For the best experience, open
https://m.hosakannada.com
on your mobile browser.
Advertisement

Nikitha Thukral: ದರ್ಶನ್ ತಪ್ಪಿದ್ದರೂ ಕನ್ನಡದಿಂದ ಬ್ಯಾನ್ ಆಗಿದ್ದು ಮಾತ್ರ ನಿಕಿತಾ !! ಅಷ್ಟಕ್ಕೂ ಅಂದು ಆಗಿದ್ದೇನು?

Nikitha Thukral: ಚಿತ್ರರಂಗದಿಂದ ಬ್ಯಾನ್ ಆಗಿದ್ದು ನಿಕಿತಾ ಮಾತ್ರ. ಇದು ಯಾಕೆ? ಎಂಬ ಮಾತು, ಪ್ರಶ್ನೆಗಳು ಕೇಳಿಬರುತ್ತಿವೆ. ಹಾಗಿದ್ರೆ ಅಂದು ಆಗಿದ್ದೇನು? ಈ ನಿಕಿತಾ ಯಾರು?
08:41 AM Jun 15, 2024 IST | ಸುದರ್ಶನ್
UpdateAt: 08:44 AM Jun 15, 2024 IST
nikitha thukral  ದರ್ಶನ್ ತಪ್ಪಿದ್ದರೂ ಕನ್ನಡದಿಂದ ಬ್ಯಾನ್ ಆಗಿದ್ದು ಮಾತ್ರ ನಿಕಿತಾ    ಅಷ್ಟಕ್ಕೂ ಅಂದು ಆಗಿದ್ದೇನು
Advertisement

Nikitha Thukral: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ(Renukaswamy murder case) ಪ್ರಕರಣದಲ್ಲಿ ನಟ ದರ್ಶನ್(Actor Darshan)ಅವರ ಬಂದನದ ಬಳಿಕ ಗೋಮುಖ ವ್ಯಾಘ್ರದ ದರ್ಶನ್ ಅವರ ಒಂದೋಂದೇ ಬಣ್ಣ ಬಯಲಾಗುತ್ತಿದೆ. ಯಾರೂ ಊಹಿಸದ, ನಿರೀಕ್ಷೆ ಮಾಡಿರದ ಕೇಸ್ ಹೊರಬರುತ್ತಿವೆ. ಎಲ್ಲರೂ ಆರಾಧಿಸುತ್ತಿದ್ದ ನಿಜವಾದ ನಟನೇ ಇವನು ಎನ್ನುವಷ್ಟರ ಮಟ್ಟಿಗೆ ದರ್ಶನ್ ನಿಜರೂಪ ತೆರೆದುಕೊಳ್ಳುತ್ತಿದೆ. ಅಂತೆಯೇ ಇದೀಗ ನಟಿ ನಿಕಿತಾ(Nikitha Thukral) ವಿಚಾರ ಕೂಡ ಮುನ್ನಲೆಗೆ ಬಂದಿದ್ದು, ಅಂದು ದರ್ಶನ್ ತಪ್ಪಿದ್ದರೂ ಕನ್ನಡ ಚಿತ್ರರಂಗದಿಂದ ಬ್ಯಾನ್ ಆಗಿದ್ದು ನಿಕಿತಾ ಮಾತ್ರ. ಇದು ಯಾಕೆ? ಎಂಬ ಮಾತು, ಪ್ರಶ್ನೆಗಳು ಕೇಳಿಬರುತ್ತಿವೆ. ಹಾಗಿದ್ರೆ ಅಂದು ಆಗಿದ್ದೇನು? ಈ ನಿಕಿತಾ ಯಾರು? ಎಂಬ ಮಾಹಿತಿ ಬಗ್ಗೆ ಕೊಂಚ ಕಣ್ಣಾಡಿಸೋಣ.

Advertisement

Adhar Card Update: ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಸಮಯ ಮತ್ತೆ ಮುಂದೂಡಿಕೆ - ಸೆಪ್ಟೆಂಬರ್ 14ರ ವರೆಗೆ ಅವಕಾಶ

ಹೌದು, ಉಪೇಂದ್ರ, ಪನೀತ್ ರಾಜ್‌ಕುಮಾರ್, ಜಗ್ಗೇಶ್, ವಿ.ರವಿಚಂದ್ರನ್, ಸುದೀಪ್ ಜೊತೆಯಲ್ಲಿ ನಟಿಸಿದ್ದ ನಿಕಿತಾ ತುಕ್ರಾಲ್ ದರ್ಶನ್ ಅವರಿಗೂ ಸಹನಟಿಯಾಗಿದ್ದರು. ಆಗ ಅವರು ಕನ್ನಡದಲ್ಲಿ ಬಹಳ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ಆದರೆ ಕೆಲ ಸಮಯದಲ್ಲೇ ನಿಕಿತಾ ತುಕ್ರಾಲ್ ಅವರು ಕನ್ನಡ ಚಿತ್ರರಂಗದಿಂದ ಬ್ಯಾನ್ ಆಗಿದ್ದರು. ಸಹನಟನ ದಾಂಪತ್ಯ ಜೀವನದಲ್ಲಿ ಕೆಟ್ಟ ಪರಿಣಾಮ ಬೀರಿದ ಆರೋಪದ ಮೇಲೆ ನಿಕಿತಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಆನಂತರ ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನೆಲೆ ಚಲನಚಿತ್ರ ಮಂಡಳಿ (Kannada Cinema Industry) ತನ್ನ ಆದೇಶವನ್ನು ಹಿಂಪಡೆದುಕೊಂಡಿತ್ತು.

