ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

D.V.Sadananda Gowda: ಬೆಂಗಳೂರು ಉತ್ತರದಿಂದ ಮೈಸೂರಿಗೆ ಹೊರಟ ಡಿವಿಎಸ್‌; ಏನಿದು ಹೊಸ ವಿಷ್ಯ- ಕೈ ನಾಯಕನಿಗೆ ಜೈ ಎಂದರಾ ಡಿವಿಎಸ್‌

02:10 PM Mar 18, 2024 IST | ಹೊಸ ಕನ್ನಡ
UpdateAt: 02:10 PM Mar 18, 2024 IST
Advertisement

D.V.Sadananda Gowda: ಮಾಜಿ ಸಿಎಂ, ಹಾಲಿ ಬೆಂಗಳುರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಸದಾನಂದ ಗೌಡ ಮೈಸೂರಿನಿಂದ ಸ್ಪರ್ಧೆ ಮಾಡುತ್ತಾರಾ? ಎನ್ನುವ ಪ್ರಶ್ನೆಯೊಂದು ಇದೀಗ ಎಲ್ಲೆಡೆ ಹಬ್ಬಿದೆ.

Advertisement

ಇದನ್ನೂ ಓದಿ: Sadananda Gowda: ಕಾಂಗ್ರೆಸ್ ಸೇರ್ಪಡೆ ವಿಚಾರ - ಬಿಗ್ ಅಪ್ಡೇಟ್ ಕೊಟ್ಟ ಸದಾನಂದ ಗೌಡ

ತಮ್ಮ ಹುಟ್ಟು ಹಬ್ಬ ಆಚರಣೆಯ ಕಾರಣ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಡಿವಿಎಸ್‌ ಮಾತನಾಡುತ್ತಾ, ನಾಳೆ ನಾನು ಮಹತ್ವದ ವಿಷಯದ ಕುರಿತು ಹೇಳುತ್ತೇನೆ ಎಂದು ಹೇಳಿದ್ದರಿಂದ ಈ ಪ್ರಶ್ನೆ ಉಂಟಾಗಿದೆ ಎಂದು ಹೇಳಿದ್ದಾರೆ. ನನ್ನನ್ನು ಕಾಂಗ್ರೆಸ್‌ ನಾಯಕರು ಸಂಪರ್ಕ ಮಾಡಿದ್ದಾರೆಂದು ಡಿವಿಎಸ್‌ ಹೇಳಿದ್ದಾರೆ.

Advertisement

ಇದನ್ನೂ ಓದಿ: Terrible Accident: ಭೀಕರ ರಸ್ತೆ ಅಪಘಾತ; ಖ್ಯಾತ ನಟಿ ಸ್ಥಿತಿ ಗಂಭೀರ

ಬೆಂಗಳೂರು ಉತ್ತರದಲ್ಲಿ ನಿಮಗೆ ಟಿಕೆಟ್‌ ಎಂದು ಹೇಳಿ ಕೊನೇ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ. ಮನದಾಳದ ವಿಚಾರ ಹೇಳಿಕೊಳ್ಳಬೇಕು. ನಾಳೆ ಯಾವ ನಿರ್ಣಯ ಅಂತ ಈಗಲೇ ಹೇಳಿದರೆ ಏನೂ ನಾಳೆಗೆ ಉಳಿಯುವುದಿಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೂ ತಿಳಿದು ತಿಳಿದೂ ಹೀಗೆ ಮಾಡಿರುವುದು ಬೇಜಾರು ತಂದಿದೆ ಎಂದು ಮಾಜಿ ಸಿಎಂ ಡಿವಿಎಸ್‌ ಹೇಳಿದರು.

Advertisement
Advertisement