ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Belthangady: ಹೊಸವರ್ಷದ ಪಾರ್ಟಿಯಲ್ಲಿ ಕಿರಿಕ್ ! ಯುವಕನ ಮೂಗನ್ನೇ ಕಚ್ಚಿದ ಸ್ನೇಹಿತ

03:32 PM Jan 01, 2024 IST | ಹೊಸ ಕನ್ನಡ
UpdateAt: 05:07 PM Jan 01, 2024 IST

Belthangady: ಹೊಸ ವರ್ಷದ ಆಚರಣೆಯ ಪಾರ್ಟಿಯಲ್ಲಿ ಕ್ಷುಲ್ಲಕ ವಿಷಯವೊಂದಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿದ್ದು, ಕುಡಿದ ಮತ್ತಿನಲ್ಲಿ ಒಬ್ಬನ ಮೂಗು ಕಚ್ಚಿ ತುಂಡರಿಸಿದ ಘಟನೆಯೊಂದು ನಡೆದಿದೆ.

Advertisement

ಈ ಘಟನೆ ಬೆಳ್ತಂಗಡಿಯ ಪಿಲ್ಯದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಉಲ್ಪೆ ಎಂಬಲ್ಲಿನ ದೀಕ್ಷಿತ್‌ (28) ಎಂಬಾತನೇ ಮೂಗು ತುಂಡರಿಸಿಕೊಂಡ ಯುವಕ. ಆರೋಪಿ ರಾಕೇಶ್‌ ಎಂಬಾತನೇ ಈ ಕೃತ್ಯ ಎಸೆಗಿದ ವ್ಯಕ್ತಿ.

ರಾಕೇಶ್‌ ಮೂಲತಃ ಮೂಡಿಗೆರೆ ತಾಲೂಕಿನವಾಗಿದ್ದು, ಈತ ಪಿಲ್ಯ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಕೆಲಸಕ್ಕೆ ಹೋಗುತ್ತಿದ್ದ ಎನ್ನಲಾಗಿದೆ.

Advertisement

ಡಿ.31 ರಂದು ರಾತ್ರಿ ಮದ್ಯ ಸೇವಿಸಿ, ಕ್ಷುಲ್ಲಕ ವಿಷಯಕ್ಕೆ ಸ್ನೇಹಿತರಿಬ್ಬರ ಗಲಾಟೆ ನಡೆದಿದೆ. ನಂತರ ಗಲಾಟೆ ವಿಕೋಪಕ್ಕೆ ಹೋಗಿ ಈ ಘಟನೆ ನಡೆದಿದೆ. ರಾಕೇಶ್‌, ದೀಕ್ಷಿತ್‌ ನ ಮೂಗು ಕಚ್ಚಿ ತುಂಡು ಮಾಡಿದ್ದಾನೆ.

ಇದನ್ನೂ ಓದಿ: Education News: 5, 8 ಮತ್ತು 9 ನೇ ತರಗತಿ ಮೌಲ್ಯಾಂಕ ಪರೀಕ್ಷೆ; ಶಿಕ್ಷಣ ಇಲಾಖೆಯಿಂದ ಸುತ್ತೋಲೆ

ಕೂಡಲೇ ದೀಕ್ಷಿತ್‌ನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ವೇಣೂರು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Advertisement
Advertisement
Next Article