮಾನ ಬದಲಾವಣೆಯ ಪರಿಣಾಮಗಳಿಂದ ನಾನಾ ರೀತಿಯ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುವ ನಡುವೆಯೇ, ಸಮುದ್ರಮಟ್ಟದ ಏರಿಕೆಯ ಪರಿಣಾಮ ಕರ್ನಾಟಕದ ಮಂಗಳೂರು (Mangaluru) , ಉಡುಪಿ ಸೇರಿದಂತೆ ದೇಶದ ಹಲವು ಕರಾವಳಿ ನಗರಗಳ ಪ್ರದೇಶ ಸಮುದ್ರದ ಪಾಲಾಗಲಿದೆ.

Advertisement

ಮುಖ್ಯವಾಗಿ ಬರುವ 2040 ರ ಸಮಯಕ್ಕೆ ಮಂಗಳೂರು, ಉಡುಪಿ ಸೇರಿದಂತೆ ದೇಶದ ಹಲವು ಕರಾವಳಿ ನಗರಗಳ ಪ್ರದೇಶ ಸಮುದ್ರದ ಪಾಲಾಗಲಿದೆ ಎಂದು  ಬೆಂಗಳೂರು ಮೂಲದ ಚಿಂತಕರ ತಂಡ ‘ಸೆಂಟರ್‌ ಫಾರ್‌ ಸ್ಟಡಿ ಆಫ್‌ ಸೈನ್ಸಸ್‌’ ಬಿಡುಗಡೆ ಮಾಡಿರುವ ವರದಿ ಎಚ್ಚರಿಕೆ ನೀಡಿದೆ. ಹೌದು, ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯ ಈ ಹಿಂದಿನ ಅಂಕಿ ಅಂಶಗಳು ಮತ್ತು ಭವಿಷ್ಯದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಆಗಬಹುದಾದ ನೀರಿನ ಮಟ್ಟವನ್ನು ಊಹಿಸಿ ಈ ವರದಿ ತಯಾರಿಸಲಾಗಿದೆ.

ಹೌದು, ಹವಾಮಾನ ಬದಲಾವಣೆ ಪರಿಣಾಮಗಳಿಂದ ಸಮುದ್ರದ ನೀರಿನ ಮಟ್ಟದಲ್ಲಿ ಉಂಟಾಗುವ ಏರಿಕೆಯು ಮಂಗಳೂರು ಮತ್ತು ಉಡುಪಿಯ ಶೇ.5ರಷ್ಟು ಭೂಭಾಗಗಳನ್ನು ಆವರಿಸಿಕೊಳ್ಳಲಿದೆ. ಇದೇ ರೀತಿ ಕರಾವಳಿ ನಗರಗಳಾದ ಮುಂಬೈ, ಕೊಚ್ಚಿ, ವಿಶಾಖಪಟ್ಟಣ, ಹಲ್ದಿಯಾ, ಪುರಿ, ಚೆನ್ನೈ, ತಿರುವನಂತಪುರ, ಕಲ್ಲಿಕೋಟೆ,, ಕನ್ಯಾಕುಮಾರಿ, ಪಣಜಿ, ಪಾರಾದೀಪ್‌, ತೂತ್ತುಕುಡಿ ಮತ್ತು ಯಾನಂ ನಗರಗಳು ಕೂಡಾ ಸಮಸ್ಯೆಗೆ ತುತ್ತಾಗಲಿವೆ ಎಂದು ವರದಿ ಎಚ್ಚರಿಸಿದೆ.

Advertisement

ಇನ್ನು ಉಳಿದ ಕರಾವಳಿ ನಗರಗಳಿಗೆ ಹೋಲಿಸಿದರೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ, ಪಾಂಡಿಚೇರಿಗೆ ಯಾನಂ ಮತ್ತು ತಮಿಳುನಾಡಿನ ತೂತ್ತುಕುಡಿ ನಗರಗಳು ತಮ್ಮ ಭೂಭಾಗದ ಪೈಕಿ ಶೇ.10ಕ್ಕಿಂತ ಜಾಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಅದಲ್ಲದೆ ಪಣಜಿ ಮತ್ತು ಚೆನ್ನೈ ಶೇ.5ರಿಂದ ಶೇ.10, ಉಳಿದ ನಗರಗಳು ಶೇ.1-ಶೇ.5ರಷ್ಟು ಭೂಭಾಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.

ಇತಿಹಾಸ ಪ್ರಕಾರ 1987ರಿಂದ 2021ರ ಅವಧಿಯಲ್ಲಿ ಮುಂಬೈನಲ್ಲಿ ಸಮುದ್ರದ ನೀರಿನ ಮಟ್ಟದಲ್ಲಿ 4.440 ಸೆಂ.ಮೀ., ಹಲ್ದಿಯಾದಲ್ಲಿ 2.726 ಸೆಂ.ಮೀ., ವಿಶಾಖಪಟ್ಟಣದಲ್ಲಿ 2.381 ಸೆಂ.ಮೀ., ಕೊಚ್ಚಿ 2.213 ಸೆಂ.ಮೀ., ಪಾರಾದೀಪ್‌ನಲ್ಲಿ 0.717 ಸೆಂ.ಮೀ., ಚೆನ್ನೈನಲ್ಲಿ 0.679 ಸೆಂ.ಮೀ.ನಷ್ಟು ಏರಿಕೆ ದಾಖಲಾಗಿದೆ.

ಇನ್ನು ಮುಂದಿನ ಪೀಳಿಗೆಯಲ್ಲಿ ಸಂಸ್ಥೆಯ ವರದಿ ಅನ್ವಯ 2100ರ ವೇಳೆಗೆ ಮುಂಬೈನಲ್ಲಿ ಸಮುದ್ರದ ನೀರಿನ ಮಟ್ಟ 76.2 ಸೆಂ.ಮೀ., ಪಣಜಿಯಲ್ಲಿ 75.5 ಸೆಂ.ಮೀ., ಉಡುಪಿಯಲ್ಲಿ 75.2 ಸೆಂ.ಮೀ., ಮಂಗಳೂರಿನಲ್ಲಿ 75.2 ಸೆಂ.ಮೀ., ಕಲ್ಲಿಕೋಟೆಯಲ್ಲಿ 75.1 ಸೆಂ.ಮೀ., ಕೊಚ್ಚಿಯಲ್ಲಿ 74.9 ಸೆಂ.ಮೀ., ತಿರುವನಂತಪುರದಲ್ಲಿ 74.7 ಸೆಂ.ಮೀ., ಮತ್ತು ಕನ್ಯಾಕುಮಾರಿಯಲ್ಲಿ 74.7 ಸೆಂ.ಮೀ.ನಷ್ಟು ಏರಿಕೆಯಾಗಲಿದೆ ಎಂದು ಭವಿಷ್ಯದ ವರದಿಯಲ್ಲಿ ತಿಳಿದು ಬಂದಿದೆ.

PM Awas Yojana: ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಮನೆ ಸೌಲಭ್ಯ; ಈ ರೀತಿ ಅರ್ಜಿ ಸಲ್ಲಿಸಿ

Related News

Advertisement
Advertisement