ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Actor Darshan: ನಟ ದರ್ಶನ್‌ ಜೊತೆ ಪತ್ನಿ ವಿಜಯಲಕ್ಷ್ಮೀಗೂ ಸಂಕಷ್ಟ; ಈ ಕೇಸಲ್ಲಿ ವಿಜಯಲಕ್ಷ್ಮೀ A1, ನಟ ದರ್ಶನ್‌ A3

Actor Darshan: ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ ಪ್ರಕರಣಕ್ಕೆ ಕುರಿತಂತೆ ಇದೀಗ ಎಫ್‌ಐಆರ್‌ ದಾಖಲಾಗಿದ್ದು, ನೋಟಿಸ್‌ ನೀಡಿದರೂ ದರ್ಶನ್‌ ವಿಚಾರಣೆಗೆ ಹಾಜರಾಗದ ಕಾರಣ ಚಾರ್ಜ್‌ಶೀಟ್‌ ಸಲ್ಲಿಸೋಕೆ ನಿರ್ಧರಿಸಲಾಗಿದೆ
09:31 AM Jun 18, 2024 IST | ಸುದರ್ಶನ್
UpdateAt: 09:31 AM Jun 18, 2024 IST
Advertisement

Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇವರ ಜೊತೆ ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೂ ಈ ಕೇಸ್‌ನಲ್ಲಿ ಸಂಕಷ್ಟ ಎದುರಾಗಿದೆ.

Advertisement

Govinda Karajola's statement: ಕಾಂಗ್ರೆಸ್ ನ 40 ಶಾಸಕರಿಂದ ರಾಜಿನಾಮೆ?! ರಾಜ್ಯದ ಬೊಕ್ಕಸದಲ್ಲಿ ದುಡ್ಡಿಲ್ಲದ್ದೇ ಕಾರಣ ?!

ಈ ಘಟನೆ ಕುರಿತು ಎರಡು ದಿನಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ. ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ ಪ್ರಕರಣಕ್ಕೆ ಕುರಿತಂತೆ ಇದೀಗ ಎಫ್‌ಐಆರ್‌ ದಾಖಲಾಗಿದ್ದು, ನೋಟಿಸ್‌ ನೀಡಿದರೂ ದರ್ಶನ್‌ ವಿಚಾರಣೆಗೆ ಹಾಜರಾಗದ ಕಾರಣ ಚಾರ್ಜ್‌ಶೀಟ್‌ ಸಲ್ಲಿಸೋಕೆ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

Advertisement

ಐದು ನೋಟಿಸ್‌ ನೀಡಿದ್ದರೂ ವಿಚಾರಣೆಗೆ ನಟ ದರ್ಶನ್‌ ಹಾಜರಾಗಿರದ ಕಾರಣ, ನಟ ದರ್ಶನ್‌ A3, ದರ್ಶನ್‌ ಪತ್ನಿ ವಿಜಯಲಕ್ಷ್ಮೀ A1, ಪ್ರಾಪರ್ಟಿ ಮ್ಯಾನೇಜರ್‌ ನಾಗರಾಜ್‌ A2 ಈ ಪ್ರಕರಣ ಆರೋಪಿಗಳಾಗಿದ್ದಾರೆ.

ದರ್ಶನ್‌ ತೋಟ ಮೈಸೂರು ಜಿಲ್ಲೆ ಟಿ.ನರಸೀರಪುದಲ್ಲಿದೆ. ಇಲ್ಲಿ ವಿಶೇಷ ಪ್ರಬೇಧದ ಬಾತುಕೋಳಿ ಸಾಕಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್‌ ಬಂಧಿಸಿಲ್ಲ ಅರಣ್ಯ ಇಲಾಖೆ. ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ವಿಚಾರಣೆಗೆ ಅವಕಾಶ ನೀಡಿದ್ದರು. ಆದರೆ ಇದೀಗ ಅರಣ್ಯ ಇಲಾಖೆ ಪ್ರಕರಣವನ್ನು ಮತ್ತೆ ಚುರುಕುಗೊಳಿಸಿದೆ.

Rahul Gandhi: ವಯನಾಡು ಸಂಸದ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ !!

Advertisement
Advertisement