For the best experience, open
https://m.hosakannada.com
on your mobile browser.
Advertisement

ED Raid: ಸಚಿವರ ಆಪ್ತ ಕಾರ್ಯದರ್ಶಿಯ ಸೇವಕನ ಮನೆಯಲ್ಲಿ ಬೆಟ್ಟದಷ್ಟು ಹಣ ಪತ್ತೆ; ಬೆಚ್ಚಿಬಿದ್ದ ಅಧಿಕಾರಿಗಳು

ED Raid: ಅಮಾನತುಗೊಂಡಿರುವ ಮುಖ್ಯ ಇಂಜಿನಿಯರ್ ವೀರೇಂದ್ರ ರಾಮ್ ಮತ್ತು ಅವರ ನಿಕಟವರ್ತಿಗಳ ಸ್ಥಳಗಳಲ್ಲಿ ಇಡಿ ಕ್ರಮ ಕೈಗೊಳ್ಳಲಾಗುತ್ತಿದೆ.
10:13 AM May 06, 2024 IST | ಸುದರ್ಶನ್
UpdateAt: 10:35 AM May 06, 2024 IST
ed raid  ಸಚಿವರ ಆಪ್ತ ಕಾರ್ಯದರ್ಶಿಯ ಸೇವಕನ ಮನೆಯಲ್ಲಿ ಬೆಟ್ಟದಷ್ಟು ಹಣ ಪತ್ತೆ  ಬೆಚ್ಚಿಬಿದ್ದ ಅಧಿಕಾರಿಗಳು

ED Raid: ಲೋಕಸಭೆ ಚುನಾವಣೆ ನಡುವೆ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ (6 ಮೇ 2024) ಜಾರ್ಖಂಡ್‌ನ ರಾಂಚಿಯಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸುಮಾರು 6 ಸ್ಥಳಗಳ ಮೇಲೆ ದಾಳಿ ಮಾಡಿದೆ. ಮೂಲಗಳ ಪ್ರಕಾರ, ಅಮಾನತುಗೊಂಡಿರುವ ಮುಖ್ಯ ಇಂಜಿನಿಯರ್ ವೀರೇಂದ್ರ ರಾಮ್ ಮತ್ತು ಅವರ ನಿಕಟವರ್ತಿಗಳ ಸ್ಥಳಗಳಲ್ಲಿ ಇಡಿ ಕ್ರಮ ಕೈಗೊಳ್ಳಲಾಗುತ್ತಿದೆ.

Advertisement

https://twitter.com/i/status/1787317274535231860

ಇದನ್ನೂ ಓದಿ: Prajwal Revanna: ಅಪಹೃತ ಮಹಿಳೆಯಿಂದ ಇಂದು ಅಥವಾ ನಾಳೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು; ಹೆಚ್ಚಿತು ಪ್ರಜ್ವಲ್‌ ಸಂಕಷ್ಟ

Advertisement

ದಾಳಿಯ ವೇಳೆ ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್‌ ಆಲಂ ಅವರ ಗೃಹ ಸೇವಕ ಸಂಜೀವ್‌ ಲಾಲ್‌ ಅವರ ಮನೆಯಿಂದ ಇಡಿ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದೆ. ಬೆಳಗ್ಗೆ 9:30ರ ವೇಳೆಗೆ 20 ಕೋಟಿ ರೂ.ಗೂ ಹೆಚ್ಚು ಹಣ ದೊರಕಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ನೋಟುಗಳ ಎಣಿಕೆ ಕಾರ್ಯ ಇನ್ನೂ ನಡೆಯುತ್ತಿದೆ. ದಾಳಿ ವೇಳೆ ಇಡಿ ತಂಡ ಸೆಲ್ ಸಿಟಿ ಸೇರಿದಂತೆ ಹಲವೆಡೆ ತಲುಪಿದೆ. ಟೆಂಡರ್ ಕಮಿಷನ್ ಹಗರಣದಲ್ಲಿ ಮುಖ್ಯ ಎಂಜಿನಿಯರ್ ವೀರೇಂದ್ರ ರಾಮ್ ಅವರನ್ನು ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: Actress Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ನಟಿ ಸಮಂತಾ?

ANI ಪ್ರಕಾರ, ಜಾರಿ ನಿರ್ದೇಶನಾಲಯವು ರಾಂಚಿಯ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಪಿಎಸ್ ಸಂಜೀವ್ ಲಾಲ್ ಅವರ ಸೇವಕರಿಂದ ಭಾರಿ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ. ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವೀರೇಂದ್ರ ಕೆ ಅವರನ್ನು ಫೆಬ್ರವರಿ 2023 ರಲ್ಲಿ ಕೆಲವು ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಪ್ರಕರಣ ದಾಖಲಿಸಿದೆ.

Advertisement
Advertisement