For the best experience, open
https://m.hosakannada.com
on your mobile browser.
Advertisement

Bengaluru Crime News: ಬಾಲಕನ ಅಪಹರಣ ಮಾಡಿದ ಉದ್ಯಮಿ; 14 ಗಂಟೆಯಲ್ಲಿ ಖಾಕಿ ಬಲೆಗೆ ಬಿದ್ದ ಅಪಹರಣಕಾರ

Bengaluru Crime News: ಹಣಕ್ಕಾಗಿ ಬಾಲಕನ ಅಪಹರಿಸಿ ಪೊಲೀಸರ ಅತಿಥಿಯಾಗಿರುವ ಪ್ರಕರಣ ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿಯಲ್ಲಿ ನಡೆದಿದೆ.
10:26 AM Jun 21, 2024 IST | ಸುದರ್ಶನ್
UpdateAt: 10:26 AM Jun 21, 2024 IST
bengaluru crime news  ಬಾಲಕನ ಅಪಹರಣ ಮಾಡಿದ ಉದ್ಯಮಿ  14 ಗಂಟೆಯಲ್ಲಿ ಖಾಕಿ ಬಲೆಗೆ ಬಿದ್ದ ಅಪಹರಣಕಾರ
Advertisement

Bengaluru Crime News: ಜಾರ್ಖಂಡ್‌ನ ರಾಂಚಿ ಮೂಲದ ಉದ್ಯಮಿ ಜಸ್ಮಾವುದ್ದೀನ್‌ ಎಂಬಾತ ಜೀವನೋಪಾಯಕ್ಕೆಂದು ಅಪಾರ್ಟ್‌ಮೆಂಟ್‌ನಲ್ಲಿ ಕ್ಲೌಡ್‌ ಕಿಚನ್‌ ಆರಂಭಿಸಿದ್ದ. ಆದರೆ ಈ ಉದ್ಯಮದಲ್ಲಿ ಅಪಾರ ನಷ್ಟ ಅನುಭವಿಸಿದ್ದರಿಂದ ಬಾಲಕನೋರ್ವನನ್ನು ಅಪಹರಿಸಿದ್ದಾನೆ. ಹಣಕ್ಕಾಗಿ ಬಾಲಕನ ಅಪಹರಿಸಿ ಪೊಲೀಸರ ಅತಿಥಿಯಾಗಿರುವ ಪ್ರಕರಣ ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿಯಲ್ಲಿ ನಡೆದಿದೆ.

Advertisement

ಪೊಲೀಸರಿಗೆ ಮಾಹಿತಿ ತಿಳಿದು 14ಗಂಟೆಯೊಳಗೆ ಪೋಷಕರ ಮಡಿಲಿಗೆ ಬಾಲಕನನ್ನು ಸೇರಿಸಿ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಜಸ್ಮಾವುದ್ದೀನ್‌ ಶೇಖ್‌ (23 ವರ್ಷ) 9 ವರ್ಷದ ಬಾಲಕನ್ನು ಅಪಹರಿಸಿದ್ದು, ತನ್ನ ಅಪಾರ್ಟ್‌ಮೆಂಟ್‌ನಲ್ಲಿಟ್ಟಿದ್ದ. ನಂತರ ಬಾಲಕನ ಪೋಷಕರಿಗೆ ಮೊಬೈಲ್‌ ಕರೆ ಮೂಲಕ 10 ಲಕ್ಷ ರೂ. ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡಿದ್ದು, ನಂತರ ಮಗುವನ್ನು ಒಪ್ಪಿಸುತ್ತೇನೆ ಎಂದು ಹೇಳಿದ್ದ.

Advertisement

ಆದರೆ ಬಾಲಕನ ತಂದೆ 5 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಅಪಹರಣಕಾರ ತನ್ನ ಅಪಾರ್ಟ್‌ಮೆಂಟ್‌ನ ಅಂಗಡಿಯೊಂದರ ಬಳಿ ಬ್ಯಾಗ್‌ ಇಡಲು ಹೇಳಿದ್ದಾನೆ. ಮಫ್ತಿಯಲ್ಲಿದ್ದ ಪೊಲೀಸರು ಅಪಹರಣಕಾರ ಅಂಗಡಿ ಬಳಿ ಬಂದಾಗ, ಮಫ್ತಿಯಲ್ಲಿದ್ದ ಪೊಲೀಸರು ಕೂಡಲೇ ಆತನನ್ನು ಬಂಧನ ಮಾಡುತ್ತಾರೆ.

Advertisement
Advertisement
Advertisement