For the best experience, open
https://m.hosakannada.com
on your mobile browser.
Advertisement

Yuvaraj Divorce Case: ಯುವರಾಜ್ - ಶ್ರೀದೇವಿ ಡೈವೋರ್ಸ್ ಜಗಳದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಹೆಸರು- ಸ್ಫೋಟಕ ವಿಷ್ಯ ಹೊರ ಹಾಕಿದ ಪತ್ನಿ !

Yuvaraj Divorce Case: ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಅವರು ಸುದ್ದಿಗೋಷ್ಠಿ ನಡೆಸಿ ಯುವರಾಜ್ ಮೇಲೆ ದೂರುಗಳ ಮೇಲೆ ದೂರು ಹಾಕಿದ್ದಾರೆ.
09:49 AM Jun 11, 2024 IST | ಸುದರ್ಶನ್
UpdateAt: 10:40 AM Jun 11, 2024 IST
yuvaraj divorce case  ಯುವರಾಜ್   ಶ್ರೀದೇವಿ ಡೈವೋರ್ಸ್ ಜಗಳದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಹೆಸರು  ಸ್ಫೋಟಕ ವಿಷ್ಯ ಹೊರ ಹಾಕಿದ ಪತ್ನಿ
Advertisement

Yuvaraj Divorce Case: ಸ್ಯಾಂಡಲ್‌ವುಡ್‌ ನಟ, ದೊಡ್ಮನೆ ಹುಡುಗ, ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯುವ ರಾಜ್‌ಕುಮಾರ್‌ (Yuva Rajkumar) ಪತ್ನಿ ಶ್ರೀದೇವಿಗೆ ಡಿವೋರ್ಸ್‌ ನೋಟಿಸ್‌ ನೀಡಿರುವ ಪ್ರಕರಣಕ್ಕೆ ಹಲವು ಟ್ವಿಸ್ಟ್‌ಗಳ ಜೊತೆ ಆರೋಪ ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದೆ. ಡಿವೋರ್ಸ್‌ ನೋಟಿಸ್‌ ಸಿಕ್ಕಾಗ ಪ್ರತಿಕ್ರಿಯಿಸುವೆ ಎಂದಿದ್ದ ಯುವರಾಜ್ ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಬೆನ್ನಲ್ಲೇ, ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಅವರು ಸುದ್ದಿಗೋಷ್ಠಿ ನಡೆಸಿ ಯುವರಾಜ್ ಮೇಲೆ ದೂರುಗಳ ಮೇಲೆ ದೂರು ಹಾಕಿದ್ದಾರೆ.

Advertisement

“ಏನಾಗಿದೆ ಎಂದು ಚಿತ್ರರಂಗ ಹಾಗೂ ಮಾಧ್ಯಮದ ಅನೇಕರಿಗೆ ತಿಳಿದಿದೆ”; ಯುವ ಪತ್ನಿ ಶ್ರೀದೇವಿ ಭೈರಪ್ಪ ಮೊದಲ ಪ್ರತಿಕ್ರಿಯೆ

