ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

New Law implementation: ಜುಲೈ 1 ರಿಂದ ದೇಶದಾದ್ಯಂತ ಮೂರು ಹೊಸ ಕಾನೂನು ಜಾರಿ : ಅವು ಯಾವುವು ಗೊತ್ತಾ? : ಇಲ್ಲಿ ನೋಡಿ

New Law implementation: ಜುಲೈ 1ರಿಂದ ಮೂರು ಹೊಸ ಕಾಯ್ದೆಗಳು(3New Law) ಅನುಷ್ಠಾನಗೊಳ್ಳಲಿವೆ. ಎಲ್ಲಾ ಪೊಲೀಸ್‌ ಅಧಿಕಾರಿಗಳು(police officers) ನೂತನ ಕಾನೂನುಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು
11:19 AM May 18, 2024 IST | ಸುದರ್ಶನ್
UpdateAt: 11:27 AM May 18, 2024 IST
Advertisement

New Law implementation: ದೇಶದಲ್ಲಿ ಕಾನೂನುಗಳ ಪರಿಷ್ಕರಣೆ ಹಾಗೂ ಹೊಸ ಕಾನೂನುಗಳ ಜಾರಿಗೆ ಸಂಬಂಧಿಸಿದಂತೆ ಜುಲೈ 1ರಿಂದ ಮೂರು ಹೊಸ ಕಾಯ್ದೆಗಳು(3New Law) ಅನುಷ್ಠಾನಗೊಳ್ಳಲಿವೆ. ಎಲ್ಲಾ ಪೊಲೀಸ್‌ ಅಧಿಕಾರಿಗಳು(police officers) ನೂತನ ಕಾನೂನುಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್‌ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: H D Devegowda: ಪ್ರಜ್ವಲ್ ಓಕೆ, ರೇವಣ್ಣ ಯಾಕೆ? ಕೊನೆಗೂ ಮೌನ ಮುರಿದ ದೊಡ್ಡ ಗೌಡರ !!

ದೇಶದಾದ್ಯಂತ ಈಗಾಗಲೇ ಜಾರಿಯಲ್ಲಿರುವ ಸಿ.ಆರ್.ಪಿ.ಸಿ(CRPC), ಐಪಿಸಿ(IPC), ಮತ್ತು ಸಾಕ್ಷ್ಯ ಕಾಯ್ದೆಗಳ ಬದಲಾಗಿ(IEA), ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ, ಭಾರತೀಯ ಸಾಕ್ಷ್ಯ ಸಂಹಿತೆ ಹಾಗೂ ಭಾರತೀಯ ನ್ಯಾಯ ಸಂಹಿತೆಯನ್ನು ರಚಿಸಲಾಗಿದೆ.

Advertisement

ಇದನ್ನೂ ಓದಿ: Lucknow: ಪತ್ನಿಯನ್ನು ಸ್ಕಾರ್ಫ್‌ನಿಂದ ಹತ್ಯೆ ಮಾಡಿ, ಶವ ಮಡಿಲಲ್ಲಿಟ್ಟು ಸೆಲ್ಫಿ ತೆಗೆದು ಸಂಬಂಧಿಕರಿಗೆ ಕಳುಹಿಸಿ, ನೇಣಿಗೆ ಶರಣಾದ ಪತಿ

ಹೊಸ ಮತ್ತು ಹಳೆ ಸೆಕ್ಷನ್ ಗಳ ಬದಲಾವಣೆ ಹಾಗೂ ವ್ಯತ್ಯಾಸಗಳ ಬಗ್ಗೆ ತಿಳಿದುಕೊಳ್ಳಬೇಕು. ಜುಲೈ 1ರ ನಂತರ ಸಾರ್ವಜನಿಕರು ಠಾಣೆಗೆ ದೂರು ನೀಡಿದಲ್ಲಿ ನೂತನ ಕಾನೂನುಗಳ ಅನ್ವಯ ಅಧಿಕಾರಿಗಳು ಕೂಡಲೇ ದೂರು ಸ್ವೀಕರಿಸಿ ಎಫ್‌ಐಆ‌ರ್(FIR) ದಾಖಲಿಸಬೇಕು.

ಹೀಗಾಗಿ ಯಾವ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಬೇಕು ಎಂಬುದರ ಬಗ್ಗೆ ಪೊಲೀಸ್‌ ಅಧಿಕಾರಿಗಳು(Police officers) ಸಮಗ್ರ ಮಾಹಿತಿ ತಿಳಿದು ಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಫ್‌ಐಆ‌ರ್(FIR) ದಾಖಲಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್‌ ತಿಳಿಸಿದ್ದಾರೆ.

ಜನವರಿಯಲ್ಲಿ ಹೊಸ ಕೋಡ್ ಅಡಿಯಲ್ಲಿ ಕೆಲವು ನಿಬಂಧನೆಗಳ ವಿರುದ್ಧ ದೇಶಾದ್ಯಂತ ಚಾಲಕರ ಸಂಘಗಳು ಕಾನೂನು ವಾಪಸ್ ಪಡೆಯಬೇಕೆಂದು ಪ್ರತಿಭಟನೆ ನಡೆಸಿದ್ದವು, ಅದರ ಪ್ರಕಾರ,

ಯಾವುದೇ ಚಾಲಕನು ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ವ್ಯಕ್ತಿಯ ಸಾವಿಗೆ ಕಾರಣವಾದ ಮತ್ತು ಸ್ಥಳದಿಂದ ಪಲಾಯನ ಮಾಡುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. / ಅಥವಾ ದಂಡ ವಿಧಿಸಲಾಗುತ್ತದೆ. ಎಐಎಂಟಿಸಿ ಯೊಂದಿಗೆ ಸಮಾಲೋಚಿಸಿದ ನಂತರವೇ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಅಂತಹ ಸಂದರ್ಭಗಳಲ್ಲಿ ಕಠಿಣ ನಿಬಂಧನೆಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಕೇಂದ್ರವು ಎಲ್ಲಾ ಸಾರಿಗೆದಾರರಿಗೆ ಭರವಸೆ ನೀಡಿತ್ತು.

Advertisement
Advertisement