ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Love: ಗೆಳೆಯನ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್‌ಗೆ ಹಾಕಿದ ಪ್ರಿಯತಮೆ; ಕಾರಣ ಕೇಳಿ ಶಾಕ್‌ ಆದ ಪೊಲೀಸರು

Love : ಬಾಯ್‌ಫ್ರೆಂಡ್‌ ಸಮ್ಮಿಲನಕ್ಕೆ ಬಂದಿದ್ದ. ಇವರಿಬ್ಬರಿಗೆ ಇದೇನು ಹೊಸದಾಗಿರಲಿಲ್ಲ. ಆದರೆ ಸಮ್ಮಿಲನ ಮಾಡಲೆಂದು ಬಂದವನ ಮರ್ಮಾಂಗ ಕತ್ತರಿಸಿದ ಗೆಳತಿ ಟಾಯ್ಲೆಟ್‌ಗೆ ಹಾಕಿ ಫ್ಲಶ್‌ ಮಾಡಿದ್ದಾಳೆ.
09:14 AM Jul 02, 2024 IST | ಸುದರ್ಶನ್
UpdateAt: 09:14 AM Jul 02, 2024 IST
Advertisement

Love : ಅವರಿಬ್ಬರು ಪ್ರೀತಿ ಮಾಡುತ್ತಿದ್ದರು. ಪ್ರೀತಿ ಆಗಿದ್ದರಿಂದ ದೈಹಿಕ ಸಂಪರ್ಕ ಹಲವು ಬಾರಿ ಕೂಡಾ ಆಗಿದೆ. ಈ ನಡುವೆ ಬಾಯ್‌ಫ್ರೆಂಡ್‌ ಮದುವೆಯಾಗುವಂತೆ ಯುವತಿ ಹೇಳಿದ್ದರೂ ಮುಂದೂಡುತ್ತಿದ್ದ. ಆದರೆ ಅನಂತರ ಒಪ್ಪಿಕೊಂಡು ಖುಷಿಯಲ್ಲಿ ಮದುವೆಯ ತಯಾರಿಗಳು ಆರಂಭಗೊಂಡಿದೆ. ಈ ನಡುವೆ ಬಾಯ್‌ಫ್ರೆಂಡ್‌ ಸಮ್ಮಿಲನಕ್ಕೆ ಬಂದಿದ್ದ. ಇವರಿಬ್ಬರಿಗೆ ಇದೇನು ಹೊಸದಾಗಿರಲಿಲ್ಲ. ಆದರೆ ಸಮ್ಮಿಲನ ಮಾಡಲೆಂದು ಬಂದವನ ಮರ್ಮಾಂಗ ಕತ್ತರಿಸಿದ ಗೆಳತಿ ಟಾಯ್ಲೆಟ್‌ಗೆ ಹಾಕಿ ಫ್ಲಶ್‌ ಮಾಡಿದ್ದಾಳೆ.

Advertisement

D V Sadananda Gowda: ಮೋದಿಯ ಮೇಲಿಟ್ಟ ಅತಿಯಾದ ಆತ್ಮವಿಶ್ವಾಸವೇ ನಮ್ಮನ್ನು ಸೋಲಿಸಿತು – ಬಿಜೆಪಿ ವಿರುದ್ಧ ಸಿಡಿದೆದ್ದ ಸದಾನಂದ ಗೌಡ !!

Advertisement

ಇಂತಹ ಒಂದು ವಿಲಕ್ಷಣ ಘಟನೆ ನಡೆದಿರುವುದು ಬಿಹಾರದ ಸರನ್‌ ಜಿಲ್ಲೆಯಲ್ಲಿ. ಕಾರಣ ಕೇಳಿದ ಪೊಲೀಸರಂತೂ ಇಬ್ಬರ ವಿರುದ್ಧವೂ ಇದೀಗ ಪ್ರಕರಣ ದಾಖಲು ಮಾಡಿದ್ದಾರೆ. ಇತ್ತ ಬಾಯ್‌ಫ್ರೆಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಗೆಳತಿ ಜೈಲು ಕಂಬಿ ಎಣಿಸುತ್ತಿದ್ದಾಳೆ.

ಪಾಟ್ನಾದ ಮಧೌರದ 12ನೇ ವಾರ್ಡ್‌ನ ಕೌನ್ಸಿಲರ್‌ ವೇದ ಪ್ರಕಾಶ್‌ ನರ್ಸಿಂಗ್‌ ಹೋಮ್‌ ಮಾಲಕಿ ಜೊತೆ ಪ್ರೀತಿಯಲ್ಲಿದ್ದ. ಆಕೆಯ ಹಿಂದೆ ಬಿದ್ದು ಆಕೆಗೆ ತನ್ನ ಪ್ರೀತಿ ನಿವೇದನೆ ಮಾಡಿ ನಂತರ ಆಕೆ ಒಪ್ಪಿಗೆ ಕೊಟ್ಟು, ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿಲರಾದ ಸ್ಥಿತಿಗೆ ಬಂದಿದ್ದಾರೆ. ಪ್ರೀತಿ, ಲೈಂಗಿಕ ಸಂಪರ್ಕ ಸುದೀರ್ಘ ವರ್ಷಗಳಿಂದ ಮುಂದುವರಿದಿದೆ. ಕೊನೆಗೂ ಗೆಳತಿ ಒತ್ತಾಯದ ಮೇರೆಗೆ ಮದುವೆಗೆ ವೇದ ಪ್ರಕಾಶ್‌ ಮದುವೆಗೆ ಒಪ್ಪಿಗೆ ನೀಡಿದ್ದಾನೆ.

