ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Tirupati Balaji Temple: ಭಕ್ತರ ಆಸೆ ಈಡೇರಿಸುವ ತಿರುಪತಿ ತಿಮ್ಮಪ್ಪನ ಕಣ್ಣುಗಳು ಮುಚ್ಚಿರೋದಕ್ಕೆ ಬಲವಾದ ಕಾರಣ ಒಂದಿದೆ?

Tirupati Balaji Temple: ಭಕ್ತನ ಆಸೆ ಈಡೇರಿಸುವ ತಿರುಪತಿ ತಿಮ್ಮಪ್ಪನ ಕಣ್ಣುಗಳು ಮುಚ್ಚಿರೋದಕ್ಕೆ ಬಲವಾದ ಕಾರಣ ಒಂದಿದೆ.
11:10 AM Jun 02, 2024 IST | ಸುದರ್ಶನ್
UpdateAt: 11:10 AM Jun 02, 2024 IST
Advertisement

Tirupati Balaji Temple: ಭಾರತದಲ್ಲಿ ಒಂದೊಂದು ದೇವಾಲಯವು ತನ್ನದೇ ಆದ ಐತಿಹಾಸಿಕ ವೈಶಿಷ್ಯಗಳನ್ನು ಒಳಗೊಂಡಿದೆ. ಹಾಗೆಯೇ ಭಾರತದ ಶ್ರೀಮಂತ ದೇವಾಲಯವಾದ 'ಕಲಿಯುಗದ ವೈಕುಂಠ’ ಅಂತಾನೇ ಕರೆಯಲ್ಪಡುವ, ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಪತಿ ತಿಮ್ಮಪ್ಪನ ದೇವಸ್ಥಾನ (Tirupati Balaji Temple ) ಕ್ಕೆ ಪ್ರತಿ ನಿತ್ಯ ಲಕ್ಷಾಂತರ ಭಕ್ತರಿಂದ ಪೂಜೆಗೊಳ್ಳುತ್ತದೆ. ವಿಶೇಷ ಅಂದರೆ ಭಕ್ತನ ಆಸೆ ಈಡೇರಿಸುವ ತಿರುಪತಿ ತಿಮ್ಮಪ್ಪನ ಕಣ್ಣುಗಳು ಮುಚ್ಚಿರೋದಕ್ಕೆ ಬಲವಾದ ಕಾರಣ ಒಂದಿದೆ.

Advertisement

ಹೌದು, ತಿರುಪತಿ ಬಾಲಾಜಿ ದೇವಾಲಯವು ವಿಷ್ಣುವಿನ ಒಂದು ರೂಪವಾದ ವೆಂಕಟೇಶ್ವರನಿಗೆ ಸಮರ್ಪಿತ. ಧಾರ್ಮಿಕ ನಂಬಿಕೆ ಪ್ರಕಾರ, ವೆಂಕಟೇಶ್ವರನು ತನ್ನ ಭಕ್ತರನ್ನು ಸಮಸ್ಯೆಗಳಿಂದ ರಕ್ಷಿಸಲು ಕಲಿಯುಗದಲ್ಲಿ ಅವತಾರ ತಾಳಿದನು. ನೀವು ಎಂದಾದರೂ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರೆ, ತಿಮ್ಮಪ್ಪನ ಕಣ್ಣುಗಳು ಮುಚ್ಚಿರೋದನ್ನು ಕಾಣಬಹುದು. ವೆಂಕಟೇಶ್ವರನ ಕಣ್ಣುಗಳ ಎದುರು ದೊಡ್ಡದಾದ ಬಿಳಿ ನಾಮದಿಂದ ಮುಚ್ಚಲಾಗಿದೆ ಇದನ್ನ ನೀವು ನೋಡಿರಬಹುದು. ಆದರೆ ಅದು ಯಾಕೆ ಅನ್ನೋದು ಇಲ್ಲಿ ತಿಳಿಸಲಾಗಿದೆ.

