For the best experience, open
https://m.hosakannada.com
on your mobile browser.
Advertisement

Congress Guarantees : ಪಂಚ ಗ್ಯಾರಂಟಿ ಫಲಾನುಭವಿಗಳಿಗೆ ಸಿಹಿ ಸುದ್ದಿ !!

Congress Guarantees : ಸಾರ್ವಜನಿಕರಿಗೆ ಆರ್ಥಿಕವಾಗಿ ದೊಡ್ಡ ಪ್ರಮಾಣದಲ್ಲಿ ಪ್ರಯೋಜನದ ಭರವಸೆಯನ್ನು ಚುನಾವಣೆಯನ್ನೇ ಭ್ರಷ್ಟಗೊಳಿಸಿವೆ.
09:53 AM May 28, 2024 IST | ಸುದರ್ಶನ್
UpdateAt: 10:10 AM May 28, 2024 IST
congress guarantees   ಪಂಚ ಗ್ಯಾರಂಟಿ ಫಲಾನುಭವಿಗಳಿಗೆ ಸಿಹಿ ಸುದ್ದಿ
Advertisement

Congress Guarantees : ಸಾರ್ವಜನಿಕರಿಗೆ ಆರ್ಥಿಕವಾಗಿ ದೊಡ್ಡ ಪ್ರಮಾಣದಲ್ಲಿ ಪ್ರಯೋಜನದ ಭರವಸೆಯನ್ನು ಚುನಾವಣೆಯನ್ನೇ ಭ್ರಷ್ಟಗೊಳಿಸಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ‘ಗ್ಯಾರಂಟಿ’ ಭರವಸೆಗಳು ಲಂಚದ ಆಮಿಷಕ್ಕೆ (ಕರಪ್ಟ್‌ ಪ್ರಾಕ್ಟೀಸಸ್‌) ಸಮಾನವಾಗಿದೆ. ಹೀಗಾಗಿ ಇಂಥ ಭರವಸೆ ನೀಡಿದ್ದ ಗೆದ್ದ ಜಮೀರ್‌(Jameer Ahamad Khan) ಆಯ್ಕೆ ರದ್ದುಗೊಳಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಗೊಳಿಸಿದೆ. ಈ ಮೂಲಕ ಕರ್ನಾಟಕದ ಗ್ಯಾರಂಟಿಗಳಿಗೆ(Congress Guarantees) ಸುಪ್ರೀಂಕೋರ್ಟಲ್ಲೂ ಜಯ ಸಿಕ್ಕಿದೆ.

Advertisement

ಇದನ್ನೂ ಓದಿ: PM Skill Development Scheme: ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಬಿಗ್ ಗುಡ್ ನ್ಯೂಸ್! ಕೋರ್ಸ್ ಕೊಡುವುದರ ಜೊತೆಗೆ ತಿಂಗಳಿಗೆ 8,000 ಕೂಡ ಸಿಗುತ್ತದೆ

ಹೌದು, ‘ಖಾನ್‌ ಅವರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ‘ಗ್ಯಾರಂಟಿ’ ಭರವಸೆಗಳು ಲಂಚದ ಆಮಿಷಕ್ಕೆ (ಕರಪ್ಟ್‌ ಪ್ರಾಕ್ಟೀಸಸ್‌) ಸಮಾನವಾಗಿದೆ. ಹೀಗಾಗಿ 1951ರ ಜನಪ್ರತಿನಿಧಿ ಕಾನೂನಿನ ಪ್ರಕಾರ ಭ್ರಷ್ಟ ಆಚರಣೆಯಲ್ಲಿ ತೊಡಗಿ ಭರವಸೆ ನೀಡಿ ಗೆದ್ದ ಅವರ ಆಯ್ಕೆ ರದ್ದು ಮಾಡಬೇಕು’ ಎಂದು ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರ ಶಶಾಂಕ ಜೆ. ಶ್ರೀಧರ್ ಎಂಬುವರು, ಕ್ಷೇತ್ರದ ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಬಿ.ಝಡ್. ಜಮೀರ್ ಅಹಮದ್ ಖಾನ್ ವಿರುದ್ಧ ಅರ್ಜಿ ಸಲ್ಲಿಸಿದ್ದರು.

Advertisement

ಇದನ್ನೂ ಓದಿ: Panchayat Season 3 Released: 'ಪಂಚಾಯತ್ ಸೀಸನ್‌ 3' ಇಂದು ಬಿಡುಗಡೆ; ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು?

ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನ್ಯಾ। ಸೂರ್ಯಕಾಂತ್ ಮತ್ತು ನ್ಯಾ। ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು, ಈ ಅರ್ಜಿ ವಜಾ ಮಾಡಿದ್ದು, ಅರ್ಜಿದಾರರು ತಮ್ಮ ಅರ್ಜಿಯಲ್ಲಿ ‘ರಾಜಕೀಯ ಪಕ್ಷವು ತನ್ನ ಪ್ರಣಾಳಿಕೆಯಲ್ಲಿನ ಬದ್ಧತೆಗಳು, ಅಂತಿಮವಾಗಿ ಸಾರ್ವಜನಿಕರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ಸಹಾಯಕ್ಕೆ ಕಾರಣವಾಗುತ್ತವೆ. ಇವು ಆ ಪಕ್ಷದ ಅಭ್ಯರ್ಥಿಯ ಭ್ರಷ್ಟ ಆಚರಣೆಗೆ ಕಾರಣವಾಗುತ್ತವೆ’ ಎಂದು ವಾದಿಸಿದ್ದಾರೆ. ಆದರೆ ಅವರ ವಾದದಲ್ಲಿ ಹುರುಳಿಲ್ಲ. ಚುನಾವಣಾ ಕಾನೂನುಗಳಲ್ಲಿ ಪ್ರಣಾಳಿಕೆಗಳಲ್ಲಿ ಪಕ್ಷಗಳು ನೀಡಿರುವ ಭರವಸೆಗಳನ್ನು ಭ್ರಷ್ಟ ಆಚರಣೆಗೆ (ಲಂಚದ ಆಮಿಷಕ್ಕೆ) ಸಮ ಎನ್ನಲಾಗದು. ಹಾಗಾಗಿ ಅರ್ಜಿದಾರರ ವಾದವನ್ನ ಒಪ್ಪಲಾಗದು. ಹಾಗಾಗಿ ಜಮೀರ್ ಅಹ್ಮದ್‌ ಅವರು ಲಂಚದ ಆಮಿಷವೊಡ್ಡಿ ಗೆದ್ದಿದ್ದಾರೆ ಎಂದು ಹೇಳಲಾಗದೆಂದು ಹೇಳಿದೆ.

ಅರ್ಜಿಯಲ್ಲಿ ಏನಿತ್ತು?:

ಶಶಾಂಕ್‌ ಸಲ್ಲಿಸಿದ್ದ ಅರ್ಜಿಯಲ್ಲಿ ‘ಎಲ್ಲಾ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರು. (ಗೃಹಲಕ್ಷ್ಮಿ), ಎಲ್ಲಾ ಮನೆಗಳಿಗೆ 200 ಯೂನಿಟ್ ವಿದ್ಯುತ್ (ಗೃಹಜ್ಯೋತಿ), ಪದವೀಧರ ಯುವಕರಿಗೆ ಪ್ರತಿ ತಿಂಗಳು 3,000 ರು. ಮತ್ತು ಡಿಪ್ಲೊಮಾ ಹೊಂದಿದವರಿಗೆ (ಯುವನಿಧಿ) 1,500 ರು., ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ (ಅನ್ನಭಾಗ್ಯ) ಹಾಗೂ ರಾಜ್ಯ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಮಹಿಯೆಯರಿಗೆ ಉಚಿತ ಪ್ರಯಾಣ ಒದಗಿಸುವ (ಶಕ್ತಿ) ಈ ಗ್ಯಾರಂಟಿಗಳು- ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭ್ರಷ್ಟ ಆಚರಣೆಗೆ (ಆಮಿಷಕ್ಕೆ) ಸಮ. ಏಕೆಂದರೆ ಸಾರ್ವಜನಿಕರಿಗೆ ಆರ್ಥಿಕವಾಗಿ ದೊಡ್ಡ ಪ್ರಮಾಣದಲ್ಲಿ ಪ್ರಯೋಜನದ ಭರವಸೆಯನ್ನು ಚುನಾವಣೆಯನ್ನೇ ಭ್ರಷ್ಟಗೊಳಿಸಿವೆ. ಹೀಗಾಗಿ ಇಂಥ ಭರವಸೆ ನೀಡಿದ್ದ ಗೆದ್ದ ಜಮೀರ್‌ ಆಯ್ಕೆ ರದ್ದುಗೊಳಿಸಬೇಕು’ ಎಂದು ವಾದಿಸಿದ್ದರು.

ಅಂದಹಾಗೆ ಈ ಮುನ್ನ ತಮ್ಮ ಇದೇ ಅರ್ಜಿಯನ್ನು ಕರ್ನಾಟಕ ಹೈಕೋರ್ಟು ಕಳೆದ ಏಪ್ರಿಲ್‌ನಲ್ಲಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಅವರು ಈ ಮೇಲ್ಮನವಿ ಸಲ್ಲಿಸಿದ್ದರು. ಆದರೀಗ ಸುಪ್ರೀಂ ಅಂಗಳದಲ್ಲೂ ಪಂಚ ಗ್ಯಾರಂಟಿಗಳು ಗೆದ್ದು ಬೀಗಿವೆ. ಈ ಮೂಲಕ ಗ್ಯಾರಂಟಿ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿ ದೊರೆತಿದೆ.

Advertisement
Advertisement
Advertisement