ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mangaluru: ಮಂಗಳೂರಿನಲ್ಲಿ ಮತ್ತೊಂದು ದರೋಡೆ; ವೃದ್ಧರನ್ನು ಬೆದರಿಸಿ, ಮನೆ ಮಾಲೀಕನ ಕಾರಿನೊಂದಿಗೆ ಗ್ಯಾಂಗ್‌ ಎಸ್ಕೇಪ್‌

Mangaluru: ಮಂಗಳೂರಿನಲ್ಲಿ ಮಂಗಳವಾರ (ಇಂದು) ಮುಂಜಾನೆ ಮತ್ತೊಂದು ದರೋಡೆ ಪ್ರಕರಣ ನಡೆದಿರುವ ಕುರಿತು ವರದಿಯಾಗಿದೆ. ಮಂಗಳೂರಿನ ಉರ್ವ ಕೊಟ್ಟಾರದ ಬಳಿ ಈ ಘಟನೆ ನಡೆದಿದೆ.
08:03 AM Jul 09, 2024 IST | ಸುದರ್ಶನ್
UpdateAt: 08:03 AM Jul 09, 2024 IST
Image Credit: Vijayakarnataka
Advertisement

Mangaluru: ಮಂಗಳೂರಿನಲ್ಲಿ ಮಂಗಳವಾರ (ಇಂದು) ಮುಂಜಾನೆ ಮತ್ತೊಂದು ದರೋಡೆ ಪ್ರಕರಣ ನಡೆದಿರುವ ಕುರಿತು ವರದಿಯಾಗಿದೆ. ಮಂಗಳೂರಿನ ಉರ್ವ ಕೊಟ್ಟಾರದ ಬಳಿ ಈ ಘಟನೆ ನಡೆದಿದೆ. ಆರೋಪಿಗಳು ದರೋಡೆ ಮಾಡಿ ಪರಾರಿಯಾಗಿದ್ದಾರೆ.

Advertisement

ಮಂಗಳವಾರ ಮುಂಜಾನೆ 3.30 ರ ಸುಮಾರಿಗೆ ನಾಲ್ಕು ಮಂದಿ ದರೋಡೆಕೋರರ ತಂಡವೊಂದು ಉರ್ವ ಕೊಟ್ಟಾರದ ಬಳಿ ಇರುವ ಮನೆಗೆ ಪ್ರವೇಶಿಸಿ ಈ ಮನೆಯಲ್ಲಿ ಹಿರಿಯ ನಾಗರಿಕರಿದ್ದಾರೆ. ಅವರ ಮಕ್ಕಳು ವಿದೇಶದಲ್ಲಿದ್ದು, ಮನೆ ಮಂದಿಗೆ ಮಾರಕಾಯುಧ ತೋರಿಸಿ ಬೆದರಿಸಿದ್ದು, ದರೋಡೆ ಕೃತ್ಯ ಮಾಡಿದ್ದಾರೆ. ಅನಂತರ ಕಾರಿನ ಕೀ ಪಡೆದು ಆ ಕಾರಿನಲ್ಲಿಯೇ ಉಡುಪಿಯತ್ತ ತೆರಳಿರುವ ಕುರಿತು ವರದಿಯಾಗಿದೆ.

ಮನೆ ಮಾಲೀಕರ ಕಾರು ಮೂಲ್ಕಿಯಲ್ಲಿ ಪತ್ತೆಯಾಗಿದೆ. ಹೆಜಮಾಡಿ ಟೋಲ್‌ ಗೇಟ್‌ ಮುನ್ನ ಕಾರು ನಿಲ್ಲಿಸಿದ ಅವರ ಮತ್ತೊಂದು ಕಾರಿನಲ್ಲಿ ಪರಾರಿಯಾಗಿರುವ ಶಂಕೆಯಿದೆ. ದರೋಡೆ ಮಾಡಿದ ಸೊತ್ತುಗಳ ಮೌಲ್ಯ ಇನ್ನೂ ತಿಳಿದು ಬಂದಿಲ್ಲ. ಕಾರಿನಲ್ಲಿ ಮೊಬೈಲ್‌ವೊಂದು ಪತ್ತೆಯಾಗಿದ್ದು, ಇದು ಯಾರ ಮೊಬೈಲ್‌ ಎನ್ನುವುದು ತಿಳಿದು ಬಂದಿದೆ. ದರೋಡೆಕೋರರು ಮೊಬೈಲನ್ನು ಅವಸರದಲ್ಲೇ ಕಾರಿನಲ್ಲೇ ಬಿಟ್ಟು ಓಡಿ ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಉರ್ವ ಪೊಲೀಸರು ಕೊಟ್ಟಾರದ ಮನೆಗೆ ತೆರಳಿದ್ದು ಪರಿಶೀಲನೆ ಮಾಡಿದ್ದಾರೆ. ಮುಲ್ಕಿ ಪೊಲೀಸರು ಕಾರನ್ನು ಪತ್ತೆ ಹಚ್ಚಿದ್ದು, ವಶಕ್ಕೆ ಪಡೆದುಕೊಂಇಡದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಮನೆಯ ಸುತ್ತಮುತ್ತ, ರಸ್ತೆ, ಹೆದ್ದಾರಿಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದಾರೆ.

Bangalore: ಸ್ಕೂಟರ್‌ನಲ್ಲಿ ಬಂದು ಕಾಲೇಜು ಹುಡುಗಿಯರಿಗೆ ತನ್ನ ಗುಪ್ತಾಂಗ ತೋರಿಸಿದ ವ್ಯಕ್ತಿಯ ಬಂಧನ

Advertisement
Advertisement