For the best experience, open
https://m.hosakannada.com
on your mobile browser.
Advertisement

Medical Negligence: ಹೊಟ್ಟೆ ನೋವೆಂದು ಕಿರುಚಾಡಿದರೂ ಡೋಂಟ್ ಕೇರ್ ಎಂದ ಡಾಕ್ಟರ್ಸ್ - ಬಾಣಂತಿ ಸಾವು

02:26 PM Dec 31, 2023 IST | ಅಶ್ವಿನಿ ಹೆಬ್ಬಾರ್
UpdateAt: 02:30 PM Dec 31, 2023 IST
medical negligence  ಹೊಟ್ಟೆ ನೋವೆಂದು ಕಿರುಚಾಡಿದರೂ ಡೋಂಟ್ ಕೇರ್ ಎಂದ ಡಾಕ್ಟರ್ಸ್   ಬಾಣಂತಿ ಸಾವು
Advertisement

Medical Negligence : ಮಗುವಿಗೆ ಜನ್ಮ ನೀಡಿದ ತಾಯಿಗೆ ರಾತ್ರಿ ಏಕಾಏಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು,ಈ ನಡುವೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ (Medical Negligence) ಮೃತಪಟ್ಟ (Death)ದಾರುಣ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru)ವರದಿಯಾಗಿದೆ.

Advertisement

ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಬೆಳಗ್ಗೆ ಹೆರಿಗೆಯಾಗಿದ್ದ ಬಾಣಂತಿ ಮಹಿಳೆ ರಾತ್ರಿ ವೇಳೆಗೆ ಮೃತಪಟ್ಟ ಘಟನೆ ನಡೆದಿದೆ ಎನ್ನಲಾಗಿದೆ.ಮೃತ ದುರ್ದೈವಿಯನ್ನು ರಂಜಿತ ಬಾಯಿ (21) ಎಂದು ಗುರುತಿಸಲಾಗಿದೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಂಜಿತ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಂಜಿತಾ ಶನಿವಾರ ಮಧ್ಯಾಹ್ನದ ವೇಳೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ. ಆದರೆ, ರಾತ್ರಿ ವೇಳೆಗೆ ಇದ್ದಕಿದ್ದಂತೆ ರಂಜಿತಾಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ನೋವಿನಿಂದ ನರಳುತ್ತಿದ್ದರು ಕೂಡ ಯಾವ ಸಿಬ್ಬಂದಿ ಕೂಡ ಬಾಣಂತಿಗೆ ಚಿಕಿತ್ಸೆ ನೀಡಿಲ್ಲ ಎನ್ನಲಾಗಿದೆ. ಸದ್ಯ, ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮೃತಪಟ್ಟಿರಿವ ಕುರಿತು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

Advertisement
Advertisement
Advertisement
Advertisement