ಮದುವೆ ದಿನಾಂಕ ಫಿಕ್ಸ್‌ ಆಗಿದೆ. ಎಲ್ಲಾ ತಯಾರಿ ಮಾಡಲಾಗಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ. ಮದುವೆ ದಿನಾಂಕ ಹತ್ತಿರ ಬರುತ್ತಿದ್ದಂತೆ ನಾನು ಮದುವೆಯಾಗಲ್ಲ ಎಂದು ಹೇಳಿದ್ದಾನೆ. ಹೀಗೇ ಇರೋಣ, ಮದುವೆ ಯಾಕೆ ಎಂದು ಪ್ರಶ್ನೆ ಮಾಡೋಕೆ ಶುರು ಮಾಡಿದ್ದಾನೆ.

ಗೆಳತಿ ತನ್ನ ಬಾಯ್‌ಫ್ರೆಂಡ್‌ನ ಮನವೊಲಿಸಲು ಹಲವು ಪ್ರಯತ್ನ ಮಾಡಿದ್ದಾಳೆ. ಆದರೆ ಆತ ಮಾತ್ರ ಮದುವೆ ಯಾಕೆ? ಹೀಗೆ ಇದ್ದರೆ ಒಳ್ಳೆಯದು ಎನ್ನುತ್ತಲೇ ತನ್ನ ತಗಾದೆ ತೆಗೆದಿದ್ದಾನೆ. ಇತ್ತ ಮದುವೆ ಮೆಹಂದಿ ದಿನ ಫೋನ್‌ ಮಾಡಿದ ವೇದಪ್ರಕಾಶ್‌ ಮದುವೆ ಕ್ಯಾನ್ಸಲ್‌ ಮಾಡಲು ಹೇಳಿದ್ದಾನೆ. ತಾಳ್ಮೆ ಕಳೆದುಕೊಳ್ಳದ ಗೆಳತಿ, ಫೋನ್‌ನಲ್ಲಿ ಬೇಡ, ಭೇಟಿಯಾಗು ಎಂದು ಹೇಳಿದ್ದಾಳೆ.

ಬಾಯ್‌ಫ್ರೆಂಡ್‌ ಬಂದಿದ್ದು, ಗೆಳತಿಯು ಮೊದಲು ಎಂದಿನಂತೆ ನಾವು ಲೈಂಗಿಕ ಕ್ರಿಯೆ ಮಾಡೋಣ. ಬಳಿಕ ಮದುವೆ ಕುರಿತು ಮಾತನಾಡೋಣ ಎಂದಿದ್ದಾಳೆ. ಇದರಿಂದ ಖುಷಿಯಾದ ಬಾಯ್‌ಫ್ರೆಂಡ್‌ ಲೈಂಗಿಕ ಕ್ರಿಯೆಯಲ್ಲಿದ್ದಾಗ ಮರ್ಮಾಂಗ ಕತ್ತರಿಸಿಯೇ ಬಿಟ್ಟಳು ಗೆಳತಿ. ನಂತರ ಟಾಯ್ಲೆಟ್‌ಗೆ ಹಾಕಿ ಫ್ಲಶ್‌ ಮಾಡಿದ್ದಾಳೆ. ಈತ ಇತ್ತ ಚೀರಾಡುತ್ತಾ ಪೊಲೀಸರಿಗೆ ಫೋನ್‌ ಮಾಡಿದ್ದು, ನಂತರ ಅಸ್ವಸ್ಥಗೊಂಡಿದ್ದಾನೆ.

ಪೊಲೀಸರು ಸ್ಥಳಕ್ಕೆ ಬಂದಿದ್ದು, ಗೆಳತಿಯನ್ನು ಬಂಧನ ಮಾಡಿದ್ದು, ಬಳಿಕ ಪೊಲೀಸರಿಗೆ ಕಾರಣ ತಿಳಿಸಿದ್ದಾಳೆ. ನನಗೆ ಇದರಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾಳೆ. ಪ್ರೀತಿ ನಾಟಕ ಮಾಡಿ ದೈಹಿಕ ಸಂಪರ್ಕ ಓಕೆ ಅಂದ ಈತ ಮಹಾ ಪಾಪಿ ಎಂದು ಪೊಲೀಸರಿಗೆ ಹೇಳಿದ್ದಾಳೆ.

Chitral Rangaswamy: ಹೆಣ್ಣು ಮಕ್ಕಳಿಗೆ ನ್ಯಾಯ, ರಕ್ಷಣೆ ಸಿಗಬೇಕಂದ್ರೆ ದರ್ಶನ್ ರಾಜ್ಯದ ಸಿಎಂ ಆಗ್ಬೇಕು – ಚಿತ್ರಾಲ್ ಅಚ್ಚರಿ ಸ್ಟೇಟ್ಮೆಂಟ್ !!

Advertisement
Advertisement