For the best experience, open
https://m.hosakannada.com
on your mobile browser.
Advertisement

Alia Assadi : ಅಂದು ಕಾಲೇಜಿಂದ ನನ್ನನ್ನು ಉಚ್ಛಾಟಿಸಿದ್ರಿ, ಇಂದು ಪಕ್ಷವೇ ನಿಮ್ಮನ್ನು ಉಚ್ಛಾಟಿಸಿದೆ - ರಘುಪತಿ ಭಟ್​ಗೆ ಕರ್ಮ ರಿಟರ್ನ್ಸ್ ಎಂದ ಅಲಿಯಾ

Alia Assadi: ಹಿಜಾಬ್ ವಿವಾದಿಂದ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ(Alia Assadi) ಕೌಂಟರ್‌ ಕೊಟ್ಟಿದ್ದಾರೆ.
06:41 AM May 29, 2024 IST | ಸುದರ್ಶನ್
UpdateAt: 06:42 AM May 29, 2024 IST
alia assadi   ಅಂದು ಕಾಲೇಜಿಂದ ನನ್ನನ್ನು ಉಚ್ಛಾಟಿಸಿದ್ರಿ  ಇಂದು ಪಕ್ಷವೇ ನಿಮ್ಮನ್ನು ಉಚ್ಛಾಟಿಸಿದೆ   ರಘುಪತಿ ಭಟ್​ಗೆ ಕರ್ಮ ರಿಟರ್ನ್ಸ್ ಎಂದ ಅಲಿಯಾ

Alia Assadi : ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಮಾಜಿ ಸಚಿವ ರಘುಪತಿ ಭಟ್‌(Raghupathi Bhat) ಅವರಿಗೆ ಇದೀಗ ಹಿಜಾಬ್ ವಿವಾದಿಂದ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ(Alia Assadi) ಕೌಂಟರ್‌ ಕೊಟ್ಟಿದ್ದಾರೆ.

Advertisement

https://x.com/Aliyassadi/status/1795339657984802853?s=08

ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಗೆ(Vidhana Parishath) ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಡುಪಿ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್‌ರನ್ನು ಬಿಜೆಪಿ(BJP) 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಈ ಬೆನ್ನಲ್ಲೇ ಅಲಿಯಾ ಅಸ್ಸಾದಿ ರಘುಪತಿ ಭಟ್ ಅವರಿಗೆ ಕರ್ಮ ರಿಟರ್ನ್ಸ್ ಎನ್ನು ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

Advertisement

ಇದನ್ನೂ ಓದಿ: Prajwal Revanna: ಮ್ಯೂನಿಕ್‍ನಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ !!

ಹೌದು, ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಆಲಿಯಾ 'ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ, ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿ. ರಘುಪತಿ ಭಟ್ ಅವರೇ, ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ, ನೀವು ಉಚ್ಚಾಟಿತ ವ್ಯಕ್ತಿ ಎಂದು ತಿರುಗೇಟು ನೀಡಿದ್ದಾರೆ.

ಹಿಂದೆ ನಡೆದಿದ್ದೇನು?

ಬಿಜೆಪಿ ಸರ್ಕಾರದ ಸಮಯದಲ್ಲಿ ಉಡುಪಿ ಹಾಗೂ ಮಂಗಳೂರಿನಲ್ಲಿ ಹುಟ್ಟಿಕೊಂಡ ಹಿಜಾಬ್ ಕಿಡಿ ರಾಜ್ಯವನ್ನು ವ್ಯಾಪಿಸಿತ್ತು. ಈ ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿರಾಕರಣೆ ಮಾಡಲಾಗಿತ್ತು. ಇದರಲ್ಲಿ ಮಾಜಿ ಶಾಸಕ ರಘುಪತಿ ಭಟ್ ಒತ್ತಡ ಹೇರಿದ್ದರು ಎಂದು ತಿಳಿದು ಬಂದಿತ್ತು. ಇದೀಗ ಈ ವಿಚಾರವಾಗಿ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ಟ್ವೀಟ್ ಮಾಡಿ ರಘುಪತಿ ಭಟ್ ಗೆ ತಿವಿದಿದ್ದಾರೆ.

ರಘುಪತಿ ಭಟ್ ಅವರ ಉಚ್ಛಾಟನೆಗೆ ಕಾರಣ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದ ರಘುಪತಿ ಭಟ್ ನೈಋತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಪಕ್ಷವು ಶಿವಮೊಗ್ಗದ(Shivmogga) ಖ್ಯಾತ ವೈದ್ಯ ಧನಂಜಯ ಸರ್ಜಿ(Dhananjaya Sarji) ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಈ ಹಿನ್ನೆಲೆಯಲ್ಲಿ ರಘುಪತಿ ಭಟ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೂ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಬಿಜೆಪಿ ಸೂಚಿಸಿತ್ತು. ಆದರೆ, ನಾಮಪತ್ರ ಹಿಂಪಡೆಯದೆ, ಪಕ್ಷದ ಮಾತನ್ನು ಕೂಡ ದಿಕ್ಕರಿಸಿ ಸ್ಪರ್ಧೆ ಮಾಡುತ್ತಿರುವ ರಘುಪತಿ ಭಟ್ ಅವರನ್ನು ಇದೀಗ ಉಚ್ಚಾಟನೆ ಮಾಡಲಾಗಿದೆ.

Advertisement
Advertisement
Advertisement