ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Rohit Sharma: ರೋಹಿತ್ ಶರ್ಮಾಗೆ ಇದು ಕೊನೆಯ IPL ಸೀಸನ್ ! : ಕೆಕೆಆರ್ ಕೋಚ್ ಜೊತೆ ರೋಹಿತ್ ಶರ್ಮಾ ಹೇಳಿದ್ದಾದರೂ ಏನು? : ಇಲ್ಲಿ ನೋಡಿ

Rohit Sharma: ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ಕೈ ಬಿಟ್ಟು ಮುಂಬೈ ಹಾರ್ದಿಕ್ ಪಾಂಡ್ಯಗೆ ಜವಾಬ್ದಾರಿಯನ್ನು ಹಸ್ತಾಂತರಿಸಿತ್ತು. ಈ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ನಂತರ ರೋಹಿತ್ ಶರ್ಮಾ ಮುಂಬೈ ತೊರೆಯಲಿದ್ದಾರೆ ಎಂಬ ಸುದ್ದಿ ಹರಡಿದ್ದು, ರೋಹಿತ್ ಶರ್ಮಾ ಮಾಡಿರುವ ಕಾಮೆಂಟ್ ಎಲ್ಲೆಡೆ ವೈರಲ್ ಆಗುತ್ತಿದೆ.
01:36 PM May 12, 2024 IST | ಸುದರ್ಶನ್
UpdateAt: 01:36 PM May 12, 2024 IST
Advertisement

Rohit Sharma: ಮುಂಬೈ ಇಂಡಿಯನ್ಸ್ (Mumbai Indians) ಐಪಿಎಲ್ 2024 ರ ಪ್ಲೇ-ಆಫ್‌ನಿಂದ ನಿರ್ಗಮಿಸಿದ ಮೊದಲ ತಂಡವಾಗಿ ಗುರುತಿಸಿಕೊಂಡಿದೆ. ಈ ಋತುವಿನಲ್ಲಿ ಕಳಪೆ ಪ್ರದರ್ಶನದ ಕಾರಣ ತಂಡವು ಪ್ಲೇ(play-off)ಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಈ ಋತುವಿನಲ್ಲಿ ರೋಹಿತ್ ಶರ್ಮಾ(Rohit Sharma) ಅವರನ್ನು ನಾಯಕ ಸ್ಥಾನದಿಂದ ಕೈ ಬಿಟ್ಟು ಮುಂಬೈ ಹಾರ್ದಿಕ್ ಪಾಂಡ್ಯಗೆ(Hardik Pandya) ಜವಾಬ್ದಾರಿಯನ್ನು ಹಸ್ತಾಂತರಿಸಿತ್ತು. ಈ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಋತುವಿನ ನಂತರ ರೋಹಿತ್ ಶರ್ಮಾ ಮುಂಬೈ ತೊರೆಯಲಿದ್ದಾರೆ ಎಂಬ ಸುದ್ದಿಯಿದೆ. ಈ ಹಿನ್ನಲೆಯಲ್ಲಿ ರೋಹಿತ್ ಶರ್ಮಾ ಮಾಡಿರುವ ಕಾಮೆಂಟ್ ಎಲ್ಲೆಡೆ ವೈರಲ್ ಆಗುತ್ತಿದೆ.

Advertisement

ಇದನ್ನೂ ಓದಿ: Katrina Kaif pregnant: ನಟಿ ಕತ್ರಿನಾ ಕೈಫ್ ಪ್ರೆಗ್ನೆಂಟ್? : ಹೊರ ಬಿತ್ತು ಬಿಗ್ ಸೀಕ್ರೆಟ್

