Thalapathy Vijay: ವಿಜಯ್ಕಾಂತ್ ಅಂತಿಮ ದರ್ಶನಕ್ಕೆ ಬಂದ ನಟ ವಿಜಯ್ ಮೇಲೆ ಚಪ್ಪಲಿ ಎಸೆತ! ವೀಡಿಯೋ ವೈರಲ್!!
04:13 PM Dec 29, 2023 IST
|
ಮಲ್ಲಿಕಾ ಪುತ್ರನ್
UpdateAt: 04:13 PM Dec 29, 2023 IST
Advertisement
Thalapathy Vijay: ನಟ, ರಾಜಕಾರಣಿ ವಿಜಯ್ಕಾಂತ್ ಅವರ ಅಂತಿಮ ದರ್ಶನಕ್ಕೆಂದು ಬಂದ ದಳಪತಿ ವಿಜಯ್ ಅವರಿಗೆ ಕಿಕ್ಕಿರಿದು ತುಂಬಿದ ಜನರ ಮಧ್ಯೆ ದರ್ಶನ ಪಡೆದು ನಂತರ ತುಂಬಿದ ಜನಗಳ ಮಧ್ಯೆ ಬಹಳ ಕಷ್ಟದಿಂದ ಹೊರಗೆ ಬಂದು ತಮ್ಮ ಕಾರಿನ ಬಳಿ ಹೋದಾಗ, ಈ ವೇಳೆ ಯಾರೋ ಒಬ್ಬ ದುಷ್ಕರ್ಮಿ ವಿಜಯ್ ಮೇಲೆ ಚಪ್ಪಲಿ ಎಸೆದಿರುವ ಘಟನೆಯೊಂದು ನಡೆದಿದೆ.
Advertisement
ವೀಡಿಯೋದಲ್ಲಿ ಕಂಡಾಗೆ, ಚಪ್ಪಲಿ ವಿಜಯ್ ಅವರ ಬೆನ್ನಿಗೆ ತಾಗಿಗೊಂಡು ಮುಂದೆ ಹೋಗಿದೆ. ಹಿರಿಯ ನಟನೋರ್ವನಿಗೆ ಅಂತಿಮ ನಮನ ಸಲ್ಲಿಸಲು ಬಂದ ವ್ಯಕ್ತಿಯೊಟ್ಟಿಗೆ ಹೀಗೆ ನಡೆದುಕೊಳ್ಳುವುದು ಸರಿಯಲ್ಲ ಎಂದು ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳದ ರೀತಿಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
Advertisement