For the best experience, open
https://m.hosakannada.com
on your mobile browser.
Advertisement

Vasanth Bangera: ಬೆಳ್ತಂಗಡಿ ಮಾಜಿ ಶಾಸಕ, ಧೀಮಂತ ಜನನಾಯಕ ಕೆ.ವಸಂತ ಬಂಗೇರ ಅಸ್ತಂಗತ

Vasanth Bangera: ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಸಂತ ಬಂಗೇರ ಅವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ನಿಧನರಾಗಿದ್ದಾರೆ.
05:44 PM May 08, 2024 IST | ಸುದರ್ಶನ್
UpdateAt: 09:01 PM May 08, 2024 IST
vasanth bangera  ಬೆಳ್ತಂಗಡಿ ಮಾಜಿ ಶಾಸಕ  ಧೀಮಂತ ಜನನಾಯಕ ಕೆ ವಸಂತ ಬಂಗೇರ ಅಸ್ತಂಗತ

Vasanth Bangera: ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಸಂತ ಬಂಗೇರ ಅವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರರವರು ತಮ್ಮ 79 ವರ್ಷ ಪ್ರಾಯದಲ್ಲಿ ಇಂದು ವಿಧಿವಶರಾಗಿದ್ದಾರೆ. ಮೇ 8ರ ಬುಧವಾರ ಸಂಜೆ ಸುಮಾರು 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮಹಾನ್ ನಾಯಕನೊಬ್ಬನ ದೇಹಾಂತ್ಯವಾಗಿದೆ.

Advertisement

ಕೆ.ವಸಂತ ಬಂಗೇರ (79 ವರ್ಷ) ಅವರು ಮೇ. 8 (ಇಂದು) ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಇತ್ತೀಚೆಗೆ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದ ಕಾರಣ ಇಂದು ಮೃತ ಹೊಂದಿರು ಮಾಹಿತಿ ದೊರಕಿದೆ. ಮೇ.9 ರಂದು ಮುಂಜಾನೆ ಪಾರ್ಥೀವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ.

Advertisement

ಇದನ್ನೂ ಓದಿ: ಧೂಳಿನಿಂದ ಮೂಗು ಕಟ್ಟಿಕೊಂಡಿದೆ ಎಂದುಕೊಂಡಿದ್ದ ಮಹಿಳೆ ಮೂಗಲ್ಲಿ ನೂರಾರು ಹುಳಗಳು ಪತ್ತೆ

ಅಪ್ಪ ಕೇದೆ ಸುಬ್ಬ ಪೂಜಾರಿ ಮತ್ತು ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಇಂದು ಕೊನೆಯುಸಿರೆಳೆದಿದ್ದು, ನಾಳೆ ಮೇ 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಜನ ಸಂಘದ ಮೂಲಕ ರಾಜಕೀಯ ಜೀವನ ಶುರು ಮಾಡಿದ ಧೀಮಂತ ನಾಯಕ ವಸಂತ ಬಂಗೇರ ತದನಂತರ ಜನತಾದಳ ಆನಂತರ ಕಾಂಗ್ರೆಸ್ ಪಕ್ಷವನ್ನು ಸೇರಿ ಕಳೆದ ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಜನಪರ ಹೋರಾಟಗಾರ ಸತ್ಯ ನ್ಯಾಯದ ಪರ ಯಾವತ್ತು ನಿಲ್ಲಬಲ್ಲ ಮಾಸ್ ನಾಯಕತ್ವ ಹೊಂದಿದ್ದ ವಸಂತ ಬಂಗೇರ ಒಂದೊಮ್ಮೆ ಮುಖ್ಯಮಂತ್ರಿ ಹುದ್ದೆಯ ಕ್ಯಾಂಡಿಡೇಟ್ ಕೂಡ ಆಗಿದ್ದರು. ಇದೀಗ ಅಂತಹ ಮಹಾನ್ ನಾಯಕನ ದೇಹಾಂತ್ಯವಾಗಿದೆ.

Advertisement
Advertisement