Crime: ಮನೆ ಬಳಿ ಮೇಯಲು ಬಂದವು 18 ಹಸುಗಳು - ಎಲ್ಲಕ್ಕೂ 'ಆಸಿಡ್' ಎರಚಿ ವಿಕೃತಿ ಮೆರೆದ ಮುದುಕ!!
Crime: ಹೊಟ್ಟೆ ಪಾಡಿಗಾಗಿ ಮೇವು ಅರಸಿಕೊಂಡು ಬಂದ ಮೂಕ ಪ್ರಾಣಿಗಳಿಗೆ ಆಸಿಡ್ ಎರಚಿ ವಿಕೃತಿ ಮೆರೆದಿರುವ ಕೃತ್ಯ (Crime) ಬೆಳಕಿಗೆ ಬಂದಿದೆ. ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿಯ ಸೋಲದೇವನಹಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮನೆಯ ಪಕ್ಕದಲ್ಲಿ ಖಾಲಿಯಿದ್ದಂತ ಬಯಲು ಜಾಗದಲ್ಲಿ ಮೇಯಲು ಬರುತ್ತಿದ್ದಂತ ಹಸುಗಳ ಮೇಲೆ 72 ವರ್ಷದ ಜೋಸೆಫ್ ಗ್ರೇಸ್ ಎಂಬಾತ ಆಸಿಡ್ ಎರಚಿ ವಿಕೃತಿ ಮೆರೆದಿರೋದಾಗಿ ತಿಳಿದು ಬಂದಿದೆ.
ವೃದ್ಧನೊಬ್ಬನ ವಿಕೃತಿ ಕೃತ್ಯದಿಂದ 18 ಹಸುಗಳು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ವೃದ್ಧ ಟಾಯ್ಲೆಟ್ ಕ್ಲೀನ್ ಮಾಡೋದಕ್ಕೆ ಬಳಸಲಾಗುತ್ತಿದ್ದಂತ ಆಯಸಿಡ್ ಎರಚಿದ್ದರಿಂದಾಗಿ 18 ಹಸುಗಳು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಗಾಯಗೊಂಡ ಹಸುಗಳು ಹಾಲು ಕೊಡದೇ, ಗಾಯದಿಂದ ನರಳುತ್ತಿರೋದಾಗಿ ಹೇಳಲಾಗುತ್ತಿದೆ. ವೃದ್ಧ ಜೋಸೆಫ್ ಗ್ರೇಸ್ ಎರಚಿದಂತ ಆಯಸಿಡ್ ನಿಂದಾಗಿ ನಾಗಣ್ಣ, ರಾಜಣ್ಣ, ಗಂಗಮ್ಮ, ಮದನ್ ಸೇರಿದಂತೆ ಹಲವರಿಗೆ ಸೇರಿದಂತ 18 ಹಸುಗಳು ಗಾಯಗೊಂಡು ನರಳುತ್ತಿವೆ.
ಇದನ್ನು ಓದಿ: Article 370: ಆರ್ಟಿಕಲ್ 370 ರದ್ದು ವಿಚಾರ - ಸುಪ್ರೀಂ ತೀರ್ಪಿನ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ
ಈ ಹಿನ್ನಲೆಯಲ್ಲಿ ವೃದ್ಧನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಸು ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ವೃದ್ಧನನ್ನು ವಿಚಾರಣೆ ಮಾಡಿದಾಗ ಗ್ರೇಸ್ ಟಾಯ್ಲೆಟ್ ಕ್ಲೀನ್ ಮಾಡೋದಕ್ಕೆ ಬಳಸಲಾಗುತ್ತಿದ್ದಂತ ಆಯಸಿಡ್ ಎರಚಿರೋದಾಗಿ ಸತ್ಯ ಒಪ್ಪಿಕೊಂಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.