“ಹಲ್ಲು ಉಜ್ಜಲ್ಲ, ಸ್ನಾನ ಮಾಡಲ್ಲ, ದೈಹಿಕವಾಗಿ ಫಿಟ್‌ ಇಲ್ಲ ಎಂಬುದಾಗಿ ಶ್ರೀದೇವಿ ಪ್ರಸಾದ್‌ ಅವರು ನಟನಿಗೆ ಕಿರುಕುಳ ನೀಡಿದ್ದಾರೆ” ಎಂಬುದಾಗಿ ಅವರು ಆರೋಪಿಸಿದ್ದಾರೆ.ಅಲ್ಲದೆ, ನಾನು ಅಮೆರಿಕದಲ್ಲಿರುತ್ತೇನೆ, ನೀನು ಬೆಂಗಳೂರಿನಲ್ಲಿಯೇ ಇರು ಎಂಬುದಾಗಿ ಕಿರುಕುಳ ಕೊಟ್ಟಿದ್ದಾರೆ. ಆಕೆಗೆ ಒಬ್ಬ ಬಾಯ್ ಫ್ರೆಂಡ್ ಇದ್ದಾನೆ. ರಾಧಯ್ಯ ಅಂತ. ಒಂದು ತಿಂಗಳ ಹಿಂದೆ ರಾಧಯ್ಯನಿಗೆ ಮದುವೆ ಆಗಿದೆ. ಆ ಸಮಯದಲ್ಲಿ ಆಕೆ ಬಹಳ ಖಿನ್ನತೆಗೆ ಜಾರಿದ್ದರು. ಇದಕ್ಕೆ ಈಗ ಯುವನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ದೈಹಿಕವಾಗಿ ಸಂಪರ್ಕಿಸಲು ಹೋದಾಗ ಅವಮಾನ ಮಾಡಿ, ಹಲ್ಲುಜ್ಜಿಕೊಂಡು ಬಾ, ಸ್ನಾನ ಮಾಡು ಅಂತ ಹೇಳುತ್ತಿದ್ದರು. ನೀನು ದೈಹಿಕವಾಗಿ ಫಿಟ್‌ ಇಲ್ಲ, ರಾಧಯ್ಯ ಫಿಟ್‌ ಇದ್ದಾನೆ ಎಂದು ಅವಮಾನ ಮಾಡುತ್ತಿದ್ದರು. ರಾಧಯ್ಯನ ಹೆಂಡತಿ ಮನೆಯಲ್ಲಿ ಇಲ್ಲದೆ ಇದ್ದಾಗ ಆತನ ಮನೆಗೆ ಹೋಗುತ್ತಾರೆ. ಅಂತಹಾ ರೀತಿಯ ಸಂಬಂಧ ಇಟ್ಟುಕೊಂಡಿದ್ದಾರೆ” ಎಂಬುದಾಗಿ ತಿಳಿಸಿದ್ದಾರೆ.

Advertisement

ಮಾನಸಿಕ, ದೈಹಿಕ ದೌರ್ಜನ್ಯದ ಆಧಾರದ ಮೇಲೆ ನಾವು ಅರ್ಜಿ ಹಾಕಿದ್ದೇವೆ. ಒಟ್ಟು 54 ಪೇಜಿನ ಡಿವೋರ್ಸ್ ಪಿಟೀಷನ್ ಇದು. ಆಕೆಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ, ಈಗ ಯುವ ಶ್ರೀದೇವಿ ಭೈರಪ್ಪ ಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಆಕೆಗೆ ರಾಧಯ್ಯ ಎಂಬ ವ್ಯಕ್ತಿ ಜತೆ ಅಕ್ರಮ ಸಂಬಂಧ ಇದ್ದು, ಅದರಿಂದಾಗಿ ಕಳೆದ ಎರಡು ವರ್ಷಗಳಿಂದ ಯುವ ಹಾಗೂ ಶ್ರೀದೇವಿ ನಡುವಿನ ಸಂಬಂಧ ಹಳಸಿತ್ತು” ಎಂಬುದಾಗಿ ಅವರು ಹೇಳಿದ್ದಾರೆ.

“3 ಕೋಟಿ ರೂ.ಗಿಂತ ಅಧಿಕ ಹಣವನ್ನು ರಾಜ್ ಕುಮಾರ್ ಫಿಲ್ಮ್ ಅಕಾಡೆಮಿಯಿಂದ ಆಕೆಯ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಜತೆಗೆ ರಾಜ್ ಕುಮಾರ್ ಕುಟುಂಬದ ಹೆಸರು ಕೆಡಿಸ್ತೀನಿ ಅಂತ ಬೆದರಿಕೆ ಹಾಕುತ್ತಿದ್ದರು. ಆಕೆ ಮೈಸೂರಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಅಲ್ಲದೆ ಸುಳ್ಳು ಹೇಳಿ, ಅಮೆರಿಕಕ್ಕೆ ಹೋಗಿ ಅಲ್ಲಿ ಮಾಸ್ಟರ್ಸ್ ಮಾಡ್ತಿದ್ದಾರೆ. ಯುವ ಕುಟುಂಬದ ಹಣದಿಂದ ಬೆಂಗಳೂರಲ್ಲಿ ಸುಮಾರು 20ಕ್ಕೂ ಅಧಿಕ ಕಡೆ ಸೈಟ್ ಖರೀದಿ ಮಾಡಿದ್ದಾರೆ” ಎಂದು ವಕೀಲರು ಮಾಹಿತಿ ನೀಡಿದರು.

