For the best experience, open
https://m.hosakannada.com
on your mobile browser.
Advertisement

Kodi Mutt Shri: ರಾಜ್ಯದಲ್ಲಿ ಯುಗಾದಿ ಬಳಿಕ ಭರ್ಜರಿ ಮಳೆ - ಕೋಡಿ ಶ್ರೀ ಭವಿಷ್ಯ !!

Kodi Mutt Shri: ಶ್ರೀಗಳು ಯುಗಾದಿ ಕಳೆದ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ.
08:30 AM Apr 09, 2024 IST | ಸುದರ್ಶನ್
UpdateAt: 08:31 AM Apr 09, 2024 IST
kodi mutt shri  ರಾಜ್ಯದಲ್ಲಿ ಯುಗಾದಿ ಬಳಿಕ ಭರ್ಜರಿ ಮಳೆ   ಕೋಡಿ ಶ್ರೀ ಭವಿಷ್ಯ
Image Credit Source: TV9 Kannada

Kodi Mutt Shri: ಕೋಡಿಮಠ ಸ್ವಾಮಿಜಿಗಳ ಭವಿಷ್ಯಕ್ಕೆ ತುಂಬಾ ಮಹತ್ವವಿದೆ. ಅವರ ಎಲ್ಲಾ ಭವಿಷ್ಯಗಳು ನಿಜವಾಗಿವೆ. ರಾಜಕೀಯವಾಗಿ, ಜಾಗತಿಕವಾಗಿ, ರಾಷ್ಟ್ರದ ವಿಚಾರವಾಗಿ ಹಾಗೂ ಮಳೆ, ಬೆಳೆ, ಪ್ರವಾಹಗಳ ಕುರಿತಾಗಿಯೂ ಅವರು ಭವಿಷ್ಯ ನುಡಿದಿದ್ದು ಅವೆಲ್ಲವೂ ಸಂಭವಿಸಿವೆ. ಅಂತೆಯೇ ಇದೀಗ ಶ್ರೀಗಳು(Kodi Mutt Shri) ಮಳೆ, ಬೆಳೆ ಕುರಿತು ಹೊಸ ಭವಿಷ್ಯ ನುಡಿದಿದ್ದು, ನಾಡಿನ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

Advertisement

ಹೌದು, ಕಳೆದ ಕೆಲವು ತಿಂಗಳುಗಳಿಂದ ಈ ವರ್ಷದ ಮಳೆ ಬಗ್ಗೆ ಭವಿಷ್ಯ ನುಡಿಯುತ್ತಿರುವ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಯ(Dr Shivanand Shivayogi Swamiji)ವರು ಈ ವರ್ಷ ಉತ್ತಮ ಮಳೆ, ಬೆಳೆ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅಂತೆಯೇ ಇದೀಗ ಈ ಭವಿಷ್ಯವನ್ನು ಪುನರುಚ್ಚರಿಸಿರುವ ಶ್ರೀಗಳು ಯುಗಾದಿ ಕಳೆದ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಸದ ವಾಹನ ಮಾಲಿಕರಿಗೆ ಬೆಳ್ಳಂಬೆಳಗ್ಗೆಯೇ ಶಾಕ್ ಕೊಟ್ಟ RTO !

Advertisement

ಕೋಲಾರದ(Kolara) ಮಾಲೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತ ಕೋಡಿಮಠದ ಸ್ವಾಮೀಜಿಯವರು, ರಾಜ್ಯದಲ್ಲಿ ಯುಗಾದಿ ಕಳೆದ ನಂತ್ರ, ಒಳ್ಳೆ ಬೆಳೆ, ಮಳೆಯಾಗುವ ಲಕ್ಷಣಗಳಿವೆ. ಬೆಂಕಿ ಹಾವಳಿ, ನೀರಿನ ಹಾವಳಿ ಹೆಚ್ಚಾಗುತ್ತೆ, ಯುದ್ದ‌ ಆಗುತ್ತೆ. ಅನೇಕ‌ ಸಾವು ನೋವುಗಳು ಆಗುತ್ತೆ ಎಂದರು. ಜಾಗತಿಕ ಮಟ್ಟದಲ್ಲಿ ಮತಾಂದತೆ ಹೆಚ್ಚಾಗುತ್ತದೆ ಎಂದೂ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅಘಾತಕಾರಿ ಘಟನೆ; ಗನ್ ಹಿಡಿದು ಸಿದ್ದರಾಮಯ್ಯಗೆ ಹಾರ ಹಾಕಿದ ಆಗಂತುಕ; ಮುಂದೇನಾಯ್ತು?

Advertisement
Advertisement