ಐಪಿಎಲ್ 2024ರ(IPL-2024) ಭಾಗವಾಗಿ, ಕೋಲ್ಕತ್ತಾ ನೈಟ್ ರೈಡರ್ಸ್(Kolkata night riders) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಶನಿವಾರ ಮುಖಾಮುಖಿಯಾಗಲಿವೆ. ಕೆಕೆಆರ್ ಈ ಪಂದ್ಯವನ್ನು ಗೆದ್ದು ಅಗ್ರ-2 ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಭರವಸೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳು ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿವೆ. ಆದರೆ ಪಂದ್ಯದ ಅಭ್ಯಾಸದ ವೇಳೆ ಕೆಕೆಆರ್ ಸಹಾಯಕ ಕೋಚ್ ರೋಹಿತ್ ಶರ್ಮಾ ಮಾಜಿ ಸ್ನೇಹಿತ ಅಭಿಷೇಕ್ ನಾಯರ್(Abhishek Iyer) ಜೊತೆ ಸಂಭಾಷಣೆ ನಡೆಸಿದ್ದಾರೆ. ಈ ಸಂಭಾಷಣೆಯನ್ನು ಚಿತ್ರೀಕರಿಸಿರುವ ಕೆಕೆಆರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಆ ವಿಡಿಯೋದಲ್ಲಿನ ಪದಗಳು ಸಂಚಲನವಾಗುತ್ತಿದ್ದಂತೆ ಪೋಸ್ಟ್ ಅನ್ನು ತಕ್ಷಣವೇ ಅಳಿಸಲಾಗಿದೆ. ಆದರೆ ಈ ವಿಡಿಯೋ ಈಗಾಗಲೇ ಅಂತರ್ಜಾಲದಲ್ಲಿ ವೈರಲ್ ಆಗಿದೆ.

Advertisement

ಇದನ್ನೂ ಓದಿ: Number Plates: ಭಾರತದ ವಾಹನ ನಂಬರ್‌ ಪ್ಲೇಟ್‌ಗಳಲ್ಲಿ ಹಲವು ಸೀಕ್ರೆಟ್ ಗಳಿವೆಯಂತೆ! ನಿಮಗದು ಗೊತ್ತಾ?

ಅಸಲಿಗೆ ವಿಡಿಯೋದಲ್ಲಿ ಏನಿದೆ?

ಕೋಲ್ಕತ್ತಾದ ಈಡನ್ ಗಾರ್ಡನ್ಸ್(Edan garden) ಮೈದಾನದಲ್ಲಿ ರೋಹಿತ್ ಮತ್ತು ಅಭಿಷೇಕ್ ಶರ್ಮಾ ಮಾತನಾಡಿದ್ದು, "ತಂಡದಲ್ಲಿ ಎಲ್ಲವೂ ಒಂದೊಂದಾಗಿ ಬದಲಾಗುತ್ತಿದೆ. ಅದು ಅವರವರ ಮೇಲೆ ಅವಲಂಬಿತವಾಗಿದೆ. ಆದರೆ ನಾನು ಅವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಏನೇ ಇರಲಿ, ಇದು ನನ್ನ ಮನೆ. ನಾನು ಆ ದೇವಸ್ಥಾನವನ್ನು ನಿರ್ಮಿಸಿದ್ದೇನೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಆದರೆ ಕೊನೆಯಲ್ಲಿ ರೋಹಿತ್ ಶರ್ಮಾ ಹೇಳಿದ ಮಾತುಗಳು ಅಸ್ಪಷ್ಟವಾಗಿವೆ. ಅಂತಿಮವಾಗಿ ತಂಡಕ್ಕೆ ಭಾಯ್, ಇದೇ ಕೊನೆಯ ಆಟ' ಎಂದು ರೋಹಿತ್ ಶರ್ಮಾ ಹೇಳಿದ್ದಾರೆ ಎಂದು ವಿಡಿಯೋದಲ್ಲಿ ಹರಿದಾಡುತ್ತಿದೆ.

ಈ ಋತುವಿನ ನಂತರ ರೋಹಿತ್ ಶರ್ಮಾ ಐಪಿಎಲ್‌ ಗೆ ವಿದಾಯ ಹೇಳುತ್ತಾರಾ? ಅಥವಾ ಮುಂಬೈ -ಇಂಡಿಯನ್ಸ್ ಪರವಾಗಿ ಕೊನೆಯ ಸೀಸನ್ ಆಡುತ್ತಿದ್ದೇನೆ ಎಂದು ಹೇಳಿದ್ದಾರಾ? ಎಂಬ ಪ್ರಶ್ನೆಗಳು ಮೂಡುತ್ತವೆ. ಇದು ಕೊನೆಯದು ಎಂದು ರೋಹಿತ್ ಶರ್ಮಾ ಎಲ್ಲಿಯೂ ಪ್ರತಿಕ್ರಿಯಿಸಿಲ್ಲ ಎಂದು ಅಭಿಮಾನಿಗಳು ಹೇಳುತ್ತಾರೆ.

Advertisement
Advertisement