ನಂಬಿಕೆ ಪ್ರಕಾರ, ವೆಂಕಟೇಶ್ವರನು ತನ್ನ ಭಕ್ತರನ್ನು ಸಮಸ್ಯೆಗಳಿಂದ ರಕ್ಷಿಸಲು ಕಲಿಯುಗದಲ್ಲಿ ಅವತರಿಸಿದ. ಭಗವಾನ್ ವೆಂಕಟೇಶ್ವರನೊಂದಿಗೆ (Venkateshwara) ಕಲಿಯುಗ ಕೊನೆಗೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಇಲ್ಲಿ ಹರಕೆ ಹೊತ್ತು ಎಷ್ಟೋ ಭಕ್ತರು ಬರುತ್ತಾರೆ. ಅಲ್ಲದೇ ತಿರುಪತಿ ತಿಮ್ಮಪ್ಪನ ಹುಂಡಿಗೆ ಚಿನ್ನ (Gold), ವಜ್ರ (Diamond), ಕೊಟ್ಯಾಂತರ ಹಣವನ್ನು ದಾನ ಮಾಡುವವರು ಇದ್ದಾರೆ.

Advertisement

ಇದನ್ನೂ ಓದಿ: ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ! 

ಧಾರ್ಮಿಕ ನಂಬಿಕೆಯ ಪ್ರಕಾರ, ಭಗವಾನ್ ವೆಂಕಟೇಶ್ವರನು ಕಲಿಯುಗದಲ್ಲಿ ತಿರುಪತಿ ದೇವಸ್ಥಾನದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಭಗವಾನ್ ವೆಂಕಟೇಶ್ವರನು ತನ್ನ ಪ್ರಕಾಶಮಾನವಾದ ಮತ್ತು ಶಕ್ತಿಯುತ ಕಣ್ಣುಗಳಿಗೆ ಹೆಸರುವಾಸಿ. ವೆಂಕಟೇಶ್ವರನ ಕಣ್ಣುಗಳಲ್ಲಿನ ಕಾಸ್ಮಿಕ್ ಶಕ್ತಿಯಿಂದ (cosmic power) ಭಕ್ತರು ಅವನ ಕಣ್ಣುಗಳನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ಆದ್ದರಿಂದ ವೆಂಕಟೇಶ್ವರನ ಕಣ್ಣುಗಳನ್ನು ಬಿಳಿ ಮುಖವಾಡದಿಂದ ಮುಚ್ಚಲಾಗುತ್ತದೆ ಎಂಬ ನಂಬಿಕೆ ಇದೆ. ಈ ಮುಖವಾಡವನ್ನು ಗುರುವಾರ ಮಾತ್ರ ಬದಲಾಯಿಸಲಾಗುತ್ತದೆ, ಆದ್ದರಿಂದ ಭಕ್ತರು ಈ ಸಮಯದಲ್ಲಿ ಒಂದು ಕ್ಷಣ ಅವರ ಕಣ್ಣುಗಳನ್ನು ನೋಡಬಹುದು.

ಆದ್ದರಿಂದ ಗುರುವಾರ, ವೆಂಕಟೇಶ್ವರನನ್ನು ಶ್ರೀಗಂಧದಿಂದ ಸ್ನಾನ ಮಾಡಿಸಲಾಗುತ್ತದೆ. ನಂತರ ಅವನ ವಿಗ್ರಹಕ್ಕೆ ಶ್ರೀಗಂಧವನ್ನು ಹಚ್ಚಲಾಗುತ್ತದೆ. ಭಗವಾನ್ ವೆಂಕಟೇಶ್ವರನ ಹೃದಯಕ್ಕೆ ಶ್ರೀಗಂಧವನ್ನು ಹಚ್ಚುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ (Lakshmi) ಚಿತ್ರ ಕಾಣಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:ಲೋಕಸಭಾ ಚುನಾವಣಾ ಸಮೀಕ್ಷೆ ಪ್ರಕಟ; ನರೇಂದ್ರ ಮೋದಿಯೇ ಮುಂದಿನ ಪ್ರಧಾನ ಮಂತ್ರಿ !

Related News

Advertisement
Advertisement