For the best experience, open
https://m.hosakannada.com
on your mobile browser.
Advertisement

Accident: ಬಸ್‌ ಪಲ್ಟಿ; ಚಾಲಕ ಸಾವು, ವಿದ್ಯಾರ್ಥಿಗಳು ಸೇರಿ 20 ಮಂದಿಗೆ ಗಾಯ

11:12 AM Mar 19, 2024 IST | ಹೊಸ ಕನ್ನಡ
UpdateAt: 11:17 AM Mar 19, 2024 IST
accident  ಬಸ್‌ ಪಲ್ಟಿ  ಚಾಲಕ ಸಾವು  ವಿದ್ಯಾರ್ಥಿಗಳು ಸೇರಿ 20 ಮಂದಿಗೆ ಗಾಯ

Kasaragod: ಖಾಸಗಿ ಬಸ್‌ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತ ಹೊಂದಿದ್ದು, ವಿದ್ಯಾರ್ಥಿಗಳು ಸೇರಿ 20 ಮಂದಿ ಗಾಯಗೊಂಡ ಘಟನೆಯೊಂದು ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಚಾಲಿಂಗಾಲ್‌ ನಲ್ಲಿ ನಿನ್ನೆ(ಸೋಮವಾರ) ನಡೆದಿದೆ.

Advertisement

ಇದನ್ನೂ ಓದಿ: Bengaluru Crime News: ಪತ್ನಿಗೆ ಅಶ್ಲೀಲ ವೀಡಿಯೋ ಕಳುಹಿಸಿದ ಪತಿ; ಜೈಲು ಶಿಕ್ಷೆ ಜೊತೆಗೆ ರೂ.45 ಸಾವಿರ ದಂಡ

ಮಧೂರು ರಾಮನಗರದ ಚೇತನ್‌ ಕುಮಾರ್‌ (37) ಎಂಬಾತನೇ ಮೃತ ಚಾಲಕ ಎಂದು ಗುರುತಿಸಲಾಗಿದೆ.

Advertisement

ಮಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಚಾಲಿಂಗಾಲ್‌ನ ಪೆರಿಯ ಗ್ರಾಮ ಪಂಚಾಯತ್‌ ಕಚೇರಿ ಸಮೀಪದಲ್ಲಿ ಅಪಘಾತಕ್ಕೀಡಾಗಿದೆ.

ಇದನ್ನೂ ಓದಿ: Women Dies: ಮದುವೆಯಾದ ವರ್ಷದಲ್ಲೇ ನವವಧು ಸಾವು; ಬೀಗರ ಮನೆಗೆ ಬೆಂಕಿ ಇಟ್ಟ ಪೋಷಕರು, ಅತ್ತೆ, ಮಾವನ ಸಜೀವ ದಹನ

ಚಾಲಿಂಗಾಲ್‌ನಲ್ಲಿ ಟೋಲ್‌ ಬೂತ್‌ ನಿರ್ಮಿಸಲು ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ ಹೊಡೆದಿದೆ. ಸ್ಥಳೀಯ ನಿವಾಸಿಗಳು, ಅಗ್ನಿಶಾಮಕದಳದ ಸಿಬ್ಬಂದಿಗಳು, ಪೊಲೀಸರು ಬಸ್ಸಿನಡಿ ಸಿಲುಕಿದ್ದವನ್ನು ಹೊರತೆಗೆದು ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.

Advertisement
Advertisement