ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mumbai Indians : ತಂಡದ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮರನ್ನು ಯಾಕೆ ಇಳಿಸಿದ್ವಿ ಗೊತ್ತಾ?! ಶಾಕಿಂಗ್ ಕಾರಣ ಬಿಚ್ಚಿಟ್ಟ ಮುಂಬೈ ಇಂಡಿಯನ್ಸ್ !!

10:49 PM Dec 21, 2023 IST | ಹೊಸ ಕನ್ನಡ
UpdateAt: 10:06 AM Dec 22, 2023 IST
Advertisement

Mumbai Indians: 2024ರ IPL ತಯಾರಿ ಭರ್ಜರಿಯಾಗೇ ನಡೆಯುತ್ತಿದೆ. ಈ ಸಲದ IPL ಹಲವು ವಿಶೇಷಗಳಿಗೆ, ಕೆಲವು ಆಘಾತಗಳಿಗೆ ಕಾರಣವಾಗಿದೆ. ಅದರಲ್ಲಿ ತುಂಬಾ ದೊಡ್ಡ ಆಘಾತ ಎಂದರೆ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮ(Rohith Sharma) ಅವರನ್ನು ಕೆಳಗಿಳಿಸಿದ್ದು. ಇದು ರೋಹಿತ್ ಅವರ ಅಪಾರ ಅಭಿಮಾನಿಗಳಿಗೆ ನೋವುಂಟುಮಾಡಿದೆ. ಆದರೆ ಈ ನಡುವೆಯೇ ಮುಂಬೈ ಇಂಡಿಯನ್ಸ್ ತಂಡ ತಾನೇಕೆ ರೋಹಿತ್ ಶರ್ಮರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ್ವಿ ಎಂದು ಶಾಕಿಂಗ್ ಕಾರಣ ಬಿಚ್ಚಿಟ್ಟಿದೆ.

Advertisement

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ(Mumbai Indians) ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ನೇಮಿಸುವ ಮೂಲಕ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಜೊತೆಗೆ ರೋಹಿತ್ ಶರ್ಮ ಕೂಡ ತಂಡವನ್ನು ತೊರೆಯುತ್ತಾರೆ, RCB ಸೇರುತ್ತಾರೆ ಎಂದೆಲ್ಲಾ ಹೇಳಲಾಗಿತ್ತು. ಆದರೆ ಇದುವರೆಗೂ ತನ್ನ ನಡೆಯನ್ನು ತಂಡವು ಸಮರ್ಥಿಸಿಕೊಂಡಿರಲಿಲ್ಲ. ಅಥವಾ ತನ್ನ ಈ ನಡೆಗೆ ಯಾವ ಕಾರಣವನ್ನೂ ನೀಡಿರಲಿಲ್ಲ. ಆದರೀಗ ಈ ಬಗ್ಗೆ ಮೌನ ಮುರಿದ ತಂಡ ಕೊನೆಗೂ ಅದರ ಬಗ್ಗೆ ಮಾತನಾಡಿದೆ. ಇದಕ್ಕೆ ಸಂಬಂಧಿಸಿದಂತೆ ಮೇಜರ್ ಅಪ್ಡೇಟ್ ಒಂದನ್ನು ನೀಡಿದೆ.

ಇದನ್ನು ಓದಿ: Free bus Rules: ಫ್ರೀ ಬಸ್ಸಲ್ಲಿ ಓಡಾಡೋ ಮಹಿಳೆಯರಿಗೆ ಬಂತು ಹೊಸ ಟಫ್ ರೂಲ್ಸ್ - ಪಾಲಿಸದಿದ್ರೆ 500ರೂ ದಂಡ ಫಿಕ್ಸ್ !!

Advertisement

ಹೌದು, ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ ಕುರಿತು ಮುಂಬೈ ಇಂಡಿಯನ್ಸ್ ಪ್ರತಿಕ್ರಿಯಿಸಿದೆ ಎಂದು ತಿಳಿದು ಬಂದಿದೆ. ಡಿಸೆಂಬರ್ 19ರಂದು ನಡೆದ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ವೇಳೆ ಅಭಿಮಾನಿಯೊಬ್ಬರು ಈ ಬಗ್ಗೆ ಆಕಾಶ್ ಅವರ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆಗ ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆಕಾಶ್ ಚಿಂತಿಸಬೇಡಿ ಅವರು ಬ್ಯಾಟಿಂಗ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಈ ಮೂಲಕ ರೋಹಿತ್ ಎಲ್ಲೂ ಹೋಗಲ್ಲ, ನಾಯಕ ಸ್ಥಾನದಿಂದ ಇಳಿಸಿದರೂ ತಂಡದಲ್ಲೇ ಇರುತ್ತಾರೆ ಎಂಬುದು ಸ್ಪಷ್ಟವಾಗಿದೆ. ಸದ್ಯ ಈ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://x.com/mipaltan/status/1737113435354386484?t=rWvN7Wca0udP2ov14vSfnA&s=08

Advertisement
Advertisement