Advertisement

ಅಂದು ಏನಾಗಿತ್ತು?
2011ರಲ್ಲಿ ಪತ್ನಿ ಮೇಲೆ ಹಲ್ಲೆಗೈದು ದರ್ಶನ್ ಜೈಲು ಸೇರಿದ್ದ ವೇಳೆ ನಿಖಿತಾ ತುಕ್ರಾಲ್ ಹೆಸರು ಕೇಳಿ ಬಂದಿತ್ತು. ದರ್ಶನ್ ಹಾಗೂ ವಿಜಯಲಕ್ಷ್ಮಿ ಮಧ್ಯೆ ಕೌಟುಂಬಿಕ ಜಗಳ ಶುರುವಾದಾಗ ವಿಜಯಲಕ್ಷ್ಮಿ ನಟಿ ನಿಕಿತಾ ತುಕ್ರಾಲ್ ಕಡೆ ಬೆರಳು ತೋರಿಸಿದ್ದರು. ಈ ಬೆಳವಣಿಗೆ ನಂತರ ಇಂಡಸ್ಟ್ರಿ ನಟಿಯನ್ನು ಮೂರು ವರ್ಷಗಳ ಕಾಲ ಬ್ಯಾನ್ ಮಾಡಿತು. ಆದರೆ ದರ್ಶನ್ ಕುಟುಂಬದಲ್ಲಿ ನಡೆದಿದ್ದಕ್ಕೂ ತನಗೂ ಸಂಬಂಧ ಇಲ್ಲ ಎಂದಿದ್ದರು ನಿಕಿತಾ. ತನ್ನನ್ನು ಸುಮ್ಮನೆ ಈ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ ಎಂದಿದ್ದರು. ನಿಕಿತಾಳಿಂದ ಇಂಡಸ್ಟ್ರಿಗೆ ಅವಮಾನವಾಗಿದ್ದು ಸಹನಟನ ದಾಂಪತ್ಯದಲ್ಲಿ ಸಮಸ್ಯೆಯಾಗಿದೆ ಎಂದು ನಿರ್ಮಾಪಕರ ಸಂಘ ನಟಿಯನ್ನು ಬ್ಯಾನ್ ಮಾಡುವ ವಿಚಾರದಲ್ಲಿ ಒಗ್ಗಟ್ಟಾಗಿ ನಿಂತಿತ್ತು. ಆದರೆ ಇಂದು ಅದೇ ನಿರ್ಮಾಪಕರ ಸಂಘ, ಚಿತ್ರಮಂಡಳಿ ಎಲ್ಲವೂ ಸುಮ್ಮನಾಗಿವೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸುತ್ತಿವೆ.

ದರ್ಶನ್ ಜೊತೆ ನಿಖಿತಾ ಕೊನೆಯದಾಗಿ ನಟಿಸಿದ ಸಿನಿಮಾ:
ಈ ಘಟನೆಯ ಬಳಿಕ ಕೊನೆಯ ಬಾರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ದರ್ಶನ್‌ಗೆ ಜೊತೆಯಾಗಿ ನಿಖಿತಾ ತುಕ್ರಾಲ್ ಕಾಣಿಸಿಕೊಂಡಿದ್ದರು. ಸಿನಿಮಾ 100 ದಿನ ಪೂರೈಸಿದ ಸಂದರ್ಭ ಹಿನ್ನೆಲೆ ಚಿತ್ರತಂಡ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ನಿಖಿತಾ ತುಕ್ರಾಲ್ ಅವರನ್ನು ದರ್ಶನ್ ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದ ದೃಶ್ಯ ಕಂಡು ಬಂದಿತ್ತು.

ಇಂದು ನಿಖಿತಾ ಎಲ್ಲಿದ್ದಾರೆ?
ಮುಂಬೈ ಮೂಲದ ನಿಖಿತಾ ತುಕ್ರಾಲ್ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದು, ಸಾಂಸರಿಕ ಜೀವನದಲ್ಲಿ ಸಂತೋಷವಾಗಿದ್ದಾರೆ. ಕನ್ನಡದ ಪುನೀತ್ ರಾಜ್‌ಕುಮಾರ್ ಸೇರಿದಂತೆ ಸ್ಟಾರ್ ನಟರ ಜೊತೆ ನಿಖಿತಾ ತೆರೆಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಿಖಿತಾ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

ಅಂದಹಾಗೆ ಇಂದು ಜನರು 'ಕನ್ನಡದ ಖ್ಯಾತ ನಟಿಯಾಗಿ ಮಿಂಚುತ್ತಿದ್ದ ನಿಕಿಆ ಅವರನ್ನು ಬ್ಯಾನ್ ಮಾಡಿದಂತೆ ಇಂದು ದರ್ಶನ್ ಅವರನ್ನು ಬ್ಯಾನ್ ಮಾಡುತ್ತೀರಾ? ನಿಕಿತಾಗೆ ಒಂದು ನ್ಯಾಯ? ದರ್ಶನ್​ಗೆ ಒಂದು ನ್ಯಾಯಾನಾ ಎಂದು ಜನರು ಚರ್ಚಿಸುತ್ತಿದ್ದಾರೆ. ಆದರೆ ದರ್ಶನ್ ಬ್ಯಾನ್ ಮಾಡುವ ಬಗ್ಗೆ ಚಿತ್ರರಂಗದಿಂದ ಯಾವುದೇ ಅಪ್ಡೇಟ್ ಬಂದಿಲ್ಲ. ಪೋಲೀಸ್ ವರದಿ ಬಂದ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Shobha Karandlaje: ಯಡಿಯೂರಪ್ಪ ವಿರುದ್ಧ ಫೋಕ್ಸೋ ಪ್ರಕರಣ- ಪರಮಾಪ್ತೆ ಶೋಭಕ್ಕ ಹೇಳಿದ್ದಿಷ್ಟು !!

Advertisement
Advertisement
Advertisement