For the best experience, open
https://m.hosakannada.com
on your mobile browser.
Advertisement

Government Scheme: ಸರಕಾರಿ ಯೋಜನೆಯ ಹಣ ಬಂತು ಖಾತೆಗೆ; ಗಂಡನನ್ನು ಬಿಟ್ಟು 11 ಮಹಿಳೆಯರು ತಮ್ಮ ಪ್ರೇಮಿಗಳ ಜೊತೆ ಪರಾರಿ

Government Scheme: ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೊದಲ ಕಂತು ಜಮೆಯಾದ ನಂತರ ಪತಿಯನ್ನು ತೊರೆದು ಪ್ರೇಮಿಗಳೊಂದಿಗೆ ಓಡಿಹೋಗಿರುವ ಘಟನೆಯೊಂದು ನಡೆದಿದೆ.
05:00 PM Jul 07, 2024 IST | ಸುದರ್ಶನ್
UpdateAt: 05:00 PM Jul 07, 2024 IST
government scheme  ಸರಕಾರಿ ಯೋಜನೆಯ ಹಣ ಬಂತು ಖಾತೆಗೆ  ಗಂಡನನ್ನು ಬಿಟ್ಟು 11 ಮಹಿಳೆಯರು ತಮ್ಮ ಪ್ರೇಮಿಗಳ  ಜೊತೆ ಪರಾರಿ
Image credit: OplIndia
Advertisement

Government Scheme: ಇಲ್ಲಿನ ಒಂದು ಊರಿನ ಒಂಬತ್ತು ಗ್ರಾಮಗಳ 11 ಮಹಿಳೆಯರು ತಮ್ಮ ಖಾತೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೊದಲ ಕಂತು ಜಮೆಯಾದ ನಂತರ ಪತಿಯನ್ನು ತೊರೆದು ಪ್ರೇಮಿಗಳೊಂದಿಗೆ ಓಡಿಹೋಗಿರುವ ಘಟನೆಯೊಂದು ನಡೆದಿದೆ. ಈ ವಿಚಿತ್ರ ಘಟನೆ ನಡೆದಿರುವುದು ಯುಪಿಯ ಮಹಾರಾಜ್‌ಗಂಜ್ ಜಿಲ್ಲೆಯ ನಿಚ್ಲಾಲ್ ಬ್ಲಾಕ್‌ನಲ್ಲಿ.

Advertisement

Dark Chocolate: ಪೋಷಕರಿಗೊಂದು ತಜ್ಞರ ಸಲಹೆ ಇಲ್ಲಿದೆ ನೋಡಿ! ಮಗುವಿನ ಬುದ್ಧಿಶಕ್ತಿ ಬೆಳವಣಿಗೆಗೆ ಇದೊಂದು ಚಾಕೊಲೇಟ್ ಪ್ರತಿನಿತ್ಯ ಕೊಡಬೇಕಂತೆ!

ಇದೀಗ ಇವರ ಪತಿಯರು ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ವಿಷಯದ ಬಗ್ಗೆ ಅವರಿಗೆ ತಿಳಿಸಿದ್ದು, ಇದರಿಂದಾಗಿ ಎರಡನೇ ಕಂತು ಕಳುಹಿಸುವುದನ್ನು ತಡೆಯಲು ಬ್ಲಾಕ್ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Advertisement

ಘಟನೆಯ ವಿವರ;
2023-24ನೇ ಹಣಕಾಸು ವರ್ಷದಲ್ಲಿ ಮಹಾರಾಜ್‌ಗಂಜ್ ಜಿಲ್ಲೆಯ ನಿಚ್ಲಾಲ್ ಬ್ಲಾಕ್‌ನ 108 ಗ್ರಾಮಗಳಲ್ಲಿ 2350 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಜಿಲ್ಲೆಯ ತುತ್ತಿಬರಿ, ಶಿತಾಲಾಪುರ, ಚಾಟಿಯ, ರಾಮನಗರ, ಬಕುಲ್ದಿಹಾ, ಖೇಷರ, ಕಿಶುನಪುರ, ಮೇಧೌಳಿ ಗ್ರಾಮಗಳ 11 ಮಹಿಳಾ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ 40 ಸಾವಿರ ರೂ. ಬಂದಿದ್ದು, ಎಲ್ಲ 11 ಮಹಿಳೆಯರು ತಮ್ಮ ಪತಿಯನ್ನು ತೊರೆದು ಪ್ರಿಯಕರನ ಜೊತೆಗೆ ಓಡಿ ಹೋಗಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ತಮ್ಮ ಸ್ವಂತ ಮನೆ ಕನಸು ನನಸಾಗಬಹುದು ಎಂದು ಗಂಡಂದಿರು ಭರವಸೆ ಹೊಂದಿದ್ದರು, ಆದರೆ ಮನೆ ನಿರ್ಮಿಸುವ ಮೊದಲೇ ಮನೆ ನಾಶವಾಗಿದೆ.

ಮನೆಗಾಗಿ ಹಣ ಪಡೆದು ಮನೆ ನಿರ್ಮಿಸಿಕೊಳ್ಳದಿದ್ದರೆ ಇದೀಗ ಇಲಾಖೆ ಚುರುಕುಗೊಂಡಿದ್ದು, ಬ್ಲಾಕ್ ನ ಎಲ್ಲ ಗ್ರಾಮಗಳಲ್ಲಿ ತನಿಖೆ ಆರಂಭಿಸಲಾಗಿದೆ. ಈ ಸಂವೇದನಾಶೀಲ ಪ್ರಕರಣದಲ್ಲಿ, ಮಹಿಳೆಯರನ್ನು ಗುರುತಿಸಲಾಗಿದೆ ಎಂದು ನಿಚ್ಲಾಲ್ ಬ್ಲಾಕ್‌ನ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ಶಮಾ ಸಿಂಗ್ ಹೇಳಿದ್ದಾರೆ. ಈ ಕುರಿತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸೂಚನೆ ಬಂದರೂ ಮುಂದಿನ ಕ್ರಮ ಕೈಗೊಳ್ಳಲಾಗುವುದು.

Dinesh Gundu Rao: ಮಂಗಳೂರು ಅಂತಾರಾಷ್ಟ್ರೀಯ ಈಜುಕೊಳದಲ್ಲಿ ದಿನೇಶ್ ಗುಂಡೂರಾವ್ ಸ್ವೀಮ್ಮಿಂಗ್ – ಕಾಲೆಳೆದ ಬಿಜೆಪಿ, ಟಾಂಗ್ ಕೊಟ್ಟ ಸಚಿವ !!

Advertisement
Advertisement
Advertisement