“ಯುವ ಪತ್ನಿ ಶ್ರೀದೇವಿ ಇಡೀ ಕುಟುಂಬದ ವ್ಯವಹಾರ ಹಾಗೂ ಎಲ್ಲದರ ಮೇಲೂ ಕಂಟ್ರೋಲ್ ಮಾಡಲು ಪ್ರಯತ್ನಿಸಿದ್ದಳು. ಆಕೆಗೆ ಬಾಯ್ ಫ್ರೆಂಡ್ ರಾಧಯ್ಯ ಜತೆ ಸಂಬಂಧ ಇದೆ. ಅಲ್ಲಿ ಆಕೆ ರಾತ್ರಿ ಅವನ ಮನೆಯಲ್ಲಿ ಉಳಿದುಕೊಳ್ತಿದ್ದರು. ಇಂಥ ದೂರುಗಳ ಸರಮಾಲೆಗಳನ್ನು ಅರ್ಜಿಯಲ್ಲಿ ನಮೂದಿಸಿ ಫೈಲ್ ಮಾಡಲಾಗಿದೆ.

ಆದರೆ ಯುವ ಪತ್ನಿಯ ಸ್ಟೇಟ್ ಮೆಂಟ್ ಆಶ್ಚರ್ಯವಾಗಿದೆ. ಯುವನಿಗೆ ಬೇರೆ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಸ್ಯಾಂಡಲ್ ವುಡ್ ನಟಿಯೊಬ್ಬರ ಜತೆ ಯುವನಿಗೆ ಸಂಬಂಧ ಇತ್ತು ಎಂದು ಅವರು ರಿಪ್ಲೈ ಮಾಡಿದ್ದಾರೆ” ಎಂದು ತಿಳಿಸಿದರು. ಅಷ್ಟೇ ಅಲ್ಲ ಈ ವಿಷಯ ಇಲ್ಲ ಮಾಧ್ಯಮದವರಿಗೂ ಗೊತ್ತು ಅಂದಿದ್ದಾರೆ ಯುವ ಪತ್ನಿ ಶ್ರೀದೇವಿ ಭೈರಪ್ಪ.

ಕಾಂತಾರದ ಚಿತ್ರದ ನಟಿ ಸಪ್ತಮಿ ಗೌಡ ಹೆಸರು:

ಇವನ ಪರ ವಕೀಲರ ಆರೋಪಗಳಿಗೆ ಶ್ರೀದೇವಿ ಭೈರಪ್ಪ ಪ್ರತಿ ಉತ್ತರ ಕೊಟ್ಟಿದ್ದಾರೆ. ಯುವರಾಜ್ ಕುಮಾರ್ ಗೆ ಚಿತ್ರ ನಟಿ ಒಬ್ಬಳ ಮೇಲೆ ಸಂಬಂಧ ಇದೆ ಎಂದು ಆ ಸ್ಫೋಟಕ ಅಂಶವನ್ನು ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಹೇಳಿದ್ದಾರೆ. ಕಾಂತರಾ ಚಿತ್ರದ ನಟಿ ಸಪ್ತಮಿ ಗೌಡ ಜೊತೆ ಯುವನಿಗೆ ಸಂಬಂಧ ಇತ್ತು ಎಂಬ ಹೇಳಿಕೆ ನೀಡಿದ್ದಾರೆ ಯುವ ಪತ್ನಿ. ನಿಮ್ಮ ಆರೋಪಗಳಿಗೆ ಕಾನೂನಾತ್ಮಕವಾಗಿಯೇ ಉತ್ತರ ಕೊಡುತ್ತೇನೆ” ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ಯುವರಾಜ್ ಕುಮಾರ್ ಜೊತೆ ಯುವ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಿದ್ದರು. ಯುವರಾಜ್ ಕುಮಾರ್ ನ ಚೊಚ್ಚಲ ಸಿನಿಮ ಅದಾಗಿತ್ತು.

Ayodhya: ಬಿಜೆಪಿ ಸೋಲಿಸಿದಕ್ಕೆ ಮುಸ್ಲಿಂ ವೇಷ ಹಾಕಿ ಅಯೋಧ್ಯೆ ಹಿಂದೂಗಳನ್ನು ಟೀಕಿಸಿದ್ದ ವ್ಯಕ್ತಿ ಅರೆಸ್ಟ್ !!

Advertisement
Advertisement
Advertisement