For the best experience, open
https://m.hosakannada.com
on your mobile browser.
Advertisement

Kangana Ranaut: ರೇಷ್ಮೆ ಸೀರೆ, ಕೂಲಿಂಗ್ ಗ್ಲಾಸ್ ಧರಿಸಿ ಅಯೋಧ್ಯೆಯಲ್ಲಿ ನೆಲ ಗುಡಿಸಿದ ಕಂಗನಾ!!

11:18 AM Jan 22, 2024 IST | ಹೊಸ ಕನ್ನಡ
UpdateAt: 11:27 AM Jan 22, 2024 IST
kangana ranaut  ರೇಷ್ಮೆ ಸೀರೆ  ಕೂಲಿಂಗ್ ಗ್ಲಾಸ್ ಧರಿಸಿ ಅಯೋಧ್ಯೆಯಲ್ಲಿ ನೆಲ ಗುಡಿಸಿದ ಕಂಗನಾ
Advertisement

Kangana Ranaut: ಜನವರಿ 22 ರಂದು ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕಾಗಿ ಕಂಗನಾ ರಣಾವತ್ (Kangana Ranaut) ಅಯೋಧ್ಯೆ ತಲುಪಿದ್ದು, ಭಾನುವಾರ ಅವರು ಅಯೋಧ್ಯೆಯಲ್ಲಿ ತಮ್ಮ ಚಟುವಟಿಕೆಯನ್ನು ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ಭಾನುವಾರ ಕಂಗನಾ ರಾಣಾವತ್‌ ಅವರು ಯಾಗದಲ್ಲಿ ಪಾಲ್ಗೊಂಡು, ಪವಿತ್ರ ಕ್ಷೇತ್ರದಲ್ಲಿ ನೆಲ ಗುಡಿಸಿ, ಪೊರಕೆಯ ಮೂಲಕ ದೇವಸ್ಥಾನದ ಆವರಣ ಗುಡಿಸಿ, ಸ್ವಚ್ಛಗೊಳಿಸಿದ ವೀಡಿಯೋ ವೈರಲ್‌ ಆಗಿದೆ.

Advertisement

ಇದನ್ನೂ ಓದಿ: Ram Lalla ಮೂರ್ತಿಗೆ ಕಲ್ಲು ನೀಡಿದ ರೈತನಿಗೆ ಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲ!?

Advertisement

ಈ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ, "ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಬಗ್ಗೆ ಇಡೀ ದೇಶವೇ ಭಾವುಕವಾಗಿದೆ. ಶತಮಾನಗಳ ನಂತರ ರಾಮಲಾಲಾ ತನ್ನ ಮನೆಗೆ ಮರಳುತ್ತಿದ್ದಾರೆ. ಇದು ಅತ್ಯಂತ ಅದೃಷ್ಟದ ದಿನ. ಅಯೋಧ್ಯೆಯಲ್ಲಿ ಉಪಸ್ಥಿತರಿದ್ದ ನಟಿ ಕಂಗನಾ ರಣಾವತ್, ಈ ದಿನವನ್ನು ವಿವರಿಸಲು ನಮ್ಮಲ್ಲಿ ಪದಗಳಿಲ್ಲ" ಎಂದು ಹೇಳಿದ್ದಾರೆ.

Advertisement
Advertisement
Advertisement