Kalladka Prabhakar Bhat: ಆರ್.ಎಸ್.ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ರಿಂದ ಗೌರವ ಡಾಕ್ಟರೇಟ್ ನಿರಾಕರಣೆ
Kalladka Prabhakar Bhat: ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ವಿವಿ ನೀಡಲು ಉದ್ದೇಶಿಸಿದ್ದ ಗೌರವ ಡಾಕ್ಟರೇಟನ್ನು ಸ್ವೀಕರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ ಹಾಗೂ ಶಿಕ್ಷಣ, ಸಾಮಾಜಿಕ ಮತ್ತು ಧಾರ್ಮಿಕ ರಂಗಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ನಿಕಾರಣೆ ಮಾಡಿದ್ದಾರೆ.
ಸರ್ವ ಸಾಮಾನ್ಯ ವ್ಯಕ್ತಿಯಾಗಿದ್ದು ನಾನು, ಸಾಮಾನ್ಯ ಸ್ವಯಂಸೇವಕನಾಗಿದ್ದು, ಅತ್ಯಂತ ದೊಡ್ಡ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಾಗಿ ಆಯ್ಕೆ ಮಾಡಿರುವ ಪಟ್ಟಯಿಂದ ತಮ್ಮ ಹೆಸರನ್ನು ಕೈ ಬಿಡಬೇಕೆಂದು ವಿನೀತನಾಗಿ ಕೇಳಿಕೊಳ್ಳುವುದಾಗಿ ಅವರು ವಿಶ್ವವಿದ್ಯಾಲಯದ ಕುಲಪಪತಿ ನರಸಿಂಹ ಮೂರ್ತಿಯವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಎಲೆಮರೆ ಕಾಯಿಯಂತೆ ಕರ್ತವ್ಯ ನಿಭಾಯಿಸಬೇಕೆನ್ನುವುದು ನನ್ನ ಆಸೆ. ಸಂಘದಲ್ಲಿ ಓರ್ವ ಸಾಮಾನ್ಯ ಸ್ವಯಂಸೇವಕನಾಗಿ ಇರುವುದೇ ಒಂದು ಭಾಗ್ಯ ಎಂಬುವುದು ನನ್ನ ಭಾವನೆ. ಆದ್ದರಿಂದ ಈ ಶ್ರೇಷ್ಠ ಪ್ರಶಸ್ತಿ ಪಡೆಯುವ ಹೆಸರಿನ ಯೋಗ್ಯರ ಪಟ್ಟಿಯಿಂದ ನನ್ನ ಹೆಸರನ್ನು ಕೈಬಿಡಬೇಕೆಂದು ಪೂಜ್ಯ ಸದ್ಗುರುಗಳಲ್ಲಿ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.