Dakshina Kannada (Bantwala): ಅನಾರೋಗ್ಯ ಕಾರಣ; ಚಿಕಿತ್ಸೆ ಫಲಕಾರಿಯಾಗದೆ 2ನೇ ತರಗತಿ ವಿದ್ಯಾರ್ಥಿನಿ ಮೃತ
02:41 PM Mar 20, 2024 IST
|
ಕೆ. ಎಸ್. ರೂಪಾ
Dakshina Kannada: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಶಾಲೆಯೊಂದರ 2ನೇ ತರಗತಿ ವಿದ್ಯಾರ್ಥಿನಿ ಇಂದು ಬುಧವಾರ (ಮಾ.20) ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ ಘಟನೆ ನಡೆದಿದೆ.
Advertisement
ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ತಲಪಾಡಿಯ ಸಫೀರ್ ಅಹ್ಮದ್ ಎಂಬುವವರ ಮಗಳು ಆಯಿಷಾ ಶಹಿಮ (7) ಎಂಬುವವಳೇ ಮೃತಪಟ್ಟ ವಿದ್ಯಾರ್ಥಿನಿ.
Advertisement
IAS Interesting Questions: ಭೂಮಿಯಲ್ಲಿ ತೂಗುವ 1 ಕೆಜಿ ವಸ್ತುವಿನ ತೂಕ ಚಂದ್ರನಲ್ಲಿ ಎಷ್ಟು ಕಿಲೋ ಇರುತ್ತದೆ ?
ಇದನ್ನೂ ಓದಿ: Physical Abuse: ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದು ತಬ್ಬಿಕೊಂಡ ಕಾಮುಕ
ಮೂರು ವಾರದ ಹಿಂದೆ ಮನೆಯಲ್ಲಿ ಕುಸಿದು ಬಿದ್ದಿದ್ದ ಶಹಿಮಾಳನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 2-3ದಿನ ಕೋಮಾ ಅವಸ್ಥೆಯಲ್ಲಿದ್ದ ಈಕೆ, ಹೆಚ್ಚಿನ ಚಿಕಿತ್ಸೆ ನೀಡಿದ್ದಾದ್ದರೂ ಸ್ವಲ್ಪ ಸ್ಪಂದನೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೂ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತ ಹೊಂದಿದ್ದಾಳೆ.
Advertisement
Next Article